NEWSದೇಶ-ವಿದೇಶನಮ್ಮರಾಜ್ಯ

ಕೆನರಾ ಬ್ಯಾಂಕ್‌ನಲ್ಲಿ ₹20 ಸಾವಿರ FD ಮಾಡಿ ₹40 ಸಾವಿರ ಪಡೆಯಿರಿ..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗ್ರಾಹಕರಿಗೆ ಕೆನರಾ ಬ್ಯಾಂಕ್ ನೀಡುತ್ತಿರುವ ಸೇವೆಗಳಲ್ಲಿ ಒಂದಾದ ಎಫ್‌ಡಿ ಯೋಜನೆಯ ಬಡ್ಡಿದರದ ಬಗ್ಗೆ ಆಸಕ್ತ ಬ್ಯಾಂಕ್ ಗ್ರಾಹಕರು ಪರಿಶೀಲಿಸಿ ಹೂಡಿಕೆ ಮಾಡಬಹುದಾಗಿದೆ.

ಇನ್ನು 7 ದಿನಗಳಿಂದ 45 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 4% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 4% ಬಡ್ಡಿದರ ನೀಡಲಾಗುತ್ತದೆ. ಅದರಂತೆ 46 ದಿನಗಳಿಂದ 90 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 5.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 5.25% ಬಡ್ಡಿದರ ನೀಡಲಾಗುತ್ತದೆ.

91 ದಿನಗಳಿಂದ 179 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 5.50% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 5.50% ಬಡ್ಡಿದರ ನೀಡಲಾಗುತ್ತದೆ. 180 ದಿನಗಳಿಂದ 269 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 6.15% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 6.65% ಬಡ್ಡಿ ಸಿಗಲಿದೆ.

270 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷದ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ಸೇರಿಸಿ ನೀವು ಹೂಡಿದ ಹಣದ ಜತೆಗೆ ಬಡ್ಡಿಯೂ ಬರಲಿದೆ.

ಇನ್ನು 444 ದಿನಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ 7.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.75% ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು, ಆದರೆ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ನಾಗರಿಕರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ಹಣ ಸಿಗಲಿದೆ.

2 ವರ್ಷಕ್ಕಿಂತ ಹೆಚ್ಚು, ಆದರೆ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿದರ ನೀಡಲಾಗುತ್ತದೆ. 3 ವರ್ಷಕ್ಕಿಂತ ಹೆಚ್ಚು, ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.80% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.30% ಬಡ್ಡಿದರ ನೀಡಲಾಗುತ್ತದೆ.

ಅದರಂತೆ 5 ವರ್ಷಗಳಿಂದ 10 ವರ್ಷಗಳವರೆಗೆ ಸಾಮಾನ್ಯ ನಾಗರಿಕರಿಗೆ 6.70% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.20% ಬಡ್ಡಿದರ ನೀಡಲಾಗುತ್ತದೆ. ಹಾಗಾಗಿ ನಾವು 5 ವರ್ಷದ ಅವಧಿಯ 20,000 ರೂ. ಎಫ್‌ಡಿ ಮಾಡಿಸಿದರೆ 7.20% ಬಡ್ಡಿದರದೊಂದಿಗೆ ಒಟ್ಟು 28,575 ರೂ. ಸಿಗಲಿದೆ. ನಾವು 10 ವರ್ಷದ ಅವಧಿಯ 20,000 ರೂ. ಎಫ್‌ಡಿ ಮಾಡಿಸಿದರೆ 7.20% ಬಡ್ಡಿದರದೊಂದಿಗೆ ಒಟ್ಟು 40,826 ರೂ. ಸಿಗಲಿದೆ.

ಇನ್ನು ನೀವು ಬ್ಯಾಂಕ್‌ನಲ್ಲಿ ಹೆಚ್ಚು ವರ್ಷ ಎಫ್‌ಡಿ ಮಾಡಿದಷ್ಟು ಬಡ್ಡಿಯು ದುಪ್ಪಟ್ಟಾಗುತ್ತದೆ. ಅದು ಹೇಗೆಂದರೆ ತಿಂಗಳಿಂದ ತಿಂಗಳಿಗೆ ನಿಮ್ಮ ಹಣಕ್ಕೆ ಸಿಗುವ ಬಟ್ಟಿಗೂ ಬಡ್ಡಿ ಸಿಗಲಿದೆ. ಹೀಗಾಗಿ 10 ವರ್ಷ ಅದಕ್ಕೂ ಮೇಲ್ಪಟ್ಟು ಎಫ್‌ಡಿ ಮಾಡಿಸಿದರೆ ಹಾಕಿದ ಹಣಕ್ಕೆ ದುಪ್ಪಟ್ಟು ಹಣ ಸಿಗಲಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ವಿಚಾರಿಸಬಹುದು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ