NEWSನಮ್ಮಜಿಲ್ಲೆನಮ್ಮರಾಜ್ಯ

ಎಚ್ಚೆತ್ತ KSRTC ಅಧಿಕಾರಿಗಳು: ಬಸ್‌ ಮಾಳಿಗೆ ಸೋರಿದರೆ ಡಿಸಿಗಳ ವಿರುದ್ಧ ಕ್ರಮ- ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ಘಟಕದ ಬಸ್‌ ಮೇಲ್ಛಾವಣಿ ಮಳೆ ಬಂದು ಸೋರುತ್ತಿದ್ದರೂ ಬಸ್ಸನ್ನು ಚಾಲಕ ಕೊಡೆ ಹಿಡಿದುಕೊಂಡು ಓಡಿಸಿದ್ದರ ಬಗ್ಗೆ ವಿಜಯಪಥ ವರದಿ ಮಾಡಿತ್ತು, ಈ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಆದೇಶವೊಂದನ್ನು ಹೊರಡಿಸಿದ್ದಾರೆ.

ಈಗ ಮಳೆಗಾಲ ಆರಂಭಗೊಂಡಿದ್ದು, ಸಂಸ್ಥೆಯಿಂದ ಕಾರ್ಯಚರಣೆಗೆ ನಿಯೋಜಿಸುವ ವಾಹನಗಳಲ್ಲಿ ಮಳೆ ನೀರು ಸೋರುವಿಕೆ ಇಲ್ಲದಂತೆ, ಸುಸ್ಥಿತಿಯ ವಾಹನಗಳನ್ನು ಕಾರ್ಯಚರಣೆಗೆ ನಿಯೋಜಿಸಬೇಕು ಎಂದು ನಿಗಮ ಕೇಂದ್ರ ಕಚೇರಿಯ ಯಾಂತ್ರಿಕ ಇಲಾಖೆಯ ಮುಖ್ಯ ಅಭಿಯಂತರರು ಇಂದು (ಮೇ 24) ಆದೇಶ ಮಾಡಿದ್ದಾರೆ.

ಈ ವರ್ಷ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಈಗಾಗಲೇ 11.5.2024 ರಂದು ನಿರ್ದೇಶಕರ (ಸಿ ಮತ್ತು ಜಾ) ಅಧ್ಯಕ್ಷತೆಯಲ್ಲಿ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಸಭೆಯಲ್ಲಿ ವಾಹನಗಳಲ್ಲಿ ಮಳೆ ನೀರು ಸೋರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ನಿಮಗೆ ತಿಳಿದ ವಿಷಯ.

ಆದಾಗ್ಯೂ ಹಲವಾರು ವಾಹನಗಳಲ್ಲಿ ಮಳೆ ನೀರು ಸೋರುವಿಕೆಯಾಗುತ್ತಿರುವ ಬಗ್ಗೆ ದೂರುಗಳು ಸ್ವೀಕರಿಸಲಾಗುತ್ತಿರುವುದು ವಿಷಾದನೀಯ ಸಂಗತಿ. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕಡ್ಡಾಯವಾಗಿ ಕಾರ್ಯರೂಪಕ್ಕೆ ತಂದು ಯಾವುದೇ ಪ್ರಯಾಣಿಕರ ವಾಹನಗಳಲ್ಲಿ ಮಳೆ ನೀರು ಸೋರುವಿಕೆ ಆಗದಂತೆ ಆಗತ್ಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತೊಮ್ಮೆ ಸೂಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೈಗೊಳ್ಳಬೇಕಾದ ಕ್ರಮಗಳೇನು? : 1) ಎಲ್ಲ ವಾಹನಗಳನ್ನು ಪರಿಶೀಲಿಸಿ, ವಾಹನಗಳ ಯಾವುದೇ ಭಾಗದಿಂದ ಅಂದರೆ ರೂಫ್, ವಿಂಡೋ ಗ್ಲಾಸ್, ತುರ್ತು ನಿರ್ಗಮನ ಬಾಗಿಲು, ಟಾಪ್ ವೆಂಟಿಲೇಟರ್ ಮತ್ತು ಪ್ರಯಾಣಿಕರ ಬಾಗಿಲುಗಳಿಂದ ಮಳೆ ನೀರು ಸೋರುವಿಕೆಯಾಗದಂತೆ ತಡೆಗಟ್ಟಬೇಕು.

2) ವಾಹನಗಳಲ್ಲಿ ರೂಫ್‌ ಲೀಕೇಜ್‌ ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ವಾಹನವನ್ನು ಕಾರ್ಯಚರಣೆಗೆ ನೀಡದೆ, Cold Applied Self- Adhesive polymer modified Bituminous Composite membrane with Aluminium Foil at the top felt ಅನ್ನು ಅಂಟಿಸಿ ದೃಢೀಕರಿಸಿಕೊಳ್ಳಬೇಕು.

3) ವಾಹನಗಳಲ್ಲಿ ಕಿಟಕಿ ಗಾಜುಗಳು ಮತ್ತು ಲೂವರ್‌ ಗಾಜುಗಳು ಕಡ್ಡಾಯವಾಗಿ ಇರಬೇಕು. ಕಿಟಕಿ ಗಾಜುಗಳ ರೈಲಿಂಗ್ಸ್‌, ಫೆಲ್ಟ್‌ ಮತ್ತು ವಿಂಡೋ ಹ್ಯಾಚಸ್ ಸುಸ್ಥಿತಿಯಲ್ಲಿರಬೇಕು.

4) ಟಾಪ್ ವೆಂಟಿಲೇಟರ್ ಸುಸ್ಥಿತಿಯಲ್ಲಿರಬೇಕು. ರಿಟರ್ನ್ ಗ್ಯಾಸ್ ಸ್ಟ್ರಿಂಗ್ ಉತ್ತಮವಾಗಿದ್ದು, ಪೂರ್ಣವಾಗಿ ವೆಂಟಿಲೇಟರ್ ತೆರೆಯಲು ಹಾಗೂ ಮುಚ್ಚಲು ಸಾಧ್ಯವಾಗುವಂತಿರಬೇಕು.

5) ವಾಹನಗಳ ವೈಪರ್, ಹೆಡ್ ಲೈಟ್, ಇಂಡಿಕೇಟರ್ ಲೈಟ್, ಪಾರ್ಕಿಂಗ್ ಲೈಟ್ ಸದಾಕಾಲ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತಿರಬೇಕು.

ವಾಹನದಲ್ಲಿ ಮಳೆ ನೀರು ಸೋರುವಿಕೆಯನ್ನು ಕಡ್ಡಾಯವಾಗಿ ಪರಿಶೀಲಿಸಿ, ಸರಿಪಡಿಸುವುದರ ಜತೆಗೆ ಚಾಲಕರು ತಮ್ಮ ಲಾಗ್ ಶೀಟ್ ದೋಷಪಟ್ಟಿಯಲ್ಲಿ ಬರೆಯುವ ದೋಷಗಳನ್ನು/ ಮಾರ್ಗದಿಂದ ಬರುವ ವಾಹನಗಳ ನಿರ್ವಾಹಕರನ್ನು ಮಾತನಾಡಿಸಿ, ಮಳೆ ನೀರು ಸೋರುವಿಕೆಯ ಬಗ್ಗೆ ನೈಜ ಮಾಹಿತಿ ಪಡೆದು ಅಗತ್ಯ ದುರಸ್ಥಿ ಮಾಡಬೇಕು.

ಒಟ್ಟಾರೆ ಮಳೆ ನೀರು ಸೋರುವಿಕೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಆಗುವ ಕಸಿವಿಸಿ/ ತೊಂದರೆಯನ್ನು ಅಲ್ಲದೇ ಅಪಘಾತ/ ಅನಾಹುತಗಳನ್ನು ನಿಯಂತ್ರಿಸಲು ಮಳೆ ನೀರು ಸೋರುವಿಕೆ ಇಲ್ಲದ ಸುಸ್ಥಿತಿಯ ವಾಹನಗಳನ್ನು ಸಾರ್ವಜನಿಕ ಪ್ರಯಾಣಿಕರ ಸುಗಮ ಸಾರಿಗೆ ವ್ಯವಸ್ಥೆಗೆ ನಿಯೋಜಿಸುವಂತೆ ಈ ಮೂಲಕ ತಿಳಿಸಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ಮಳೆ ನೀರು ಸೋರುವಿಕೆಯ ದೋಷ ಕಂಡುಬಂದು ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲವಾಗಿ, ದೂರುಗಳು ಬಂದಲ್ಲಿ ಸಂಬಂಧಪಟ್ಟವರನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಯಾಂತ್ರಿಕ ಅಭಿಯಂತರರು ಹೊರಡಿಸಿರುವ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ