NEWSನಮ್ಮಜಿಲ್ಲೆನಮ್ಮರಾಜ್ಯ

ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಜತೆಗೆ ತೀವ್ರ ಅಭಾವವೂ ಸೃಷ್ಟಿಯಾಗಿದೆ. ಗ್ಯಾಸ್ ಬುಕ್ ಮಾಡಿದರೂ ಹಲವು ದಿನಗಳವರೆಗೆ ಜನರಿಗೆ ಸಿಲಿಂಡರ್ ಸಿಗುತ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಕಾಳ ಸಂತೆಯಲ್ಲಿ ಭಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಈ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಜತೆಗೆ ತೀವ್ರ ಅಭಾವವೂ ಸೃಷ್ಟಿಯಾಗಿರುವುದೆ. ಈ ಮಧ್ಯೆ ನಿಮ್ಮ ಮನೆಬಾಗಿಲಿಗೆ ಗ್ಯಾಸ್ ಹೊತ್ತು ತರುವ ಡೆಲಿವರಿ ಬಾಯ್‌ಗೆ ಒಂದು ಸಿಲಿಂಡ‌ರ್ ಮೇಲೆ ಎಷ್ಟು ರೂಪಾಯಿ ಸಿಗುತ್ತದೆ ಎಂಬ ಈ ಪ್ರಶ್ನೆಯೂ ನಿಮ್ಮ ತಲೆಹೊಕ್ಕಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಂಪನಿಗೆ ಸಿಗುವ ಕಮಿಷನ್ ಎಷ್ಟು?: ಮೊದಲಿಗೆ ಗ್ಯಾಸ್ ವಿತರಿಸುವ ಡಿಸ್ಟ್ರಿಬ್ಯೂಟರ್ ಕಂಪನಿಗೆ/ ವಿತರಕರಿಗೆ ಒಂದು ಸಿಲಿಂಡರ್ ಮೇಲೆ ಎಷ್ಟು ಲಾಭ ಸಿಗುತ್ತದೆ ಎಂದು ನೋಡುವುದಾದರೆ, ಮನೆಬಳಕೆಯ 14.2 ಕೆಜಿ ಸಿಲಿಂಡರ್ ಅನ್ನು ಹೋಮ್ ಡೆಲಿವರಿ ನೀಡಿದಾಗ ಡಿಸ್ಟ್ರಿಬ್ಯೂಟರ್ ಕಂಪನಿಗೆ 80 ರಿಂದ 88 ರೂಪಾಯಿ ಸಿಗುತ್ತದೆ. ಗೋದಾಮಿನ ನಿರ್ವಹಣೆ ಮತ್ತು ವಿತರಣಾ ವೆಚ್ಚವಾಗಿ ಈ ಮೊತ್ತವನ್ನು ಕಂಪನಿಗೆ ನೀಡಲಾಗುತ್ತದೆ. ಇನ್ನು ಹೋಟೆಲ್‌ಗಳಲ್ಲಿ ಬಳಸುವ ವಾಣಿಜ್ಯ (Commercial) ಸಿಲಿಂಡರ್ ವಿತರಣೆ ಮಾಡಿದರೆ ಡಿಸ್ಟ್ರಿಬ್ಯೂಟರ್‌ಗೆ 100 ರೂಪಾಯಿ ಕಮಿಷನ್ ಸಿಗುತ್ತದೆ.

ಗ್ಯಾಸ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು?: ಗ್ಯಾಸ್ ಸಿಲಿಂಡ‌ರ್ ತಲುಪಿಸುವ ವ್ಯಕ್ತಿಗೆ ಪ್ರತಿ ಸಿಲಿಂಡರ್ ಮೇಲೆ 20 ರಿಂದ 25 ರೂಪಾಯಿ ಕಮಿಷನ್ ಸಿಗುತ್ತದೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ ಸರಾಸರಿ 30 ಸಿಲಿಂಡ‌ರ್ ವಿತರಿಸಿದರೆ, ಆತನಿಗೆ ದಿನಕ್ಕೆ ಸುಮಾರು 600 ರಿಂದ 750 ರೂಪಾಯಿ ಆದಾಯ ಬರುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಆಗ ದಿನವೊಂದಕ್ಕೆ 50 ಸಿಲಿಂಡರ್ ತಲುಪಿಸಿದರೆ, ದಿನದ ಸಂಪಾದನೆ 1,000 ದಿಂದ 1,250 ರೂಪಾಯಿ ತಲುವುತ್ತದೆ. ಅಂದರೆ ಒಬ್ಬ ಡೆಲಿವರಿ ಬಾಯ್ ತಿಂಗಳಿಗೆ ಸರಾಸರಿ 15,600 ರಿಂದ 19,500 ರೂಪಾಯಿ ಹಣವನ್ನು ಮನೆಮನೆಗೆ ಸಿಲಿಂಡರ್ ನೀಡಿಯೇ ಗಳಿಸಬಹುದು.

32 ಸಾವಿರದಿಂದ 65 ಸಾವಿರ ರೂ. ಕೂಡ ಗಳಿಸುವ ಸಾಧ್ಯತೆ ಇದೆ: ಕೆಲವೊಮ್ಮೆ ಗ್ಯಾಸ್ ಸಿಲಿಂಡರ್ ವಿತರಣೆ ಹೆಚ್ಚಾದಂತೆ ಅವರ ಆದಾಯ 32,000 ರೂಪಾಯಿ ವರೆಗೂ ಏರುತ್ತದೆ. ಇನ್ನು ಬೇಡಿಕೆ ವಿಪರೀತವಾಗಿದ್ದಾಗ ಕೆಲವು ಡೆಲಿವರಿ ಬಾಯ್‌ಗಳು ದಿನಕ್ಕೆ 100 ಸಿಲಿಂಡರ್‌ಗಳನ್ನು ಕೂಡ ತಲುಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ದೈನಂದಿನ ಆದಾಯ 2500 ರೂಪಾಯಿ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಅವರು ತಿಂಗಳಿಗೆ ಗರಿಷ್ಠ 65,000 ರೂಪಾಯಿ ವರೆಗೂ ಸಂಪಾದನೆ ಮಾಡುವ ಸಾಧ್ಯತೆ ಇದೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ: ಶೇ.84ರಷ್ಟು ವಿದ್ಯಾರ್ಥಿಗಳು ಪಾಸ್‌ ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ