CrimeNEWSಶಿಕ್ಷಣ-

ಒಬ್ಬನಿಗಾಗಿ ಹಾಸ್ಟೆಲ್‌ನ ಯುವತಿಯರಿಬ್ಬರ ಕಿತ್ತಾಟ – ಅತಿರೇಕಕ್ಕೆ ಹೋಗಿ ವಾರ್ಡನ್ ಬುಡಕ್ಕೆ ಬಂತು

ವಿಜಯಪಥ ಸಮಗ್ರ ಸುದ್ದಿ

ರಾಯಚೂರು: ಒಬ್ಬ ಹುಡುಗನ ಜತೆ ಯುವತಿಯರಿಬ್ಬರು ಚಾಟಿಂಗ್ ಮಾಡುತ್ತಿದ್ದು. ಬಳಿಕ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ರಾಯಚೂರು ನಗರದ ಡಿ.ದೇವರಾಜ ಅರಸ್ ವೃತ್ತಿಪರ ಹಾಸ್ಟೆಲ್​ನಲ್ಲಿ ಜರುಗಿದೆ.

ನಾನು ಚಾಟ್ ಮಾಡೋ ಹುಡುಗನಿಗೆ ನೀನು ಚಾಟ್ ಮಾಡಬೇಡ ಎಂದು ಒಂದೇ ರೂಮಿನಲ್ಲಿ ಇದ್ದ ಇಬ್ಬರು ಯುವತಿಯರ ನಡುವೆ ಕಿರಿಕ್ ಶುರುವಾಗಿದೆ. ಅಲ್ಲದೆ ಒಬ್ಬಾಕೆ ಬಟ್ಟೆ ಬದಲಿಸುವ ವೇಳೆ ಮತ್ತೊಬ್ಬಾಕೆ ತನ್ನ ಬಾಯ್ ಫ್ರೆಂಡ್‌ಗೆ ವಿಡಿಯೋ ಕಾಲ್ ಮಾಡಿ ಆಕೆಯ ಮೈ ಪ್ರದರ್ಶನ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ರಾತ್ರಿ ಬಾಯ್ ಫ್ರೆಂಡ್‌ಅನ್ನು ಹಾಸ್ಟೆಲ್ ಆಚೆ ಕರೆಯಿಸಿ ಬಹಳ ಸಮಯದವರೆಗೆ ಟೈಂ ಪಾಸ್ ಮಾಡಿದ್ದಾರೆ ಎಂಬುವುದು ಸಹ ಬೆಳಕಿಗೆ ಬಂದಿದೆ.

ಈ ವಿಚಾರಗಳನ್ನೆಲ್ಲ ತಿಳಿದು ಅದಕ್ಕೆ ಬ್ರೇಕ್ ಹಾಕಲು ಹೊರಟ ವಾರ್ಡನ್​​ ಅವರನ್ನೇ ಈ ವಿದ್ಯಾರ್ಥಿನಿಯರು ಈಗ ಟಾರ್ಗೆಟ್ ಮಾಡಿದ್ದು, ಸಣ್ಣಪುಟ್ಟ ಲೋಪವನ್ನೇ ದೊಡ್ಡದಾಗಿ ಸೃಷ್ಟಿಸಿ ವಾರ್ಡನ್ ಎತ್ತಂಗಡಿ ಮಾಡಬೇಕು ಎಂದು ವಿದ್ಯಾರ್ಥಿನಿಯರು ಪಟ್ಟುಹಿಡಿದಿದ್ದಾರೆ.

ವೃತ್ತಿಪರ ಹಾಸ್ಟೆಲ್ ವಾರ್ಡನ್ ಗಿರಿಜಾ ಮಾಲಿ ಪಾಟೀಲ್ ವಿದ್ಯಾರ್ಥಿನಿಯರ ಈ ನಡೆಯಿಂದ ಅಸಮಾಧಾನಗೊಂಡಿದ್ದು, ಆಕ್ರೋಶ ಹೊರಹಾಕಿದ್ದಾರೆ. ಹಾಸ್ಟೆಲ್‌ನಲ್ಲಿ ಯಾವಾಗಲೂ ಗಲಾಟೆ, ಪರಸ್ಪರ ಕಿತ್ತಾಟ ನಡೆಯುತ್ತಿದೆ. ನೀರಿನ ವಿಚಾರವಾಗಿ ಸದಾಕಾಲ ಹಾಸ್ಟೆಲ್ ವಿದ್ಯಾರ್ಥಿನಿಯರು ನನಗೆ ಕಿರುಕುಳ ನೀಡುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಈ ಜಗಳ ಅತಿರೇಕಕ್ಕೆ ತಲುಪಿದ್ದು, ವಾರ್ಡನ್ ಎತ್ತಂಗಡಿಗೆ ಎಲ್ಲ ಸಿದ್ಧತೆ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಇಲ್ಲಿ ಸತ್ಯ ಯಾವುದು ಸುಳ್ಳಾವುದು ಎಂಬುದನ್ನು ಮೊದಲು ಸಂಬಂಧಪಟ್ಟ ಅಧಿಕಾರಿಗಳು ತಿಳಿದುಕೊಂಡು ನಂತರ ಕ್ರಮ ಕೈಗೊಳ್ಳಬೇಕು ಎಂದುವುದು ವಾರ್ಡನ್ ಗಿರಿಜಾ ಮಾಲಿ ಪಾಟೀಲ್ ಹೇಳುತ್ತಿದ್ದಾರೆ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ