KSRTC ಮಂಡ್ಯ: ಓವರ್ಟೇಕ್ ನೆಪದಲ್ಲಿ ತಾನೇ ಬಸ್ಗೆ ಬೈಕ್ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್ ಸವಾರ ಯೋಗೇಶ್

ಮಂಡ್ಯ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ನೌಕರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಅಲ್ಲದೆ ಬಳಿಕ ಚಲಿಸುತ್ತಿದ್ದ ಬಸ್ ಮುಂದೆ ಹೋಗಿ ತಾನೆ ಬಸ್ಗೆ ಬೈಕ್ ಡಿಕ್ಕಿಹೊಡೆಸಿ ಚಾಲಕನೆ ನನ್ನನ್ನು ಕೊಲ್ಲುವ ಉದ್ದೇಶದಿಂದ ಅಪಘಾತ ಮಾಡಿದ್ದಾನೆ ಎಂದು ಬಿಂಬಿಸಿರುವ ಘಟನೆ ಸೋಮವಾರ (ಸೆ.9) ಬೆಳಗ್ಗೆ ನಡೆದಿದೆ.
ಘಟನೆ ವಿವರ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಳಗವಾದಿ ನಿವಾಸಿ ಕೆಎಸ್ಆರ್ಟಿಸಿ ಮಳವಳ್ಳಿ ಘಟಕದ ಚಾಲಕ ಹನುಮಂತ ಎಂಬುವರ ಮೇಲೆ ಅದೇ ಗ್ರಾಮದ ಯೋಗೇಶ್ ಎಂಬಾತ ಕಳೆದ ಸೆ.30ರಂದು ಕೆ.ಪಿ.ದೊಡ್ಡಿ ಬಳಿ ಬೈಕ್ನಲ್ಲಿ ಹನುಮಂತ ಹೋಗುತ್ತಿದ್ದ ವೇಳೆ ಯೋಗೇಶ್ ಸೇರಿದಂತೆ ಮೂವರು ಅಡ್ಡಗಟ್ಟಿ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ಹಲ್ಲೆ ನಡೆಸಿ ಕ್ಷಣರ್ಧದಲ್ಲಿ ಪರಾರಿಯಾಗಿದ್ದರು.
ಈ ಸಂಬಂಧ ಕೆಎಸ್ಆರ್ಟಿಸಿ ಚಾಲಕ ಹನುಮಂತ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಅದೇ ಠಾಣೆಯಲ್ಲಿ ಯೋಗೇಶ್ ಕೂಡ ಪ್ರತಿ ದೂರು ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಯೋಗೇಶ್ ಆಬಳಿಕ ಅಂದು ಸಂಜೆ ಹನುಮಂತನ ಮನೆಗೆ ತನಗೆ ಹೆಣ್ಣುಕೊಟ್ಟ ಅತ್ತೆ ಮಾವನನ್ನು ಕಳುಹಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ. ನಂತರ ಈತ ಅತ್ತೆ ನಾಗಮ್ಮ ಮತ್ತು ಮಾವ ಮಹೇಶ್ ಇಬ್ಬರು ಹೋಗಿ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಹನುಮಂತನ ಪಾಲಕರೂ ಕೂಡ ಪ್ರತಿ ದೂರು ದಾಖಲಿಸಿದ್ದಾರೆ. ಇನ್ನು ಇತ್ತ ಹಲ್ಲೆಗೊಳಗಾಗಿ 6-7ದಿನಗಳಿಂದ ಚಿಕಿತ್ಸೆ ಪಡೆದ ಬಳಿಕ ಅಂದರೆ ಸೋಮವಾರ ಸೆ.9ರಂದು ಡ್ಯೂಟಿಗೆ ಹನುಮಂತ ಹೋಗಿದ್ದಾರೆ. ಇದೇ ಸಮಯ ಕಾಯುತ್ತಿದ್ದ ಯೋಗೇಶ್ ಮಂಡ್ಯ ಬಸ್ನಿಲ್ದಾಣದಿಂದ ಕೆ.ಎಂ.ದೊಡ್ಡಿ ಮಾರ್ಗವಾಗಿ ಮಳವಳ್ಳಿಗೆ ಬಸ್ ಹೋಗುತ್ತಿದ್ದಾಗ ಕಾಗೇಪುರ ಟಿ. ಬಳಿ ಬಂದು ಹನುಮಂತನ ಜತೆ ಕ್ಯಾತೆತೆಗೆದಿದ್ದಾನೆ.
ಈ ವೇಳೆ ಹನುಮಂತನಿಗೆ ಅವಾಚ್ಯವಾಗಿ ಬೈದಿದ್ದು ಅಲ್ಲದೆ ಮಾರ್ಗಾಚರಣೆಯಲ್ಲಿದ್ದ ಬಸ್ಸನ್ನು ಹಿಂದಿನಿಂದ ಬೈಕ್ನಲ್ಲಿ ಪಾಲೋಮಾಡಿಕೊಂಡು ಹೋಗಿದ್ದಾನೆ. ಈ ಬೈಕ್ನಲ್ಲಿ ಚೌಡಯ್ಯ ಎಂಬುವರನ್ನು ಹಿಂದೆ ಕೂರಿಸಿಕೊಂಡು ಹೋಗಿದ್ದು, ಬಸವನಪುರ ಬಳಿ ಬಸ್ ಓವರ್ಟೇಕ್ ಮಾಡುವ ನಾಟಕವಾಡಿ ಬಸ್ನ ಮುಂದಿನ ಎಡಭಾಗದಕ್ಕೆ ಹೋಗಿ ಬೈಕ್ ಬೇಕ್ಹೊಡೆಸಿ ಬಸ್ ಬೈಕ್ಗೆ ಡಿಕ್ಕಿ ಹೋಡೆದಿದೆ ಎಂದು ನಾಡಕವಾಡಿದ್ದಾನೆ.
ಅಲ್ಲದೆ ಈ ವೇಳೆ ಕೆಳಗೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡು ಹಿಂಬದಿ ಸವಾರ ಚೌಡಯ್ಯನಿಗೂ ಗಾಯವಾಗುವಂತೆ ನೋಡಿಕೊಂಡಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಾಗಿ ಟಿ.ಸಿ. ಹನುಮಂತ ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಸರ್ಕಾರಿ ಬಸ್ ದುರುಪಯೋಗ ಪಡಿಸಿಕೊಂಡು ನನ್ನ ಬೈಕ್ಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಎಲ್ಲವನ್ನು ಇವನೇ ಮಾಡಿ ಕೊಲೆ ಯತ್ನ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ಸೆ.9ರಂದು ದಾಖಲಿಸಿದ್ದಾನೆ.
ಬಸ್ ಹಿಂದೆ ಪಾಲೋ ಮಾಡಿದ್ದು ಮತ್ತು ಓವರ್ಟೇಕ್ ಮಾಡುವ ನೆಪದಲ್ಲಿ ಬಂದು ಬಸ್ಗೇ ಬೈಕ್ ಡಿಕ್ಕಿಹೊಡೆಸಿದ್ದನ್ನು ವಿಡಿಯೋ ಮಾಡಬೇಕು ಎಂದುಕೊಂಡ ಚಾಲಕ ಹನುಮಂತ ಬಸ್ ಓಡಿಸುತ್ತಿದ್ದರಿಂದ ನಿಗಮದಲ್ಲಿ ಅದಕ್ಕೆ ಅವಕಾಶವಿಲ್ಲದ ಕಾರಣ ವಿಡಿಯೋ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ಬಸ್ನಲ್ಲಿ ಸಿಸಿಟಿವಿ ಇದ್ದಿದ್ದರೆ ಯೋಗೇಶ್ ಮಾಡಿದ ಕುತಂತ್ರವೆಲ್ಲ ಬಯಲಾಗುತ್ತಿತ್ತು.
ಜತೆಗೆ ಸರ್ಕಾರಿ ಬಸ್ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ಯೋಗೇಶ್ ವಿರುದ್ಧ ದೂರು ದಾಖಲಿಸಬಹುದಿತ್ತು. ಈಗಲೂ ಈ ಸಂಬಂಧ ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳು ಯೋಗೇಶ್ ಸೃಷ್ಟಿಸಿರುವ ಡ್ರಾಮಾ ವಿರುದ್ಧ ದೂರು ದಾಖಲಿಸಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಕ್ಕೆ ಅವಕಾಶವಿದೆ.
ಇನ್ನು ಸಾರಿಗೆ ನೌಕರ ಹನುಮಂತ ಮತ್ತು ಯೋಗೇಶ್ ನಡುವೆ ಈ ದ್ವೇಷಕ್ಕೆ ಕಾರಣವೇನು ಎಂದರೆ ಈ ಇಬ್ಬರ ಕುಟುಂಬದವರು ತಳಗವಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಲ್ಕೂ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ ಹನುಮಂತ ಕುಟುಂಬದವರು 200 -300 ರೂಪಾಯಿ ತೆಗೆದುಕೊಂಡರೆ ಯೋಗೇಶ್ ಕುಟುಂಬದವರು 600-700 ರೂ. ಚಾರ್ಜ್ ಮಾಡುತ್ತಾರಂತೆ. ಅದಕ್ಕೆ ಬಹುತೇಕ ತಳಗವಾದಿ ಗ್ರಾಪಂ ವ್ಯಾಪ್ತಿಯ ನಿವಾಸಿಗಳು ಹೆಚ್ಚಾಗಿ ಹನುಮಂತನ ಕುಟುಂಬವರು ಸರಬರಾಜು ಮಾಡುವ ಟ್ಯಾಂಕರ್ ನೀರನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಇನ್ನೊಂದು ಪ್ರಮುಖ ವಿಷಯವೆಂದರೆ ಹನುಮಂತನ ಕುಟುಂಬದವರು ಗ್ರಾಮದಲ್ಲಿ ಯಾರಾದರು ನಿಧನರಾದರೆ ಅವರ ಕುಟುಂಬದವರಿಗೆ ಉಚಿತವಾಗಿ ನೀರು ಸರಬರಾಜು ಮಾಡುತ್ತಾರೆ. ಇದರಿಂದಲೂ ನಮಗೆ ಲಾಸ್ ಆಗುತ್ತಿದೆ ಎಂದು ಯೋಗೇಶ್ ದ್ವೇಷ ಸಾಧಿಸುತ್ತಿದ್ದು ಈ ದ್ವೇಷದಿಂದಲೇ ಹನುಮಂತನನ್ನು ಕೆಲಸದಿಂದ ವಜಾಗೊಳಿಸಿದರೆ ಆರ್ಥಿಕವಾಗಿ ದಿವಾಳಿ ಆಗುತ್ತಾರೆ. ಆಗ ನಾವು ಹೇಳಿದಂತೆ ಈ ಕುಟುಂಬದಬರು ಕೇಳುತ್ತಾರೆ ಎಂಬ ಕಿಡಿಗೇಡಿ ಮನೋಭಾವದಿಂದ ಈ ಕೃತ್ಯ ಎಸಗಿದ್ದಾನೆ ಯೋಗೇಶ್ ಎಂಬ ಆರೋಪ ಕೇಳಿ ಬಂದಿದೆ.
ಒಟ್ಟಾರೆ ಯೋಗೇಶ್ನ ಉದ್ದೇಶ ಹನುಮಂತನನ್ನು ಕೆಲಸದಿಂದ ವಜಾ ಮಾಡಿಸಬೇಕು ಎಂಬುದಾಗಿದೆ. ಹೀಗಾಗಿ ಆತ ಹೇಗಿದ್ದರೂ ಚಾಲಕನಾಗಿದ್ದಾನೆ ಅಪಘಾತ ನಾಟಕವಾಡಿದರೆ ಆತನನ್ನು ಕೆಲಸದಿಂದ ತೆಗೆಯುತ್ತಾರೆ ಎಂದು ತಾನೂ ಸೇರಿದಂತೆ ಹಿಂಬದಿ ಸವಾರನ ಪ್ರಾಣವನ್ನು ಲೆಕ್ಕಿಸದೆ ಬೈಕ್ಅನ್ನು ಬಸ್ಗೆ ಡಿಕ್ಕಿಹೊಡೆಸಿ ಅಪಘಾತ ಮಾಡಿದ್ದು ಈ ಅಪಘಾತವನ್ನು ಚಾಲಕ ಹನುಮಂತನ ಮೇಲೆ ಬರುವಂತೆ ನೋಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿದ ಬಳಿಕ ಯಾರದು ತಪ್ಪು ಎಂಬ ಸತ್ಯ ಹೊರಬರಬೇಕಿದೆ. ಆದರೆ, ಯೋಗೇಶ್ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಆತನ ಕಿಡಿಗೇಡಿ ಕೃತ್ಯಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಯಾವುದೇ ಒತ್ತಡಕ್ಕೂ ಮಣಿಯದೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ತಪ್ಪು ಮಾಡಿದವರಿಗೆ ಕಾನೂನಿನಡಿ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಹನುಮಂತನ ಕುಟುಂಬದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Related

You Might Also Like
KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ
ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್ 1-2025ರಿಂದ ಜಾರಿ ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ...
KSRTC- ಪ್ರತಿಷ್ಠಿತ ವಿಶ್ವ ದಾಖಲೆ ಸೇರಿದ ಶಕ್ತಿ ಯೋಜನೆ: ಅತೀವ ಸಂತಸ, ಹೆಮ್ಮೆಯ ಕ್ಷಣ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 2023ರ ಜೂನ್ 11ರಿಂದ ಜಾರಿಗೆ ಬಂದ ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ (Golden Book...
KKRTC ವಿಜಯಪುರ: ಸಂಸ್ಥೆ ನಿಯಮವನ್ನೇ ಗಾಳಿಗೆ ತೂರಿ ಮತ್ತೆ ಮತ್ತೆ ನೌಕರರಿಂದ ಸ್ವಂತ ಕಾರನ್ನು ಸರ್ವಿಸ್ ಮಾಡಿಸಿಕೊಳ್ಳುತ್ತಿರುವ ಡಿಎಂ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅದರಲ್ಲೂ ವಿಜಯಪುರ ವಿಭಾಗದಲ್ಲಿ ಇವರ ಬಹುತೇಕ ಎಲ್ಲ ಘಟಕ ವ್ಯವಸ್ಥಾಪಕರು ಸೇರಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳೂ ಅಂಕುಶವಿಲ್ಲದ ಆನೆಯಂತಾಗಿದ್ದಾರೆ. ಅಂದರೆ...
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...