ದೇಶ-ವಿದೇಶ

ಕೊರೊನಾ ವೈರಸ್‌ ಮಟ್ಟಹಾಕಲು ಶ್ರಮಿಸುತ್ತಿವೆ ಎನ್‌ಐಪಿಇಆರ್ ಸಂಸ್ಥೆಗಳು 

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಎನ್‌ಐಪಿಇಆರ್ ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಿದ ಪರಿಹಾರ ವಸ್ತುಗಳ ಪರವಾನಗಿ ಮತ್ತು ವ್ಯಾಪಾರೀಕರಣದ ಆದ್ಯತೆಯ ಮೇಲೆ ಒತ್ತು, ಇದರಿಂದಾಗಿ ಉತ್ಪನ್ನಗಳು ಈ ಅಗತ್ಯದ ಸಮಯದಲ್ಲಿ ಮಾರುಕಟ್ಟೆಯನ್ನು ತ್ವರಿತವಾಗಿ ತಲುಪುತ್ತವೆ.

ಕೋವಿಡ್-19 ನಿಗ್ರಹಿಸಲು ಪ್ರಕ್ರಿಯೆಗಳಲ್ಲಿ ಸಕಾರಾತ್ಮಕವಾಗಿ ಒಳಗೊಂಡಿರುವುದು, ಮತ್ತು ಚಿಕಿತ್ಸೆ ನೀಡುವ ವಿಷಯಗಳಲ್ಲಿ ಬೇಕಾದ ಅಗತ್ಯ ವಸ್ತುಗಳನ್ನು ಗುರುತಿಸುವುದು – ಹೀಗೆ ಹೆಚ್ಚಿನ ಸಂಖ್ಯೆಯ ಬಹುಮುಖಿ ಸಂಶೋಧನಾ ಪ್ರಸ್ತಾಪಗಳನ್ನು ಅನುಮೋದನೆಗಾಗಿ ಸಂಬಂಧಿತ ಏಜೆನ್ಸಿಗಳಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಎನ್‌ಐಪಿಇಆರ್) ಸಂಸ್ಥೆಗಳು ಸಲ್ಲಿಸಿವೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಕೋವಿಡ್-19 ಆಂಟಿವೈರಲ್ ಏಜೆಂಟ್‌ ಗಳನ್ನು ಗುರಿಯಾಗಿಸುವ ಪ್ರೋಟಿಯೇಸ್‌ನ ವಿನ್ಯಾಸ (ಎನ್‌ಐಪಿಇಆರ್ -ಮೊಹಲಿ), ಎಫ್‌.ಡಿ.ಎ ಅನುಮೋದಿತ ಔಷಧ-ದತ್ತಸಂಚಯವನ್ನು (ಎನ್‌ಐಪಿಇಆರ್ -ಮೊಹಲಿ ಮತ್ತು ರಾಯಬರೇಲಿ) , ಕಂಪ್ಯೂಟೇಶನಲ್ ಮಾರ್ಗದರ್ಶಿ ಮೂಲಕ ಔಷಧ-ಮರುಹಂಚಿಕೆ, ಔಷಧಪರವಾದ ಪರಿವರ್ತನೆಗೆ ಅಗತ್ಯ ವಿಶ್ಲೇಷಣೆ (ಎನ್‌ಐಪಿಇಆರ್ -ಮೊಹಲಿ), ಅನಾರೋಗ್ಯ ಪೀಡಿತ ರೋಗಿಗಳಿಗೆ ಸಹಾಯಕ-ಚಿಕಿತ್ಸಾ ಆಧಾರಿತ ಮೂಗಿನ ತುಂತುರು (ಎನ್‌ಐಪಿಇಆರ್ -ಹೈದರಾಬಾದ್), ಕ್ವಾಂಟಮ್-ಡಾಟ್ ಆಧಾರಿತ ಮತ್ತು ಕ್ಷಿಪ್ರ ಕೋವಿಡ್-19 ಪಸರಿಸುವಿಕೆ ತಡೆ ವ್ಯವಸ್ಥೆಗಳು (ಎನ್‌ಐಪಿಇಆರ್ -ಅಹಮದಾಬಾದ್), ಪರೀಕ್ಷೆಯ ವಾಹಕತೆ ಆಧಾರಿತ ಜೈವಿಕ ಸೆನ್ಸಾರ್ ಅಭಿವೃದ್ಧಿ, ಮತ್ತು ಕೋವಿಡ್ -19 ರ ಸಮಯದಲ್ಲಿ ಪಾರ್ಶ್ವವಾಯು ಸಂಭವಿಸುವಿಕೆಯ ನಿಯಂತ್ರಣ ಮುಂತಾದ ಪ್ರಮುಖ ವಿಷಯಗಳು ಈ ಪ್ರಸ್ತಾಪಗಳಲ್ಲಿ ಒಳಗೊಂಡಿವೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಐ.ಐ.ಟಿ ಮತ್ತು ಖಾಸಗಿ ಕೈಗಾರಿಕಾ ಪಾಲುದಾರರೊಂದಿಗೆ ಎನ್‌ಐಪಿಇಆರ್ –ರಾಯಬರೇಲಿ ಸಾಂಪ್ರದಾಯಿಕವಾಗಿ ಬಳಸುವ ಪೊದೆಗಳನ್ನು ಬಳಸಿಕೊಂಡು ಹೊಸ ಇಮ್ಯುನೊ-ಬೂಸ್ಟರ್ ಸೂತ್ರೀಕರಣದ ಅಭಿವೃದ್ಧಿಯಲ್ಲಿ ನೂತನ ಮೆಗಾ ಯೋಜನೆಯನ್ನು ಪ್ರಾರಂಭಿಸಿದೆ.

ಕಡಿಮೆ ವೆಚ್ಚದ ಐ.ಸಿ.ಯು ವೆಂಟಿಲೇಟರ್ ಉತ್ಪಾದನೆ ಕುರಿತು ಎನ್‌.ಐ.ಪಿ.ಇ.ಆರ್ ಕೋಲ್ಕತಾ ಈಗಾಗಲೇ ಸಿ.ಐ.ಎಸ್.ಐ.ಆರ್-ಸಿ.ಇ.ಸಿ.ಆರ್. ಮತ್ತು ಖಾಸಗಿ ತಯಾರಕರ ಸಹಯೋಗದೊಂದಿಗೆ ಸಂಶೋಧನೆ ನಡೆಸಿ ಕಾರ್ಯನಿರ್ವಹಿಸುತ್ತಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಔಷಧೀಯ ಇಲಾಖೆಯ ಅಂಗಸಂಸ್ಥೆಗಳಲ್ಲಿ ಪ್ರಮುಖವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಎನ್‌.ಐ.ಪಿ.ಇ.ಆರ್ ) ಗಳು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿವೆ. ದೇಶದಾದ್ಯಂತ ವಿವಿಧಡೆ ಒಟ್ಟು ಏಳು ಸಂಸ್ಥೆಗಳು – ಅಹಮದಾಬಾದ್, ಹೈದರಾಬಾದ್, ಹಾಜಿಪುರ, ಕೋಲ್ಕತಾ, ಗುವಾಹಟಿ, ಮೊಹಾಲಿ, ಮತ್ತು ರಾಯಬರೇಲಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಂಶೋಧನೆ ಮತ್ತು ನಾವೀನ್ಯತೆ ಚಟುವಟಿಕೆಗಳಲ್ಲಿ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ವಿಶೇಷವಾಗಿ ಹೊಂದಿರುವ ಮತ್ತು ಮಾಡಬಹುದಾದ ವಿಧಾನಗಳಿಗೆ ಸಂಬಂಧಿಸಿದಂತೆ ಕೋವಿಡ್-19 ಸಾಂಕ್ರಾಮಿಕ ವಿರುದ್ಧ ದೇಶದ ಹೋರಾಟದಲ್ಲಿ ಕೊಡುಗೆ ನೀಡಿದ ಎನ್‌.ಐ.ಪಿ.ಇ.ಆರ್ ಸಂಸ್ಥೆಯ ತನ್ನ ಎಲ್ಲಾ ಅಂಗಸಂಸ್ಥೆಗಳ ನಿರ್ದೇಶಕರು ಮತ್ತು ಅಧ್ಯಕ್ಷರ ಜೊತೆಗೆ ವಿಡಿಯೊ ಸಂವಾದ ಮೂಲಕ ಕೇಂದ್ರ ಔಷಧೀಯ ವಿಭಾಗದ ಕಾರ್ಯದರ್ಶಿ ಡಾ.ಪಿ.ಡಿ.ವಘೇಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

“ಮುಖಕವಚ(ಗುರಾಣಿ), ಬಾಗಿಲುಗಳು, ಡ್ರಾಯರ್‌ಗಳು ಮತ್ತು ಎಲಿವೇಟರ್‌ಗಳು, ಆಂಟಿವೈರಲ್ ಮುಖಕವಚಗಳಿಗೆ 3-ಡಿ ಮುದ್ರಿತ ಮೂಲಮಾದರಿಗಳ ತಯಾರಿಕೆ ಮತ್ತು ಚರ್ಮ ಸ್ನೇಹಿ ಗಿಡಮೂಲಿಕೆಗಳ ಸ್ಯಾನಿಟೈಜರ್‌ಗಳನ್ನು ಸ್ಪರ್ಶ-ಕಡಿಮೆ ತೆರೆಯಲು “ಹ್ಯಾಂಡ್ಸ್-ಫ್ರೀ ಆಬ್ಜೆಕ್ಟ್” ಗಳನ್ನು ತಯಾರಿಸಿದೆ. ಈ ಉತ್ಪನ್ನಗಳ ಕೈಗಾರಿಕಾ ಪ್ರಮಾಣದ ಉತ್ಪಾದನೆಯನ್ನು ಇಲಾಖಾ ಸಾರ್ವಜನಿಕ ಕ್ಷೇತ್ರದ ಘಟಕ ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಮಾಡಲಾಗುತ್ತಿದೆ.

ಪಂಜಾಬ್ ಸರ್ಕಾರದ ಸಹಯೋಗದೊಂದಿಗೆ ಎನ್‌.ಐ.ಪಿ.ಇ.ಆರ್‌ (ಮೊಹಲಿ)ಯು ರಾಜ್ಯದಲ್ಲಿ ಕೋವಿಡ್-19 ದೃಢೀಕರಣ ಪರೀಕ್ಷೆಗಳನ್ನು ತ್ವರಿತಗೊಳಿಸಲು ಆರ್.ಟಿ-ಪಿ.ಸಿ.ಆರ್. ಆಧಾರಿತ ಕೋವಿಡ್-19 ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ” ಎಂದು ಎನ್‌.ಐ.ಪಿ.ಇ.ಆರ್ -ಗುವಾಹಟಿ, ಇದರ ನಿರ್ದೇಶಕರು ಮಾಹಿತಿ ನೀಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

“ಅಗತ್ಯವಿರುವವರಿಗೆ ತ್ವರಿತವಾಗಿ ಸಹಾಯವನ್ನು ಒದಗಿಸಲು ಎಲ್ಲಾ ಕೋವಿಡ್-19 ಸಂಬಂಧಿತ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿ ಉಪಕ್ರಮಗಳನ್ನು ನಾವು ಚುರುಕಾಗಿ ಮಾಡಬೇಕು. ಎನ್‌.ಐ.ಪಿ.ಇ.ಆರ್‌.ಗಳಲ್ಲಿ ಅಭಿವೃದ್ಧಿ ಹೊಂದಿದ ಪರಿಹಾರಗಳ ಎಲ್ಲಾ ಪರವಾನಗಿ ಮತ್ತು ವಾಣಿಜ್ಯೀಕರಣದ ಅಂಶಗಳನ್ನು ನಿಯಂತ್ರಕ ಏಜೆನ್ಸಿಗಳ ಮೂಲಕ ಆದ್ಯತೆಯ ಮೇರೆಗೆ ಸಮನ್ವಯಗೊಳಿಸಬೇಕು, ಇದರಿಂದಾಗಿ ಉತ್ಪನ್ನಗಳು ಈ ಅಗತ್ಯದ ಸಮಯದಲ್ಲಿ ಆದಷ್ಟು ಬೇಗನೆ ಮಾರುಕಟ್ಟೆಯನ್ನು ತಲುಪುತ್ತವೆ.

ಈ ಸಂಶೋಧನಾ ಪ್ರಯತ್ನಗಳು ಮತ್ತು ಜನರಿಗೆ ಸಹಾಯ ಮಾಡುವಲ್ಲಿ ಸಾಮಾಜಿಕ ಭಾಗವಹಿಸುವಿಕೆಯ ಮೂಲಕ, ವಿವಿಧ ಗುಂಪುಗಳೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ದೇಶಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಎಲ್ಲಾ ಎನ್‌.ಐ.ಪಿ.ಇ.ಆರ್ ಅಂಗಸಂಸ್ಥೆಗಳು ಬದ್ಧವಾಗಿವೆ “ ಎಂದು ಕೇಂದ್ರ ಔಷಧೀಯ ವಿಭಾಗದ ಕಾರ್ಯದರ್ಶಿ ಡಾ.ಪಿ.ಡಿ.ವಘೇಲಾ  ತಿಳಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...