CrimeNEWSನಮ್ಮರಾಜ್ಯ

KSRTC: ಕಂಡಕ್ಟರ್‌ ಮೊಬೈಲ್‌ ಒಡೆದುಹಾಕಿದ್ದು ಮಹಿಳೆ 9600 ರೂ.ದಂಡ ಕಟ್ಟಿದ್ದು ಪತಿ – ಶಿಕ್ಷೆಯಿಂದ ಆಕೆ ಬಚಾವ್‌ !

ವಿಜಯಪಥ ಸಮಗ್ರ ಸುದ್ದಿ

ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಬಂದ ಮಹಿಳೆಯೊಬ್ಬರು ಸೀಟ್‌ ವಿಚಾರದಲ್ಲಿ ಕ್ಯಾತೆ ತೆಗೆದು ಕಂಡಕ್ಟರ್‌ ಮೊಬೈಲ್‌ ಫೋನ್‌ ಒಡೆದುಹಾಕಿ 9600 ರೂಪಾಯಿಗಳ ದಂಡ ಕಟ್ಟಿರುವ ಘಟನೆ ಹಾಸನ ಬಸ್‌ ನಿಲ್ದಾಣದಲ್ಲಿ ನಡೆದಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹಾಸನದಿಂದ ಶಕಲೇಶಪುರ, ಈ ಮಾರ್ಗದ ಹಾಸನ ವಿಭಾಗ ಹಾಸನ ಘಟಕ -1ರ ಬಸ್‌ ಹತ್ತಿದ್ದಾರೆ. ಈ ವೇಳೆ ಬಸ್‌ ರಶ್‌ ಆಗಿದ್ದರಿಂದ ನಿಂತುಕೊಂಡು ಪ್ರಯಾಣ ಮಾಡಬೇಕಿತ್ತು. ಆದರೆ ಅಲ್ಲಿಯವರೆಗೆ ನಿಂತುಕೊಂಡು ಹೋಗುವುದಕ್ಕೆ ಆಗುವುದಿಲ್ಲ ಎಂದು ಬಸ್‌ ಹೊರಡುವವರೆಗೂ ಸುಮ್ಮನಿದ್ದು ಬಳಿಕ ಬಸ್‌ ಮೂವ್‌ ಆಗಿ ನೂರಾರು ಮೀಟರ್‌ ಹೋದ ಮೇಲೆ ಇಳಿಯುವುದಕ್ಕೆ ಮುಂದಾಗಿದ್ದಾರೆ.

ಇನ್ನು ಆಕೆ ಮಾರ್ಗ ಮಧ್ಯೆ ಇಳಿಯುವುದಕ್ಕೆ ಮುಂದಾಗಿರುವುದನ್ನು ನಿರ್ವಾಹಕ ಕುಮಾರ್‌ ಪ್ರಶ್ನಿಸಿದ್ದಾರೆ. ನೀವು ಬಸ್‌ ನಿಲ್ದಾಣದಿಂದ ಸುಮ್ಮನೆ ಬಂದು ಈಗ ಬಸ್‌ ಇಳಿಯುತ್ತಿದ್ದೀರಿ ಒಂದು ವೇಳೆ ತನಿಖಾಧಿಕಾರಿಗಳು ಬಂದರೆ ನಾವು ಏನು ಮಾಡಬೇಕು ಎಂದು ಕೇಳಿದ್ದಾರೆ.

ಇದರಿಂದ ಕೋಪಗೊಂಡ ಮಹಿಳೆ ನಿರ್ವಾಹಕರಿಗೆ ತಮ್ಮ ಪಾದರಕ್ಷೆಗಳಿಂದ ಹೊಡೆಯುವುದಕ್ಕೆ ಮುಂದಾಗಿದ್ದಾರೆ. ಇದನ್ನು ಅರಿತ ನಿರ್ವಾಹಕ ತಮ್ಮ ಮೊಬೈಲ್‌ ಪೋನ್‌ನಿಂದ ಆಕೆಯ ವರ್ತನೆಯನ್ನು ವಿಡಿಯೋ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ವೇಳೆ ನಿರ್ವಾಹಕನ ಮೊಬೈಲ್‌ ಕಿತ್ತುಕೊಂಡು ಒಡೆದುಹಾಕಿದ್ದಾಳೆ.

ನಿರ್ವಾಹಕನ ಮೊಬೈಲ್‌ ಎರಡು ಹೋಳಾಗಿದೆ. ಇದರಿಂದ ಗಾಬರಿಗೊಂಡ ನಿರ್ವಾಹಕ ಕುಮಾರ್‌ ತಮ್ಮ ಸಹೋದ್ಯೋಗಿ ಚಾಲಕರ ಮೂಲಕ ನಿಗಮದ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಹಾಸನದ ಕೇಂದ್ರೀಯ ಬಸ್‌ ನಿಲ್ದಾಣಕ್ಕೆ ಬಸ್‌ ತಿರುಗಿಸಿಕೊಂಡು ಹೋಗಿದ್ದಾರೆ.

ಈ ವೇಳೆ ಪೊಲೀಸರು ಮತ್ತು ನಿಗಮದ ಅಧಿಕಾರಿಗಳು ಬಸ್‌ ನಿಲ್ದಾಣಕ್ಕೆ ಬಂದು ವಿಚಾರಣೆ ಮಾಡಿದಾಗ ಮಹಿಳೆ ಕಂಡಕ್ಟರ್‌ಗೆ ಪಾದರಕ್ಷೆಯಿಂದ ಹೊಡೆಯುವುದಕ್ಕೆ ಮುಂದಾಗಿದ್ದು ಅಲ್ಲದೆ ಅವರ ಮೊಬೈಲ್‌ ಕಿತ್ತುಕೊಂಡು ಒಡೆದುಹಾಕಿದ್ದಾಳೆ. ಇದರಲ್ಲಿ ನಿರ್ವಾಹಕನ ತಪ್ಪು ಏನು ಇಲ್ಲ ಎಂದು ಸಹ ಪ್ರಯಾಣಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಬಳಿಕ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲೇ ಮಹಿಳೆ ತನ್ನ ಗಂಡನಿಗೆ ಪೋನ್‌ ಮಾಡಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಆಕೆಯ ಪತಿ ತನ್ನ ಹೆಂಡತಿ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಒಡೆದುಹಾಕಿರುವ ಮೊಬೈಲ್‌ ಪೋನ್‌ ಮೌಲ್ಯಕ್ಕೆ ಸಮಾನಾದ ಬೇರೊಂದು ಹೊಸ ಫೋನ್‌ಅನ್ನು ನಿರ್ವಾಹಕರಿಗೆ ತೆಗೆದುಕೊಟ್ಟು ಕ್ಷಮೆ ಕೇಳಿದ್ದಾರೆ.

ಹೆಂಡತಿ ಮಾಡಿದ ತಪ್ಪಿಗೆ ಗಂಡ ಬಂದು ಕ್ಷಮೆ ಕೇಳಿ ಹೊಸ ಮೊಬೈಲ್‌ ತೆಗೆದುಕೊಟ್ಟಿದ್ದರಿಂದ ನಿರ್ವಾಹಕ ಕುಮಾರ್‌ ಮತ್ತು ನಿಗಮದ ಅಧಿಕಾರಿಗಳು ಆಕೆಯ ವಿರುದ್ಧ ಯಾವುದೇ ದೂರು ದಾಖಲಿಸುವುದು ಬೇಡ ಎಂದು ಮಾನವೀಯತೆ ದೃಷ್ಟಿಯಿಂದ ಬಿಟ್ಟು ಕಳುಹಿಸಿದ್ದಾರೆ.

ಆದರೆ, ಈ ರೀತಿ ಸಾರಿಗೆ ಸಿಬ್ಬಂದಿ ನಡೆದುಕೊಂಡಿದ್ದರೆ ಅವರು ಸುಮ್ಮನೆ ಬಿಡುತ್ತಿದ್ದರೆ, ಖಂಡಿತ ಬಿಡುತ್ತಿರಲಿಲ್ಲ. ಮೇಲಧಿಕಾರಿಗಳು ಮೊದಲು ಅಮಾನತು ಮಾಡುತ್ತಿದ್ದರು. ಪೊಲೀಸ್‌ ಕೇಸ್‌ ಕೂಡ ದಾಖಲಾಗುತ್ತಿತ್ತು. ಜತೆಗೆ ಹೊಸ ಫೋನ್‌ ಕೂಡ ಕೊಡಿಸಬೇಕಿತ್ತು. ಆದರೂ ಸಮಸ್ಯೆಯನ್ನು ಎದುರಿಸಬೇಕಿತ್ತು.

ದಾಬಸ್‌ಪೇಟೆಯಲ್ಲೂ ಘಟನೆ – ಮಾಡದ ತಪ್ಪಿಗೆ ಕೋರ್ಟ್‌ಗೆ ಅಲೆಯುತ್ತಿರುವ ಸಿಬ್ಬಂದಿ: ಕೆಲವು ತಿಂಗಳುಗಳ ಹಿಂದೆ ದಾಬಸ್‌ಪೇಟೆ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಆಯತಪ್ಪಿ ಬಿದ್ದಿದ್ದಾರೆ. ಆದರೆ ಅವರು ಬಸ್‌ನಲ್ಲಿ ಬಿದ್ದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೂ ಆಕೆ ನಾನು ಬಸ್‌ನಿಂದ ಬಿದ್ದೆ ಎಂದು ಹೇಳಿ ಪೊಲೀಸ್‌ ದೂರು ನೀಡಿದ್ದಾರೆ. ಈ ಬಗ್ಗೆ ಆ ಬಸ್‌ ಸಿಬ್ಬಂದಿಗೆ ಮಾಹಿತಿಯೇ ಇಲ್ಲ. ಅಂದು ಅವರ ಬಸ್‌ನಲ್ಲಿ ಯಾರು ಬಿದ್ದಿಲ್ಲ. ಬಿದ್ದಿದ್ದರೆ ಪ್ರಯಾಣಿಕರೇ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರು.

ಆ ರೀತಿಯ ಘಟನೆ ನಡೆಯದಿದ್ದರು ಪೊಲೀಸ್‌ ದೂರು ದಾಖಲಿಸಿ ಸುಖಸುಮ್ಮನೇ ಮಾಡದ ತಪ್ಪಿಗೆ ಚಾಲಕ ಮತ್ತು ನಿರ್ವಾಹಕರಿಬ್ಬರು ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕೂಡ ಏನು ಕ್ರಮ ಕೈಗೊಳ್ಳದೆ ನಿರಪರಾಧಿಗಳನ್ನು ಅಲೆಸುತ್ತಿದ್ದಾರೆ. ಆದರೆ ಇಲ್ಲಿ ತಪ್ಪು ಮಾಡಿದ ಮಹಿಳೆಯನ್ನು ಮಾನವೀಯತೆ ದೃಷ್ಟಿಯಿಂದ ಬಿಟ್ಟು ಕಳುಹಿಸಲಾಗಿದೆ.

ಇಂಥ ಮಾನವೀಯತೆಯನ್ನು ಏಕೆ ಚಾಲನಾ ಸಿಬ್ಬಂದಿಗೆ ತೋರಿಸುವುದಿಲ್ಲ ಎಂಬುವುದೇ ಬಹಳ ನೋವಿನ ಸಂಗತಿಯಾಗಿದೆ. ಇನ್ನಾದರೂ ನೌಕರರನ್ನು ಗೌರವದಿಂದ ಕಾಣಬೇಕು ಎಂಬುವುದು ನಮ್ಮ ಕಳಕಳಿಯ ಮನವಿ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ