NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ರಾಜಹಂಸ ಸೇರಿ ಎಲ್ಲ ಪ್ರತಿಷ್ಠಿತ ಬಸ್‌ಗಳಲ್ಲಿ “ನಿವೃತ್ತ ದರ್ಜೆ 3-4 ನೌಕರರು ಪ್ರಯಾಣಿಸಲು ಅವಕಾಶ: ಎಂಡಿ ಆದೇಶ

KSRTC MD ಅನ್ಬುಕುಮಾರ್‌
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ “ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರು ಶೇ.25ರಷ್ಟು ರಿಯಾಯಿತಿ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು KSRTC ಎಂಡಿ ಅನ್ಬುಕುಮಾರ್‌ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಸಾಮಾನ್ಯ ಸಾರಿಗೆಗಳಲ್ಲಿ ಮಾತ್ರ ಉಚಿತವಾಗಿ ಪ್ರಯಾಣಿಸಲು ಅವಕಾಶವಿತ್ತು. ಆದರೆ, ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ ಉಚಿತವಾಗಿ ಅಥವಾ ರೀಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶವಿರಲಿಲ್ಲ. ಹೀಗಾಗಿ ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರು ಶೇ.25ರಷ್ಟು ರಿಯಾಯಿತಿ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ (ಕ.ರಾ.ರ.ಸಾ.ನಿಗಮ, ಬೆಂ.ಮ.ಸಾ.ಸಂಸ್ಥೆ, ವಾ.ಕ.ರ.ಸಾ.ಸಂಸ್ಥೆ ಮತ್ತು ಕ.ಕ.ರ.ಸಾ.ನಿಗಮ) ನಿವೃತ್ತರಾದ ನೌಕರ/ಅಧಿಕಾರಿಗಳು ನಿಗಮಕ್ಕೆ ಸಲ್ಲಿಸಿರುವ ಸುದೀರ್ಘ ಸೇವೆಯನ್ನು ಪರಿಗಣಿಸಿ 01-01-1988 ಮತ್ತು ನಂತರ ನಿವೃತ್ತರಾದ/ ನಿವೃತ್ತರಾಗಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮ/ ಸಂಸ್ಥೆಗಳ ನೌಕರರು/ ಅಧಿಕಾರಿಗಳು ಹಾಗೂ ಆತನ/ ಆಕೆಯ ಒಬ್ಬ ಜೀವಂತ ಪತ್ನಿ/ ಪತಿಗೆ ಮಾತ್ರ ಸೀಮಿತವಾಗುವಂತೆ ವಾರ್ಷಿಕ ರೂ.500/- ಸಂಸ್ಕರಣಾ ಶುಲ್ಕ (processing fee) ಪಾವತಿಸಿ ನಿವೃತ್ತ ಬಸ್ ಪಾಸ್ ಪಡೆದು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.

ಕ.ರಾ.ರ.ಸಾ.ನಿಗಮದ ನಿರ್ದೇಶಕ ಮಂಡಳಿ ಠರಾವು ಸಂಖ್ಯೆ 10414/454ನೇ ಸಭೆ ದಿನಾಂಕ 02.01.2024 ರಲ್ಲಿ ನಿಗಮದ ಸೇವೆಯಿಂದ ನಿವೃತ್ತರಾದ ದರ್ಜೆ-III ಮತ್ತು ದರ್ಜೆ-IV ನೌಕರರಿಂದ ಪ್ರತಿ ಪಾಸಿಗೆ ರೂ.500/- ಸಂಸ್ಕರಣಾ ಶುಲ್ಕ ಪಡೆದು ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಇರುವ ಅವಕಾಶದ ಜತೆಗೆ ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ “ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರಿಗೆ ಮಾತ್ರ” ಅನ್ವಯಿಸುವಂತೆ ಆಯಾ ವರ್ಗಗಳ (ಸಾಮಾನ್ಯ, ನಗರ ಮತ್ತು ವೇಗದೂತ ಸಾರಿಗೆಗಳನ್ನು ಹೊರತುಪಡಿಸಿ) ಸಾರಿಗೆಗಳಲ್ಲಿ ಪೂರಕವಾದ ಮೂಲ ಪ್ರಯಾಣದರದ ಶೇಕಡ 25 ರಷ್ಟು ವಿನಾಯಿತಿ ನೀಡಿ, ಶೇಕಡ 75 ರಷ್ಟು ಪ್ರಯಾಣದರ (Seventy five percent of the bus fares for the destination of travel) ಪಾವತಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಕಾಗಿದೆ ಎಂದು ಎಂಡಿ ತಿಳಿಸಿದ್ದಾರೆ.

ಇನ್ನು ದರ್ಜೆ-Iಮತ್ತು ದರ್ಜೆ-II ಅಧಿಕಾರಿಗಳು ಈ ಹಿಂದಿನಿಂದಲೂ ಶೇ.50ರಷ್ಟು ರಿಯಾಯಿತಿ ಪಡೆದು ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲ ಪ್ರತಿಷ್ಠಿತ ಸಾರಿಗೆಗಳಲ್ಲಿ ಈ ಹಿಂದಿನಿಂದಲೂ ಪ್ರಯಾನಿಸಲು ಅವಕಾಶ ಹೊಂದಿದ್ದರು. ಆದರೆ, ದರ್ಜೆ-III ಮತ್ತು ದರ್ಜೆ-IV ನೌಕರರಿಗೆ ಈ ರರಿಯಾಯಿತಿ ಎಂಬುದನ್ನೇ ಕೊಟ್ಟಿರಲಿಲ್ಲ.

ನಾಲ್ಕೂ ನಿಗಮಗಳ ನಿವೃತ್ತ ದರ್ಜೆ-III ಮತ್ತು ದರ್ಜೆ-IV ನೌಕರರಿಗೆ ಕಡಿಮೆ ವೇತನವಿದೆ. ಆದರೆ ಇವರೆ ಸಂಸ್ಥೆಯ ಅಡಿಪಾಯವಾಗಿದ್ದಾರೆ. ಇಂಥ ನೌಕರರಿಗೆ ಈವರೆಗೂ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ನೀಡಿರಲಿಲ್ಲ. ಎಂಡಿ ಅವರು ಈ ಬಗ್ಗೆ ಗಮನ ಹರಿಸಿ ಮತ್ತು ಸಂಘಟನೆಗಳು ಬೇಡಿಕೆ ಇಟ್ಟಿದ್ದರಿಂದ ಈ ಒಂದು ಅವಕಾಶ ನೀಡಲು ಒಪ್ಪಿ ಆದೇಶ ಹೊರಡಿಸಿದ್ದಾರೆ.

ಆದರೆ, ಕಡಿವೆ ವೇತನದಲ್ಲಿ ದುಡಿದ ಈ ನೌಕರರಿಗೆ ಮುಸಂಜೆಯ ಇಳಿ ವಯಸ್ಸಿನಲ್ಲಿ ಕನಿಷ್ಠ ಪಕ್ಷ ನಿವೃತ್ತ ದರ್ಜೆ-Iಮತ್ತು ದರ್ಜೆ-II ಅಧಿಕಾರಿಗಳಿಗೆ ನೀಡಿರುವ ರೀತಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕಿತ್ತು ಎಂದು ನಿವೃತ್ತ ನೌಕರರು ಅಭಿಪ್ರಯಾಯ ವ್ಯಕ್ತಪಡಿಸಿದ್ದಾರೆ.

ಹೀಗಾಗಿ KSRTC ನಿಗಮದ ವ್ಯವಸ್ಥಾಪಕರು ಈ ಬಗ್ಗೆ ಸಾರಿಗೆ ಸಚಿವರು ಮತ್ತು ಸಂಬಂಧಪಟ್ಟ ಆಡಳಿತ ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡರೆ ನಮಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

 

 

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ