NEWSನಮ್ಮಜಿಲ್ಲೆಲೇಖನಗಳು

ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ಭವಿಷ್ಯ ಶೂನ್ಯ!

ವಿಜಯಪಥ ಸಮಗ್ರ ಸುದ್ದಿ

ಬೀದಿಯಲ್ಲಿ ನಿಂತು ನಮ್ಮೆಲ್ಲರ ಹಕ್ಕಿಗಾಗಿ, ಸಾರಿಗೆ ಸಂಸ್ಥೆಯ ಉಳಿವಿಗಾಗಿ ಒಬ್ಬ ನಾಯಕ ಗುಡುಗುತ್ತಿರುವಾಗ, ಹಗಲು-ರಾತ್ರಿ ಎನ್ನದೆ ಸಂಕೋಲೆಗಳನ್ನು ಕಡಿದು ಹಾಕಲು ಹೋರಾಡುತ್ತಿರುವಾಗ… ಬದಿಯಲ್ಲಿ ನಿಂತು ತಮಾಷೆ ನೋಡುತ್ತಾ, ಕರ್ತವ್ಯದ ನೆಪದಲ್ಲಿ ಪಲಾಯನ ಮಾಡುತ್ತಿರುವ ನೀವು ನಿಜಕ್ಕೂ ಬದುಕಿದ್ದೀರಾ?

ಅನ್ಯಾಯದ ವಿರುದ್ಧ ಹೋರಾಡುವ ಸಹೋದ್ಯೋಗಿಯ ಜತೆ ನಿಲ್ಲದ ನೀವು, ಕೇವಲ ಸಮವಸ್ತ್ರ ಧರಿಸಿದ ‘ಜೀವಂತ ಶವಗಳು’.

ಕೆಲವೇ ಕೆಲವು ವೀರ ನೌಕರರು ವ್ಯವಸ್ಥೆಯ ಅನ್ಯಾಯದ ವಿರುದ್ಧ ಎದೆಯೊಡ್ಡಿ ನಿಂತಾಗ, ಅವರಿಗೆ ಹೆಗಲು ಕೊಡಬೇಕಾದ ಸಾವಿರಾರು ನೌಕರರು ಬೆನ್ನು ತೋರಿಸಿ ಓಡುತ್ತಿರುವುದು ಈ ಕಾಲದ ದೊಡ್ಡ ದುರಂತ.

ನೆನಪಿಡಿ-​”ಹೋರಾಟಗಾರ ಸೋತರೆ ಕೇವಲ ಒಬ್ಬ ವ್ಯಕ್ತಿ ಸೋಲಲ್ಲ, ಇಡೀ ಸಾರಿಗೆ ನೌಕರರ ಸಂಕುಲದ ಭವಿಷ್ಯವೇ ಸಮಾಧಿಯಾಗುತ್ತದೆ.”

ಹೋರಾಟಗಾರರು ಬೀದಿಗೆ ಇಳಿದಿರುವುದು ಅವರ ವೈಯಕ್ತಿಕ ಲಾಭಕ್ಕಲ್ಲ, ನಿಮ್ಮ ಮನೆಯ ಮಕ್ಕಳ ಜ್ಞಾನದ, ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮತ್ತು ನಿಮ್ಮ ನಿವೃತ್ತ ಜೀವನದ ಭದ್ರತೆಗಾಗಿ.

ನಾವು ಸಂಸ್ಥೆಯ ಸರ್ವಾಧಿಕಾರಿಗಳು ಎಂಬಂತೆ ಕೆಲ ಅಧಿಕಾರಿಗಳು ನಮಗೂ ವೇತನ ತಾರತಮ್ಯವುದೆ ಅದನ್ನು ಸರಿಪರಿಸುವುದಕ್ಕೆ ನಾವು ಮುಂದಾಗಬೇಕು ಎಂಬ ಅರಿವಿಲ್ಲದೆ ಅಜ್ಞಾನಿಗಳಂತೆ ತೋರಿಸುವ ದಬ್ಬಾಳಿಕೆ ಮತ್ತು ಅಹಂಕಾರದ ಮುಂದೆ ತಲೆಬಾಗಿ ನಡೆಯುವುದು ಬದುಕಲ್ಲ, ಅದು ಬಣ್ಣ ಹಚ್ಚಿದ ಗುಲಾಮಗಿರಿ.

ಇಂದು ಒಬ್ಬ ಹೋರಾಟಗಾರನನ್ನು ಏಕಾಂಗಿಯನ್ನಾಗಿ ಮಾಡಿದರೆ, ನಾಳೆ ನಿಮ್ಮ ಮೇಲೆ ಅನ್ಯಾಯದ ತೂಗುಗತ್ತಿ ಬಂದಾಗ ನಿಮಗಾಗಿ ಧ್ವನಿ ಎತ್ತಲು ಯಾರೂ ಇರುವುದಿಲ್ಲ. ಹೀಗಾಗಿ….!

ಸಾರಿಗೆ ಬಂಧುಗಳೇ… ಎದ್ದೇಳಿ!:
​ಕೈಕಟ್ಟಿ ನಿಂತು ನೋಡುವ ‘ಹೇಡಿ’ಗಳಾಗಬೇಡಿ. ಅಧಿಕಾರದ ಮದವೇರಿದ ವ್ಯವಸ್ಥೆಗೆ ನಿಮ್ಮ ಸಂಘಟಿತ ಶಕ್ತಿಯ ದರ್ಶನ ತೋರಿಸಿ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನಿಮ್ಮ ಸಹೋದರನಿಗೆ ಸಾವಿರ ಕೈಗಳ ಬಲ ತುಂಬಿ. ಪಲಾಯನ ಮಾಡುವುದು ಹೇಡಿಗಳ ಲಕ್ಷಣ, ಎದುರಿಸಿ ನಿಲ್ಲುವುದು ಸ್ವಾಭಿಮಾನಿ ನೌಕರನ ಲಕ್ಷಣ!
​ಹೋರಾಟಕ್ಕೆ ಸಾಥ್ ನೀಡದ ನೌಕರನನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.
​ಎದ್ದೇಳಿ! ಗುಡುಗಿ! ಒಂದಾಗಿ! ನಮ್ಮ ಹಕ್ಕು – ನಮ್ಮ ಹೋರಾಟ! ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ನೌಕರರು ತಮಗಾಗುತ್ತಿರುವ ವೇತನ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ ನೀಡುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ- ನಾಲ್ಕನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಇಂದು ಶಿರಾದಲ್ಲಿ ವಾಸ್ತವ್ಯ ಸಾರಿಗೆ ನೌಕರರ ಒಕ್ಕೂಟದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ: ಮಹಾಮಂಡಳದ ಅಧ್ಯಕ್ಷ ಆರ್‌.ಪಿ.ಕೊಪರ್ಡೆ ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ: ಶೇ.84ರಷ್ಟು ವಿದ್ಯಾರ್ಥಿಗಳು ಪಾಸ್‌ ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ