NEWSಸಂಸ್ಕೃತಿ

ವರಮಹಾಲಕ್ಷ್ಮೀ ಹಬ್ಬದ ಸಂಭ್ರದಲ್ಲಿ ನಾಡಿನ ಜನತೆ: ವರಮಹಾಲಕ್ಷ್ಮೀ ವ್ರತದಿಂದ ಆಗುವ ಲಾಭ ಏನು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಂದು ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ರಾಜ್ಯಾದ್ಯಂತ ಮುಂಜಾನೆಯಿಂದಲೇ ಕಳೆಗಟ್ಟಿದೆ. ಅದರಲ್ಲೂ ಸಿಲಿಕಾನ್ ಸಿಟಿ ಜನ ಮನೆ ಮುಂದೆ ರಂಗೋಲಿ ಹಾಕಿ ಹೂವಿನ ಚಿತ್ತಾರದೊಂದಿಗೆ ಸಂಭ್ರಮಿಸುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ವರಮಹಾಲಕ್ಷ್ಮೀ ವ್ರತ ಅಥವಾ ವರಮಹಾಲಕ್ಷ್ಮೀ ಪೂಜೆಯು ಇಂದು ಮದುವೆಯಾದ ಮಹಿಳೆಯರಿಗೆ ಅತ್ಯಂತ ಶುಭ ಹಬ್ಬಗಳಲ್ಲಿ ಒಂದಾಗಿದೆ. ಶ್ರೀಮಂತಿಕೆ ಮತ್ತು ಸಮೃದ್ಧಿಯ ಹಿಂದೂ ದೇವತೆ, ಭಗವಾನ್ ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿಯನ್ನು ಪೂಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಮುಖ್ಯವಾಗಿ ದಕ್ಷಿಣ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಆಚರಿಸಲಾಗುತ್ತದೆ.

ವಿವಾಹಿತ ಮಹಿಳೆಯರು ತಮ್ಮ ಕುಟುಂಬದ, ವಿಶೇಷವಾಗಿ ಗಂಡಂದಿರ ಯೋಗಕ್ಷೇಮಕ್ಕಾಗಿ ವರಮಹಾಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ವರಮಹಾಲಕ್ಷ್ಮೀ ವ್ರತವು ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಅಥವಾ ಹುಣ್ಣಿಮೆಯ ಹಿಂದಿನ ಶುಕ್ರವಾರ ಬರುತ್ತದೆ. ವರಲಕ್ಷ್ಮೀ ಪ್ರಾರ್ಥನೆಯು ಅಷ್ಟಲಕ್ಷ್ಮೀ , ಸಂಪತ್ತು (ಶ್ರೀ), ಭೂಮಿ (ಭೂ), ಕಲಿಕೆ (ಸರಸ್ವತಿ), ಪ್ರೀತಿ (ಪ್ರೀತಿ), ಕೀರ್ತಿ (ಕೀರ್ತಿ), ಶಾಂತಿ (ಶಾಂತಿ), ಸಂತೋಷ (ತುಷ್ಟಿ) ಯ ಎಂಟು ದೇವತೆಗಳನ್ನು ಪೂಜಿಸುವುದಕ್ಕೆ ಸಮಾನವೆಂದು ನಂಬಲಾಗಿದೆ. ಮತ್ತು ಸಾಮರ್ಥ್ಯ (ಪುಷ್ಟಿ).

ಇತಿಹಾಸದ ಪ್ರಕಾರ, ವರಲಕ್ಷ್ಮೀ ಕ್ಷೀರ ಸಾಗರ ಅಥವಾ ಕ್ಷೀರ ಸಾಗರದಿಂದ ಅವತರಿಸಿದಳು. ಕ್ಷೀರಸಾಗರದ ಮೈಬಣ್ಣ ಹೊಂದಿರುವ ವರಲಕ್ಷ್ಮೀಯನ್ನು ಸಾಮಾನ್ಯವಾಗಿ ವರ್ಣಿಸಲಾಗುತ್ತದೆ. ಮುಖ್ಯವಾಗಿ ಮಹಿಳೆಯರು ಈ ದಿನ ಉಪವಾಸ ಮಾಡುತ್ತಾರೆ, ಕೆಲವು ಪುರುಷರು ಸಹ ಭಾಗವಹಿಸುತ್ತಾರೆ. ವರಲಕ್ಷ್ಮೀ ಪೂಜೆಯು ಮಹಾಲಕ್ಷ್ಮೀ ಪೂಜೆಯಂತೆಯೇ ಇದ್ದರೂ, ದೊರಕ ಮತ್ತು ವಯನ ಕೂಡ ಇದೆ. ವರಲಕ್ಷ್ಮೀ ಪೂಜೆಯ ಸಮಯದಲ್ಲಿ ಕಟ್ಟುವ ಪವಿತ್ರ ದಾರವನ್ನು ಡೋರಕ ಎಂದು ಕರೆಯಲಾಗುತ್ತದೆ ಮತ್ತು ವರಲಕ್ಷ್ಮೀ ಅವರಿಗೆ ನೀಡುವ ಸಿಹಿತಿಂಡಿಗಳನ್ನು ವಯನ ಎಂದು ಕರೆಯಲಾಗುತ್ತದೆ.

ಹೀಗಾಗಿ ಈ ಹಬ್ಬ ಆಚರಸಲು ಈ ಮಧ್ಯೆ ನಗರದ ಮ್ಲಲೇಶ್ವರಂನಲ್ಲಿ ಕೊರೊನಾ ಕಟ್ಟುನಿಟ್ಟನ ನಿಯಮಗಳನ್ನು ಜಾರಿಗೊಳಿಸಿದ್ದರೂ, ಇದು ಮನಗೆ ಮಾತ್ರ ಏಕೆ ಜನಪ್ರತಿನಿಧಿಗಳು ಎಷ್ಟು ಜನಬೇಕಾದರೂ ಸೇರಿಸಬಹುದ ಎಂಬಂತೆ ಕೊರೊನಾ ನಿಯಮಗಳನ್ನು ಲೆಕ್ಕಿಸದೆ ಹಬ್ಬದ ವಸ್ತುಗಳ ಕೊಳ್ಳುವ ಭರಾಟೆಯಲ್ಲಿ ನಿರತದಾಗಿದ್ದರು.

ಮಲ್ಲೇಶ್ವರಂನಲ್ಲಿ ಜನ ನೈಟ್ ಕರ್ಫ್ಯೂ ಶುರುವಾದರೂ ಕೊಂಚವೂ ಫಾಲೋ ಮಾಡದೇ ಹಬ್ಬಕ್ಕಾಗಿ ಹೂ, ಹಣ್ಣು, ಬಟ್ಟೆ, ದೇವರ ಅಲಂಕಾರದ ವಸ್ತುಗಳ ಖರೀದಿಗೆ ನಿನ್ನೆ ರಾತ್ರಿಯೂ ಮುಗಿಬಿದ್ದಿದರು.

ಇನ್ನು ರಾಜ್ಯಾದ್ಯಂತೆ ವರಮಹಾಲಕ್ಷ್ಮೀಯನ್ನು ಮನಮನೆಗೆ ಬರಿ ಮಾಡಿಕೊಳ್ಳಲು ತಮ್ಮ ಶಕ್ತಿಯನುಸಾರ ಹಬ್ಬನ್ನು ಮಾಡಿ ಸಂಭ್ರಮಿಸುತ್ತಿದ್ದಾರೆ. ಆದರೆ, ಕೊರೊನಾ ಭಯದಲ್ಲಿ ಕೆಲ ದೇವಸ್ಥಾನಗಳಿಗೆ ಈಗಗಾಲೇ ಆಯಾಯ ಜಿಲ್ಲಾಡಳಿತ ಬೀಗ ಹಾಕಿದ್ದು, ಭಕ್ತರಿಗೆ ದೇವರ ದರ್ಶನವೂ ಇಲ್ಲದಂತಾಗಿದೆ.

ಇದರಿಂದ ಅಸಮಾಧಾನಗೊಂಡಿರುವ ಭಕ್ತರು ಬಿಜೆಪಿಯವರ ಜನಾಶೀರ್ವಾದ ಯಾತ್ರೆಗೆ ಯಾವುದೇ ಕೊರೊನಾ ನಿಯಮ ಅಡ್ಡಿಯಾಗದು, ಆದರೆ ಜನ ಸಾಮಾನ್ಯರಿಗೆ ಈ ನಿಯಮ ಕಟ್ಟು ನಿಟ್ಟಾಗಿ ಜಾರಿಯಾಗುತ್ತಿದ್ದು, ದಂಡವನ್ನು ವಸೂಲಿ ಮಾಡುತ್ತಿದ್ದಾರೆ ಆಕ್ರೋಶ ಹೊರಹಾಕುತ್ತಿದ್ದಾರೆ.

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ