ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಜಿಲ್ಲೆಯ ಸವದತ್ತಿ ಘಟಕದ ಚಾಲಕ ಕಮ್ ನಿರ್ವಾಹಕ ಶಿವಕುಮಾರ್ ನಿಲಸಾಗರ್ (40) ಅಧಿಕಾರಿಗಳ ಕಿರುಕುಳದಿಂದ ನೊಂದು ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯವರು ಅವರ ಆತ್ಮಹತ್ಯೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮತ್ತು ಸಚಿವರೆ ಕಾರಣ ಎಂದು ಆರೋಪಿಸಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಾವಿರಾರು ಜನರ ನಡುವೆ ನೆರವೇರಿತು. ಈ ಸಮಯದಲ್ಲಿ ಅವರ ಮಕ್ಕಳ ದುಃಖವನ್ನು ನೋಡಿ ಎಲ್ಲರ ಕರುಳು ಕಿಟ್ಟುಬಂದಂತಾಗಿತ್ತು.
ಆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಸಮಸ್ತ ಸಾರಿಗೆ ಸಿಬ್ಬಂದಿ ತಿಳಿಸಿದ್ದಾರೆ.