Breaking NewsNEWSನಮ್ಮಜಿಲ್ಲೆರಾಜಕೀಯ

ಮೀಡಿಯಾ ಪೋಸ್ ಬೇಡ, ರಾಜ್ಯದ ಜನತೆ ಪ್ರಾಣ ಉಳಿಸಿ: ತೇಜಸ್ವಿ ಸೂರ್ಯ ಕುಟುಕಿದ ನಾಗಣ್ಣ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ತಿಮಿಂಗಿಲಗಳನ್ನು ಹಿಡಿಯದೆ ಬರೀ ಮೀಡಿಯಾ ಪೋಸ್ ನೀಡುತ್ತಿರುವ ಸಂಸದರು ನಿಜಕ್ಕೂ ತಾಕತ್ ಇದ್ದಲ್ಲಿ ಕೇಂದ್ರ ಸರ್ಕಾರದಿಂದ ಆಕ್ಸಿಜನ್ ತರಿಸಿ ಕೊರೊನಾ ಸೋಂಕಿತರಿಗೆ ನೆರವಾಗಿ ತೋರಿಸಲಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ. ಟಿ .ನಾಗಣ್ಣ ಸವಾಲು ಹಾಕಿದ್ದಾರೆ.

ಇಂದು ನಗರದ ಪಕ್ಷದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯ ಮಹಾದುರಂತ ರಾಷ್ಟ್ರವನ್ನು ಅಪ್ಪಳಿಸುತ್ತಿರುವ ಈ ಸಮಯದಲ್ಲಿ ಜನಸಾಮಾನ್ಯರಿಗೆ ಬೆಡ್ ಗಳು, ಐಸಿಯು, ವೆಂಟಿಲೇಟರ್, ಆಕ್ಸಿಜನ್ ಸಮಯಕ್ಕೆ ಸಿಗದೆ ಪ್ರತಿ ದಿನ ನೂರಾರು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ ಗಳಾಗುತ್ತಿರುವುದು ಕಟುವಾಸ್ತವ ಎಂದು ಕಿಡಿಕಾರಿದರು.

ಕೊರೊನಾ ಮಹಾ ಮಾರಿಯ ಮೊದಲನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಹಲವಾರು ವೈಫಲ್ಯಗಳ ನಂತರ ಎರಡನೇ ಅಲೆಯಲ್ಲಿಯೂ ಸಹ ಪೂರ್ವಯೋಜಿತವಾಗಿ ಏನನ್ನು ಸಿದ್ಧಪಡಿಸಿಕೊಳ್ಳದೆ ಸಂಪೂರ್ಣ ವೈಫ ಲ್ಯ ಕಂಡಿದೆ. ಪರಿಣಾಮ ರಾಜ್ಯದಲ್ಲಿ ಇಂದು ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರದ ಇಷ್ಟೆಲ್ಲಾ ವೈಫಲ್ಯ ಗಳಿದ್ದರೂ ಸಹ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತ ಕಡೆ ಗಮನಹರಿಸಿ ಸಮರೋಪಾದಿಯಲ್ಲಿ ವೈಫಲ್ಯಗಳನ್ನು ಸರಿಪಡಿಸುವುದನ್ನು ಬಿಟ್ಟು ಬೆಡ್ ಬ್ಲಾಕಿಂಗ್ ಎಂಬ ದಂಧೆಯನ್ನು ಬಯಲಿಗೆಳೆದಿದ್ದೇನೆ ಎಂಬಂತೆ ಮಾಧ್ಯಮಗಳ ಮುಂದೆ ಫೋಸ್ ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು.

ತಮ್ಮ ಬಿಜೆಪಿ ಸರ್ಕಾರದ ಮಂತ್ರಿ ಮಹೋದಯರು ಈ ದಂಧೆಯಲ್ಲಿ ನಿರತರಾಗಿ ಇದ್ದರೂ ಸಹ ಯಾವುದೋ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ಬೃಹತ್ ತಿಮಿಂಗಿಲಗಳನ್ನು ಹಿಡಿಯಲಾರದೆ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಇಂದು ರೆಮಿಡಿ ಸಿವರ್ ಔಷಧ, ಆಕ್ಸಿಜನ್ ಸಿಲಿಂಡರ್ ಕಾಳಸಂತೆಯಲ್ಲಿ ಅವ್ಯಾಹತವಾಗಿ ಮಾರಾಟವಾಗುತ್ತಿವೆ. ಇವೆಲ್ಲವುಗಳನ್ನು ಮೂಲೋಚ್ಛಾಟನೆ ಮಾಡುವುದು ಬಿಟ್ಟು ಏಕಾಏಕಿ ಯಾವುದೇ ಕಾಲ್ ಸೆಂಟರ್ ಗೆ ನುಗ್ಗಿ ಪೌರುಷವನ್ನು ಪ್ರದರ್ಶಿಸುವುದು ಹೇಡಿತನದ ಲಕ್ಷಣ ಎಂದು ನಾಗಣ್ಣ ಆಕ್ರೋಶವನ್ನು ಹೊರಹಾಕಿದರು.

ಸಂಸದರಿಗೆ ನಿಜಕ್ಕೂ ಬೆಂಗಳೂರಿಗರ ಪ್ರಾಣದ ಮೇಲೆ ಕಿಂಚಿತ್ತಾದರೂ ಕಾಳಜಿ – ಕಳವಳ ಹಾಗೂ ತಾಕತ್ತು ಇದ್ದರ ಈ ಕೂಡಲೇ 28 ಮಂದಿ ರಾಜ್ಯದ ಸಂಸತ್ ಸದಸ್ಯರನ್ನು ಸೇರಿಸಿಕೊಂಡು ಪ್ರಧಾನ ಮಂತ್ರಿಗಳ ಮೇಲೆ ತೀವ್ರ ಒತ್ತಡವನ್ನು ಹೇರುವ ಮೂಲಕ ಈ ತಕ್ಷಣದಿಂದಲೇ ರಾಜ್ಯಕ್ಕೆ ಬೇಕಾಗುವಷ್ಟು ವೈದ್ಯಕೀಯ ಆಮ್ಲಜನಕ ಗಳನ್ನು ತಂದು ರಾಜ್ಯದ ಜನತೆಯ ಪ್ರಾಣವನ್ನು ಉಳಿಸಬೇಕೆಂದು ಆಗ್ರಹಿಸಿದರು.

Leave a Reply

error: Content is protected !!
LATEST
ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತ KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌ ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!!