NEWSನಮ್ಮರಾಜ್ಯರಾಜಕೀಯ

ಬೊಮ್ಮಾಯಿ ಜೆಡಿಎಸ್‌ ಒದ್ದು ಹೊರಹೋಗಿದ್ದು ಏಕೆ: ಉತ್ತರಿಸುವಿರ ಎಚ್‌ಡಿಕೆ ಎಂದ ಈಶ್ವರಪ್ಪ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದು ಹೆಮ್ಮೆಯಿಂದ ಹೇಳುತ್ತೀರಲ್ಲ ಅವರು ಜನತಾದಳ ಒದ್ದುಹೋಗಿದ್ದೇಕೆ? ಇದಕ್ಕೆ ಉತ್ತರ ಕೊಡಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಜನತಾದಳವನ್ನು ಒದ್ದು ಬಿಜೆಪಿಗೆ ಬಂದರು, ಅದರ ಬಗ್ಗೆ ಹೇಳಿ ಕುಮಾರಸ್ವಾಮಿಯವರೇ. ಪಕ್ಷ ಸಂಘಟಿಸುವ ಯಾರಿಗಾದರೂ ಒಳ್ಳೆ ಸ್ಥಾನಮನ ಸಿಗುತ್ತದೆ ಎಂಬುದಕ್ಕೆ ಬೊಮ್ಮಾಯಿ ಅವರೇ ಸಾಕ್ಷಿ ಎಂದರು.

ಇಲ್ಲಿಗೆ ಬಂದಮೇಲೆ ತಲಹರಟೆ ಮಾಡಿದ್ರೆ ಚರಂಡಿಗೆ ಹೋಗಿ ವಾಂತಿ ಮಾಡುತ್ತೀವಿ. ಅಂದಹಾಗೆ ನಮಗೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಜಾಸ್ತಿ ಇದೆ. ನಮ್ಮ ಕಡೆ ಬಂದಾಗ ಯಾವ ಕಾರ್ಯಕರ್ತರನ್ನು ತಿರಸ್ಕಾರ ಭಾವನೆಯಿಂದ ನೋಡಿಲ್ಲ ಕುಮಾರಸ್ವಾಮಿಯವರೇ ಎಂದು ಹೇಳಿದರು.

ನಿಮ್ಮಿಂದ ಇನ್ನು ಎಷ್ಟು ಜನ ಬರ್ತಾರೆ ಗೊತ್ತಿಲ್ಲ. ಜನತಾದಳ ಪಾರ್ಟಿ ಮುಚ್ಚುವ ಹಂತ ತಲುಪಿದೆ. ನೀವು ಅದನ್ನು ಮುಚ್ಚಿಕೊಂಡು ಬಿಜೆಪಿಯಲ್ಲೇ ನಮ್ಮವರಿಗೆ ಸಮಾನ ಸ್ಥಾನ ಸಿಗುತ್ತದೆ ಎಂದು ತೀರ್ಮಾನ ಮಾಡಿ, ಆನಂದ ಪಡಿ. ಆದರೆ ನಿಮ್ಮ ಶಾಸಕರನ್ನು ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇಂದಿನಿಂದ ರಜಾದಿನಗಳಲ್ಲೂ ನೌಕರರ ಬ್ಯಾಂಕ್‌ ಖಾತೆಗೆ ಬರಲಿದೆ ವೇತನ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ