CrimeNEWSನಮ್ಮಜಿಲ್ಲೆನಮ್ಮರಾಜ್ಯ

KSRTC: 10-20 ರೂ. ಆಸೆಗೆ ಬಿದ್ದು ಚಿನ್ನಕಳವು ದೂರಿನಡಿ ಪೊಲೀಸರ ಅತಿಥಿಯಾದ ಸಂಸ್ಥೆ ಚಾಲಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲನಾ ಸಿಬ್ಬಂದಿಗಳಿಗೆ ಎಷ್ಟೆ ಎಚ್ಚರಿಕೆ ನೀಡಿದರು ಬುದ್ಧಿಕಲಿಯದ ಪರಿಣಾಮ ವಾರಸುದಾರರಿಲ್ಲದ ಲಗೇಜನ್ನು ಬಿಡಿಗಾಸಿನ ಆಸೆಗಾಗಿ ತೆಗೆದುಕೊಂಡು ಹೋದ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಆಭರಣ ಕಳವಾಗಿದೆ ಎಂಬ ದೂರು ದಾಖಲಾಗಿರುವ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ.

ಗುರುವಾರ (ಫೆ.29) ಶಿವಮೊಗ್ಗ – ಬೆಂಗಳೂರು ನಡುವೆ ಮಾರ್ಗಚರಣೆ ಮಾಡುತ್ತಿದ್ದ (KA-14 F-0041) ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಗೆ ತಿಪಟೂರು ಬಸ್‌ ನಿಲ್ದಾಣದಲ್ಲಿ ಓರ್ವ ಮಹಿಳೆ ಒಂದು ಪೇಪರ್‌ ಬ್ಯಾಗನ್ನು ಕೊಟ್ಟು ಇದರಲ್ಲಿ ಬಟ್ಟೆಗಳಿವೆ ಬೆಂಗಳೂರಿನಲ್ಲಿರುವ ನಮ್ಮ ಸಂಬಂಧಿಕರಿಗೆ ಜೋಪಾನವಾಗಿ ತಲುಪಿಸಿ, ಅವರು ಮೆಜೆಸ್ಟಿಕ್‌ನಲ್ಲಿ ಕಲೆಕ್ಟ್‌ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸರಿ ಆಯಿತು ಅಂತ ಬಸ್‌ ಚಾಲಕ ವಿಜಯನಾಯಕ್‌ ಆ ಬ್ಯಾಗ್‌ ತೆಗೆದುಕೊಂಡಿದ್ದಾರೆ. ಈ ವೇಳೆ ಅದರಲ್ಲಿ ಆಭರಣಗಳಿದ್ದ ಬಗ್ಗೆ ಚಾಲಕನಿಗೆ ಹೇಳಿಲ್ಲ. ಇನ್ನು ಬಸ್‌ ಚಾಲಕ ಆ ಬ್ಯಾಗ್‌ ತೆಗೆದುಕೊಂಡು ಆ ಮಹಿಳೆ ಕೊಟ್ಟ 10-20ರೂಪಾಯಿಯನ್ನು ತನ್ನ ಕಿಸೆಗೆ ಹಾಕಿಕೊಂಡು ಬಂದಿದ್ದಾನೆ.

ಇನ್ನು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆ ಮಹಿಳೆಯ ಕಡೆಯವರು ಬ್ಯಾಗನ್ನು ತೆಗೆದುಕೊಂಡು ನೋಡಿ ಅದರಲ್ಲಿದ್ದ ಸುಮಾರು ಎರಡು ಲಕ್ಷ ರೂ. ಬೆಲೆಬಾಳುವ ಚಿನ್ನದ ಎರಡು ಕೈ ಬಳೆಗಳಿದ್ದವು ಆದರೆ, ಈ ಬ್ಯಾಗಲ್ಲಿ ಇಲ್ಲ ಎಂದು ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಹಾಗೂ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆಯ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಸಂಸ್ಥೆಯ ವಾಹನದ ಚಾಲಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಇನ್ನು ವಿಚಾರಣೆ ನಡೆಸುತ್ತಿದ್ದಾರೆ. ಆದರೆ. ಈ ಮಧ್ಯೆ ದೂರು ಕೊಟ್ಟ ಮಹಿಳೆ ಚಾಲಕನಿಗೆ ಕೊಟ್ಟ ಪೇಪರ್‌ ಬ್ಯಾಗಲ್ಲಿ ಬಟ್ಟೆಗಳಿವೆ ಎಂದು ಹೇಳಿದ್ದೆ, ಚಿನ್ನದ ಬಳೆಗಳಿರುವ ಬಗ್ಗೆ ಹೇಳಿರಲಿಲ್ಲ ಎಂದು ಪೊಲೀಸರು ಮತ್ತು ಸಾರಿಗೆ ನಿಗಮದ ಅಧಿಕಾರಿಗಳಿಗೆ ಫೋನ್‌ನಲ್ಲೇ ಹೇಳಿದ್ದಾರೆ.

ಏಕೆ ಚಿನ್ನದ ಬಳೆಗಳಿರುವ ಬಗ್ಗೆ ಹೇಳಿಲ್ಲ ನೀವು ಎಂದು ಈ ಅಧಿಕಾರಿಗಳು ಕೇಳಿದ್ದಕ್ಕೆ ಚಾಲಕನಿಗೆ ಚಿನ್ನದ ಬಳೆಗಳಿವೆ ಎಂದು ಹೇಳಿದರೆ ಆತ ಎಲ್ಲಿ ಕಳವು ಮಾಡಿ ಬಿಡುತ್ತಾನೋ ಎಂದುಕೊಂಡು ಆತನಿಗೆ ಬಟ್ಟೆಗಳಿವೆ ಇದನ್ನು ಜೋಪಾನವಾಗಿ ತಲುಪಿಸಿ ಎಂದಷ್ಟೇ ಹೇಳಿದೆ ಎಂದು ತಿಳಿಸಿದ್ದಾರೆ.

ಆದರೆ, ಈಗ 2 ಲಕ್ಷ ರೂಪಾಯಿ ಮೌಲ್ಯದ ಚನ್ನದ ಬಳೆಗಳಿದ್ದವು ಆ ಬಳೆಗಳನ್ನು ಈತನೆ ಕದ್ದಿರಬಹುದು ಎಂದು ದೂರು ನೀಡಿದ್ದಾರೆ ಆ ಮಹಿಳೆ. ಚಾಲಕ ನನಗೆ ಅವರು ಬಟ್ಟೆಗಳಿಗೆ ಎಂದು ಹೇಳಿದ್ದರು ಅಷ್ಟೆ. ನಾನು ಆ ಬ್ಯಾಗನ್ನು ಬ್ಯಾನೆಟ್‌ ಮೇಲೆ ಇಟ್ಟು ಬಸ್‌ ಚಾಲನೆ ಮಾಡಿಕೊಂಡು ಬಂದೆ. ಈ ವೇಳೆ ಪ್ರಯಾಣಿಕರ ಬ್ಯಾಗ್‌ಗಳು ಬ್ಯಾನೆಟ್‌ ಮೇಲೆ ಇದ್ದವು ಒಂದೆರಡು ಬಾರಿ ಈ ಬ್ಯಾಗ್‌ ಕೆಳಕ್ಕೆ ಬಿದಿತ್ತು ಎಂದು ತಿಳಿದ್ದುದಾರೆ ಎಲ್ಲಲಾಗಿದೆ.

ಇನ್ನು ಮಹಿಳೆಯಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಚಾಲಕ ನನಗೆ ಈ ಬಗ್ಗೆ ಏನು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...