NEWSರಾಜಕೀಯ

ದುಡ್ಡು ಬೇಡ… ಒಂದು ಕತ್ತೆ ಕೊಡಿಸು!!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಚುನಾವಣೆ ಹತ್ತಿರ ಬಂದಾಗ ಚುನಾವಣೆ ಅಭ್ಯರ್ಥಿಯೊಬ್ಬರು ಒಬ್ಬ ಬಡ ವೃದ್ಧ ಮತದಾರನ ಹತ್ತಿರ ಮತ ಕೆಳಲು ಹೋದ ಮತ್ತು ಅವರ ಕೈಯಲ್ಲಿ 1000 ರೂಪಾಯಿ ಇಟ್ಟು “ಈ ಸಲ ನನಗೆ ಮತ ಹಾಕಬೇಕು” ಎಂದು ಹೇಳುತ್ತಾನೆ.

ಅವಾಗ ಆ ವೃದ್ಧ ಹೇಳಿದರು “ಮಗು ನನಗೆ ಹಣ ಬೇಡ. ನಿನಗೆ ನನ್ನ ಮತ ಬೇಕಾದರೆ ನನಗೆ ಒಂದೇ ಒಂದು ಕತ್ತೆಯನ್ನು ತಂದು ಕೊಡು” ಎಂದು. ಆ ಅಭ್ಯರ್ಥಿಗೆ ಮತ ಬೇಕಾಗಿರುತ್ತದೆ. ಸರಿ ಅಂತ ಒಂದು ಕತ್ತೆಯನ್ನು ಖರೀದಿಸಲು ಹೋಗುತ್ತಾರೆ. ಎಲ್ಲಿ ಹೋದರು 20000 ಕ್ಕಿಂತ ಕಡಿಮೆ ದರದಲ್ಲಿ ಕತ್ತೆ ಸಿಗುವುದಿಲ್ಲ.

ಆಗ ಪುನಃ ವೃದ್ಧನ ಹತ್ತಿರ ಬಂದು ಹೇಳುತ್ತಾರೆ. ಎಲ್ಲಿ ನೋಡಿದರು ಕಡಿಮೆ ದರದಲ್ಲಿ ಕತ್ತೆ ಸಿಗುತ್ತಿಲ್ಲ. ಕಮ್ಮಿ ಎಂದರೂ 20000 ರೂಪಾಯಿಗೆ ಒಂದು ಕತ್ತೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಾನು ನಿಮಗೆ ಕತ್ತೆಯನ್ನು ಖರೀದಿಸಿ ಕೊಡಲು ಸಾಧ್ಯವಿಲ್ಲ. ಬೇಕಾದರೆ 1000 ರೂಪಾಯಿ ಬದಲು 2000 ರೂಪಾಯಿ ಕೊಡಬಲ್ಲೆ ಎಂದು ಹೇಳುತ್ತಾನೆ.

ಆವಾಗ ವೃದ್ಧರು ಹೇಳಿದರು “ಮಗು ಹೆಚ್ಚು ಆಸೆ ಪಡಬೇಡ ನಿನ್ನ ದೃಷ್ಟಿಯಲ್ಲಿ ನನ್ನ ಬೆಲೆ ಕತ್ತೆಗಿಂತಲೂ ಕಡಿಮೆ ಇದೆ. ಒಂದು ಕತ್ತೆ 20000 ರೂಪಾಯಿಗಿಂತ ಕಡಿಮೆ ದರದಲ್ಲಿ ಸಿಗುವುದಿಲ್ಲ ಎಂದಾದರೆ ನಾನು ಮನುಷ್ಯ ಕೇವಲ 1000-2000 ಕ್ಕೆ ಹೇಗೆ ಸಿಗುತ್ತೇನೆ?

“ಎಚ್ಚರ ಮತದಾರ ಎಚ್ಚರ. ನಿಮ್ಮ ಬೆಲೆ ಏನು ಎಂದು ತೋರಿಸಿ

“ಮತ” ಮಾರಾಟಕ್ಕಿಲ್ಲ ( VOTE Not for Sale)

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ