ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಅಂಗನವಾಡಿ ಕಾರ್ಯಕರ್ತೆ ಎಚ್.ಎನ್.ಮೀನಾಕ್ಷಿ ಅವರಿಗೆ ರಾಜ್ಯಮಟ್ಟದ ಜ್ಞಾನ ಚಿಗುರು ಕವಚ ಪ್ರಶಸ್ತಿ ನೀಡಿ ದಾವಣಗೆರೆಯಲ್ಲಿ ಗೌರವಿಸಲಾಯಿತು.
ತಾಲೂಕಿನ ಕಿರನಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿ ಮೀನಾಕ್ಷಿ ಮಾದರಿ ಅಂಗನವಾಡಿ ಕೇಂದ್ರವಾಗಿಸಿ ಅತ್ಯುತ್ತಮ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ದಾವಣಗೆರೆಯ ಶಿಕ್ಷಣ ಜ್ಞಾನ ಸಂಸ್ಥೆಯ ವತಿಯಿಂದ ಕೊಡಲಾಗುವ ರಾಜ್ಯ ಮಟ್ಟದ ಜ್ಞಾನ ಚಿಗುರು ಕವಚ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಸಮುದಾಯದ ಸೇವೆ ವಿಭಾಗದಲ್ಲಿ ಅನೇಕ ಗಣ್ಯರನ್ನು ಗೌರವಿಸಿದ ಈ ಸಂದರ್ಭದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಎಲ್ಲರಿಗೂ ಸೇವಾ ಪ್ರಜ್ಞೆಯನ್ನು ಹೆಚ್ಚಿಸಲಿದೆ ಎಂದು ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿರುವ ಮೀನಾಕ್ಷಿ ಅರನ್ನು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘ ಅಭಿನಂದಿಸಿದೆ.