KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!

- ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್ 2024 ರಿಂದ ಜಾರಿಗೆ ಬರುವಂತೆ ಮೂಲ ತುಟ್ಟಿಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರು ಮಾಡಿರುವ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಜೂನ್ 26 ರಂದು ಆದೇಶ ಹೊರಡಿಸಿದ್ದಾರೆ.
ಇಲ್ಲಿ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಸಂಬಂಧಪಡುವುದಿಲ್ಲ. ಹೀಗಾಗಿ ನೌಕರರಿಗೆ ಪ್ರಸ್ತುತ ಇರುವ ಶೇ.24ರಷ್ಟು ಎಚ್ಆರ್ಎ ಬದಲಿಗೆ ಈಗ ಶೇ.20ರಷ್ಟು ಎಚ್ಆರ್ಎ ಈ ಆದೇಶದಿಂದ ಸಿಗಲಿದೆ. ಹೀಗಾಗಿ ವೇತನದಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸವಾಗುವುದಿಲ್ಲ.
ಅದು ಹೇಗೆ ಎಂದರೆ? ನಿರ್ವಾಹಕರ ವೇತನವನ್ನು ಉದಾಹರಣೆಗೆ ತೆಗೆದುಕೊಳ್ಳೋಣ ಪ್ರಸ್ತುತ 24,260 ಮೂಲ ವೇತನ ಇದ್ದರೆ ಅದರ ಡಿಎ ಶೇ.42.50 ಇದೇ. ಅಂದರೆ ಅವರು 10,311 ರೂ. DA ಪಡೆಯುತ್ತಿದ್ದಾರೆ. ಅದಕ್ಕೆ ಶೇ.24 HRA ಇದೆ ಅಂದರೆ 5822 ರೂ.ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈ ಮೂಲವೇತನ 24260 + ಡಿಎ 10311+ ಎಚ್ಆರ್ಎ 5822 = ಪ್ರಸ್ತುತ ಜೂನ್ 2025ರ ವೇತನ 40393 ಇದೆ ಅಂದುಕೊಳ್ಳೋಣ. ಈ ನಡುವೆ ದಿನಾಂಕ 01.07.2022ರಲ್ಲಿ 24260-(500×3=1500 ಇಂಕ್ರಿಮೆಂಟ್ ಕಳೆದರೆ) 24,260-1500 = 22,760 ಆಗಿನ ಮೂಲವೇತನ ಇದೆ.
ಈ 22,760ರ ಮೂಲವೇತನಕ್ಕೆ ಶೇ.31ಡಿಎ 7056 ರೂ.ಗಳನ್ನು ಜತೆಗೆ ಇದೇ ಮೂಲ ವೇತನಕ್ಕೆ ಶೇ.24 HRA 5,823 ರೂ.ಗಳನ್ನು ಸೇರಿಸಿದರೆ. ಈಗ ಒಟ್ಟಾರೆ 22,760 + 7056 + 5823= 35639 ರೂ.ಗಳು 01.07.2022ರ ದಿನಾಂಕದ ಸಂಬಳ ಆಗಿರುತ್ತದೆ.
22,760 ಮೂಲವೇತನ + 7056 ಡಿ ಎ ಶೇ.31 ವಿಲೀನಗೊಳಿಸಿದಾಗ 29,816 ಆಗಿದ್ದು ಸ್ಲಾಬ್ ಪ್ರಕಾರ 29,850 ಮೂಲವೇತನ ಆಗುತ್ತದೆ. ಮುಂದುವರಿದು ದಿನಾಂಕ 01.07.2022 ರಿಂದ ಜುಲೈ ತಿಂಗಳ 2025 ರ ವರೆಗೂ ಡಿಎ ಲೆಕ್ಕ ಮಾಡದೆ ನೇರವಾಗಿ ಸಂಬಳಕ್ಕೆ ಬಂದು ಬಿಡುತ್ತದೆ.
29,850ರ ಮೂಲವೇತನಕ್ಕೆ (ಕಳೆದಿರುವ ಮೂರು ಇಂಕ್ರಿಮೆಂಟ್ 500 ರೂ.ಗಳ ಬದಲಿಗೆ 550 ರೂಪಾಯಿಗಳ ಮೂರು ಇಂಕ್ರಿಮೆಂಟ್ ಹೆಚ್ಚಿಸಿಕೊಳ್ಳಬೇಕು) 550×3= 1650+29850 =31500 ಪ್ರಸ್ತುತ ಜುಲೈ 2025ರ ಮೂಲ ವೇತನವಾಗುತ್ತದೆ. ಜುಲೈ 2025ರ ಮೂಲವೇತನ 31500 ರೂಪಾಯಿ + ಡಿಎ ಶೇ.12.25 ಲೆಕ್ಕಾಚಾರ ಹಾಕಿದಾಗ ಆ ನಿರ್ವಾಹಕನಿಗೆ 3859 HRA ಶೇ.20ರಷ್ಟು ಲೆಕ್ಕಾಚಾರ ಹಾಕಿದಾಗ 6,300 ರೂಪಾಯಿಗಳು. ಒಟ್ಟಾರೆ 31,500+3859+6300= 41659 ರೂ. ವೇತನ ಆಗುತ್ತದೆ.
ಇದನ್ನು ಸಂಸ್ಥೆ ವತಿಯಿಂದ ಬಿಡಿಎ ತೋರಿಸುತ್ತಾರೆ ಈ ಮೇಲೆ ತಿಳಿಸಿದಂತೆ ಜೂನ್ 2025ರ ವೇತನ 40,393 ಸರ್ಕಾರದ ಆದೇಶದಂತೆ ಡಿಎ ವಿಲೀನಗೊಳಿಸಿದಾಗ ಆಗುವಂತಹ ಪೂರ್ಣ ಪ್ರಮಾಣದ ಸಂಬಳ 41,659 ರೂಪಾಯಿಗಳು. ಅಂದರೆ 41,659-40,393=1266 ರೂ.ಗಳು ಮಾತ್ರ ವೇತನದಲ್ಲಿ ಹೆಚ್ಚಾಗಿ ಸಿಗುತ್ತದೆ.
ಹೀಗಾಗಿ ತಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಮೂಲವೇತನ ಜಾಸ್ತಿಯಾಗುತ್ತದೆ. ಸದ್ಯಕ್ಕೆ ಶೇ.24ರಷ್ಟಿರುವ HRA ಶೇ.4 ಕಡಿಮೆಯಾಗಿ ಶೇ.20 ಪರ್ಸೆಂಟ್ಗೆ ಇಳಿಕೆಯುತ್ತದೆ. ಡಿಎ ಪ್ರಸ್ತುತ ದಿನಾಂಕ 01.01.2025ದಕ್ಕೆ ಶೇ.12.25 ರಷ್ಟು ಡಿಎ ಇರುತ್ತದೆ. ಇದನ್ನು ಗಮನಿಸಿದರೆ ಇಲ್ಲಿ ಯಾವುದೇ ಹೇಳಿಕೊಳ್ಳುವಂತಹ ಸಂಬಳದ ವ್ಯತ್ಯಾಸವಾಗುವುದಿಲ್ಲ. ಕಾರಣ ಸಾರಿಗೆ ನೌಕರರಿಗೆ ಸರ್ಕಾರದ ಪಿಟ್ ಮೆಂಟ್ ಶೇ.27.50 ಆಗಲಿ, ಏಳನೇ ವೇತನ ಆಯೋಗದ ಪರಿಷ್ಕೃತ ಮುಖ್ಯವೇತನ ಶ್ರೇಣಿಯಾಗಲಿ ಅನ್ವಯವಾಗುವುದಿಲ್ಲ. ( ಒಂದು ವೇಳೆ 7ನೇ ವೇತನ ಆಯೋಗ ಸಾರಿಗೆ ನೌಕರರಿಗೂ ಸಿಕ್ಕಿದ್ದರೆ ಸರ್ಕಾರಿ ನೌಕರರ ವೇತನದಷ್ಟೇ ಸಿಗುತ್ತಿತ್ತು.
ಒಟ್ಟಾರೆ ಈ ಬಿಡಿಎ ಮೂಲ ವೇತನಕ್ಕೆ ವಿಲೀನ ಮಾಡಿರುವುದರಿಂದ ಹೇಳಿಕೊಳ್ಳುವ ರೀತಿಯಲ್ಲಿ ವೇತನ ಹೆಚ್ಚಳವಾಗದಿದ್ದರೂ ಕೂಡ ಅಲ್ಪ ಮಟ್ಟಿಗೆ ಹೆಚ್ಚಾಗುತ್ತದೆ. ಆದರೆ HRA ಶೇ.4ರಷ್ಟು ಕೈಬಿಟ್ಟು ಹೋಗುತ್ತದೆ ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...