CRIMENEWSVideosನಮ್ಮಜಿಲ್ಲೆನಮ್ಮರಾಜ್ಯ

KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕರಿಸಿ

youtube placeholder image
ವಿಜಯಪಥ ಸಮಗ್ರ ಸುದ್ದಿ
  • ಸ್ಟಾಫ್‌ ಅಂತ ಸುಳ್ಳು ಹೇಳುವ ಕಿಡಿಗೇಡಿಗಳ ಪತ್ತೆಗೆ ನಿಮ್ಮ ಸಹಕಾರವು ಅತ್ಯಗತ್ಯ

ಬೆಂಗಳೂರು: ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಕೆಲ ಕಿಡಿಗೇಡಿಗಳು ನಾವು ಸ್ಟಾಫ್‌ ಎಂದು ಹೇಳಿಕೊಂಡು ಫ್ರೀಯಾಗಿ ಪ್ರಯಾಣಿಸುವ ಕತ್ತರ್ನಾಕ್‌ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಈ ವೇಳೆ ನಿರ್ವಾಹಕರು ಕೂಡ ನಮ್ಮ ಸ್ಟಾಫ್‌ ಅಂತ ಅವರ ಬಳಿ ಐಡಿ ಕಾರ್ಡ್‌ ಕೂಡ ಕೇಳುವುದಿಲ್ಲ.

ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸಂಸ್ಥೆಯ ನೌಕರರಲ್ಲದಿದ್ದರೂ ನಾವು ಸ್ಟಾಫ್‌ ಅಂತ ಹೇಳಿ ಟಿಕೆಟ್‌ ಪಡೆಯದೆ ಪ್ರಯಾಣಿಸುತ್ತಾರೆ. ಈಗ ಒಬ್ಬ ಕತ್ತರ್‌ನಾಕ್‌ ಹೀಗೆ ಮಾಡಿದ್ದು ತನಿಖಾಧಿಕಾರಿಗಳು ಬಂದು ತನಿಖೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದು ನಿರ್ವಾಹಕರಿಗೆ ಕೈ ಮುಗಿದ್ದು ಬೇಡಿಕೊಂಡಿದ್ದಾನೆ. ಆದರೆ ತನಿಖಾಧಿಕಾರಿಗಳು ಅವರ ಕೆಲಸ ಮಾಡದೆ ಬಿಟ್ಟಾರೆಯೇ. ನಿರ್ವಾಹಕರಿಗೂ ಕರ್ತವ್ಯ ಲೋಪದಡಿ ಮೆಮೋ ಕೊಟ್ಟಿದ್ದಾರೆ.

ಇದು ಹೀಗೆ ಮುಂದೆ ನಡೆಯಬಾರದು ಎಂಬ ದೃಷ್ಟಿಯಿಂದ ಎಲ್ಲ ನಿರ್ವಾಹಕರು ಎಚ್ಚೆತ್ತುಕೊಂಡಿದ್ದು, ಅದರಲ್ಲಿ ಕೆಲ ಪ್ರಜ್ಞಾವಂತ ನೌಕರರು ಸಾರಿಗೆ ಸಂಸ್ಥೆಯ ಎಲ್ಲ ಆಡಳಿತ ಮತ್ತು ಚಾಲನಾ ಸಿಬ್ಬಂದಿಗಳಿಗೆ ಒಂದು ತರ್ತು ಸಲಹೆ ನೀಡಿದ್ದಾರೆ.

ಅದೇನೆಂದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವ ಕೆಲವು ಸಾರ್ವಜನಿಕರು ತಾವು ಸಂಸ್ಥೆಯ ನೌಕರರೆಂದು ಸುಳ್ಳು ಹೇಳಿಕೊಂಡು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಇಂತಹ ಘಟನೆಗಳಿಂದಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕರಿಗೆ ತೀವ್ರ ಮುಜುಗರ ಹಾಗೂ ಆರ್ಥಿಕ ನಷ್ಟದ ಭೀತಿ ಎದುರಾಗುತ್ತಿದೆ.

ಆದುದರಿಂದ, ಸಂಸ್ಥೆಯ ಶಿಸ್ತು ಮತ್ತು ಆದಾಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಕೆಳಗಿನ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋರಿದ್ದಾರೆ.

ನೌಕರರ ಗುರುತಿನ ಚೀಟಿ ಪ್ರದರ್ಶನ ಕಡ್ಡಾಯ: ಸಂಸ್ಥೆಯ ಯಾವುದೇ ವಿಭಾಗದ ಆಡಳಿತ ಮತ್ತು ಚಾಲನಾ ಸಿಬ್ಬಂದಿಗಳು ಬಸ್ಸಿನಲ್ಲಿ ಪ್ರಯಾಣಿಸುವಾಗ, ಕರ್ತವ್ಯದಲ್ಲಿರುವ ನಿರ್ವಾಹಕರು ಕೇಳಿದ ತಕ್ಷಣ ಗುರುತಿನ ಚೀಟಿ ತೋರಿಸಿ ಅಥವಾ ಸ್ವಯಂಪ್ರೇರಿತರಾಗಿ ತಮ್ಮ ಅಧಿಕೃತ ಗುರುತಿನ ಚೀಟಿಯನ್ನು (Original ID Card) ತೋರಿಸಿ ತಮ್ಮ ಗುರುತನ್ನು ದೃಢೀಕರಿಸಿಕೊಳ್ಳಬೇಕು.

ಕೆಲ ಕಿಡಿಗೇಡಿ ಸಾರ್ವಜನಿಕರು ನೌಕರರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು, ನೈಜ ನೌಕರರು ಗುರುತಿನ ಚೀಟಿ ತೋರಿಸುವುದು ಅತ್ಯಗತ್ಯವಾಗಿದೆ. ಇದು ನಿರ್ವಾಹಕರಿಗೆ ಕಳ್ಳಪ್ರಯಾಣಿಕರನ್ನು ಗುರುತಿಸಲು ಸಹಾಯ ಮಾಡುತ್ತದೆ.

ನಿರ್ವಾಹಕರು ನಮ್ಮ ಪರಿಚಯದವರು ಎಂದು ಹಾಗೆ ಕುಳಿತುಕೊಳ್ಳದೆ ಅಥವಾ ತಮ್ಮ ಗುರುತಿನ ಚೀಟಿ ಕೇಳಿದನೆಂದು ಕೋಪಗೊಳ್ಳದೆ, ನಾನೊಬ್ಬ ಈ ವಾಹನದಲ್ಲಿ ಪ್ರಯಾಣಿಕ ಅನ್ನುವುದನ್ನು ಗಮನದಲ್ಲಿಟ್ಟುಕೊಂಡು ತಾವೇ ಸ್ವಯಂ ಪ್ರೇರಿತರಾಗಿ id card ತೋರಿಸಿ.

ಇನ್ನು ತನಿಖಾಧಿಕಾರಿಗಳು ವಾಹನ ತಪಾಸಣೆಗೆ (Checking Squad) ಬಂದ ಸಂದರ್ಭದಲ್ಲಿ ಯಾವುದೇ ಅನಗತ್ಯ ಗೊಂದಲಗಳು ಉಂಟಾಗದಂತೆ ತಡೆಯಲು ಇದು ಏಕೈಕ ಮಾರ್ಗವಾಗಿದೆ.

ನಾವೆಲ್ಲರೂ ಒಂದೇ ಸಂಸ್ಥೆಯ ಕುಟುಂಬದವರಾಗಿದ್ದು, ಒಬ್ಬರಿಗೊಬ್ಬರು ಗೌರವ ನೀಡುವುದು ಮತ್ತು ಸಂಸ್ಥೆಯ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಆದುದರಿಂದ, ಎಲ್ಲ ನೌಕರ ಬಾಂಧವರು ಈ ಗಂಭೀರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ನಿರ್ವಾಹಕರೊಂದಿಗೆ ಸಹಕರಿಸಿ ಸಾರಿಗೆ ಸಂಸ್ಥೆಯ ಹಿತದೃಷ್ಟಿಯಿಂದ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಸಂಸ್ಥೆಯ ಎಲ್ಲ ನಿರ್ವಾಹಕ ಸಿಬ್ಬಂದಿಗಳ ಪರವಾಗಿ ಎಂದು ನಿಗಮದ ಪ್ರಜ್ಞಾವಂತ ನೌಕರರು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ? KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕ... ಗುಡ್‌ ನ್ಯೂಸ್‌: ಪೆಟ್ರೋಲ್ -ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತ KSRTC: ಮೆಜೆಸ್ಟಿಕ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್‌ ಭಸ್ಮ- ಅದೃಷ್ವಶಾತ್‌ ಕೂದಲೆಳೆ ಅಂತರದಲ್ಲೇ ಪ್ರಯಾಣಿಕರು ಪಾರ... ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ BMTC-KSRTC: ನಾಳೆ EPS ಪಿಂಚಣಿದಾರರ ಕನಿಷ್ಠ ಪಿಂಚಣಿ ₹7,500 ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ... KSRTC ಹಾವೇರಿ: ಮಾ.29ರಂದು ನೌಕರರ ಸಮಸ್ಯೆ, ಬೇಡಿಕೆ ಈಡೇರಿಕೆ ಕುರಿತು ಹೋರಾಟ ರೂಪಿಸಿಲು ಕೂಟದ ಪದಾಧಿಕಾರಿಗಳ ಸಭೆ KSRTC ಬಸ್-ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ- ಬಳಿಕ ಗಲಾಟೆ ಚಾಲಕ, ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಸ್ವಪಕ್ಷೀಯ ಸಚಿವರೇ ಸರ್ಕಾರಿ ಜಮೀನು ನುಂಗಿದ್ದಾರೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ