NEWSನಮ್ಮರಾಜ್ಯರಾಜಕೀಯಲೇಖನಗಳು

ದೊಡ್ಡ ಗೌಡರ ಕುಟುಂಬದ ಮೇಲೆ ಹೆಗಡೆಯವರ ಕೆಟ್ಟ ದೃಷ್ಟಿಯೇ ಬಿದ್ದಿರಬಹುದಾ?

ವಿಜಯಪಥ ಸಮಗ್ರ ಸುದ್ದಿ

ತ್ತೀಚೆಗೆ ಒಂದು ದಿನ ನಮ್ಮ ಮನೆಗೆ ವಿಜಯವಾಣಿ ಪತ್ರಿಕೆ ಬಂದಿರಲಿಲ್ಲ. ಮೊನ್ನೆ ನನ್ನ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದಾಗ ಟೀಪಾಯಿ ಮೇಲೆ ಅದೇ ದಿನದ ಪತ್ರಿಕೆ ಇತ್ತು. ಹಾಗೇ ಕಣ್ಣು ಹಾಯಿಸುತ್ತಿದ್ದಾಗ ಸುದ್ದಿಯೊಂದನ್ನು ನೋಡಿದೆ. ಹಳೆಯ ನೆನಪಿನ ಸುರುಳಿಯೊಂದು ಬಿಚ್ಚಿಕೊಂಡಿತು. ಅದನ್ನೇ ನಿಮ್ಮ ಮುಂದಿಡುತ್ತಿದ್ದೇನೆ.

ಮಾನ್ಯ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕಮಾರ ಸ್ವಾಮಿಯವರು ತಮ್ಮ ತಂದೆಯವರ ಮೇಲೆ ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಿದೆ. ಅವರು ಓಡಾಡದಂತಾಗಿದ್ದಾರೆ ಎಂದು ಅಲವತ್ತುಕೊಂಡು ಕಣ್ಣೀರಿಟ್ಟಿದ್ದಾರೆ.

ಅವರ ಕಣ್ಣೀರು ನೋಡಿದ ಸೋದರ ರೇವಣ್ಣನವರ ಕಣ್ಣಲ್ಲೂ ನೀರು ಬಂದಿದೆ. ಕಣ್ಣೀರು ಗೌಡರ ಹಾಗೂ ಕುಟುಂಬಕ್ಕೊಂದು ಬಳುವಳಿ. ಇರಲಿ. ದೊಡ್ಡ ಗೌಡರಿಗೇನೂ ಚಿಕ್ಕಪುಟ್ಟ ವಯಸ್ಸಲ್ಲ. ಅಲ್ಲದೇ ಮನಸ್ಸಿಗೆ ಮುಪ್ಪು ಬರದಿರಬಹುದು. ಆದರೆ ದೇಹಕ್ಕೆ ಮುಪ್ಪು ಬರುವುದು ಸಹಜ.

ಕುಮಾರಸ್ವಾಮಿ ಅವರ ಯೋಚನಾ ಲಹರಿ ಸ್ವಲ್ಪ ಮಟ್ಟಿಗೆ ನಿಜವೂ ಇರಬಹುದು. 1989ರ ಮುನ್ನ ಜನತಾದಳ ಅಧಿಕಾರದಲ್ಲಿದ್ದು ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿ ಆಗಿದ್ದರು. ದೊಡ್ಡಗೌಡರೂ ಅವರ ಸಚಿವ ಸಂಪುಟದಲ್ಲಿದ್ದರು. ಅವರ ನಡುವೆ ಒಡಕು ಮೂಡಿ ದೊಡ್ಡ ಗೌಡರು ಪಕ್ಷಕ್ಕೆ ರಾಜಿನಾಮೆಯಿತ್ತು ಹೊರಬಂದು ಸಮಾಜವಾದಿ ಜನತಾ ದಳ ಎಂಬ ಪಕ್ಷ ಹುಟ್ಟು ಹಾಕಿದರು. 1989ರ ಚುನಾವಣೆಯಲ್ಲಿ ಎಲ್ಲ 224 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಹಾಕಿ ಹೆಗಡೆಯವರನ್ನೂ ಜನತಾದಳವನ್ನೂ ಸೋಲಿಸಿದರು. ಅವರ ಪಕ್ಷವೂ ಅತ್ಯಂತ ಹೀನಾಯ ರೀತಿಯಲ್ಲಿ ಸೋತಿತು.

ಆ ಸಂದರ್ಭದಲ್ಲಿ ಖ್ಯಾತ ಭವಿಷ್ಯಕಾರರೂ ಜ್ಯೋತಿಷಿಗಳೂ ಆದವರೊಬ್ಬರ (ಅವರ ಹೆಸರು ಬೇಡ) ಮನೆಗೆ ಹೋದ ದೊಡ್ಡಗೌಡ್ರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಅಲವತ್ತುಕೊಂಡರು. ಆಗ ಆ ಭವಿಷ್ಯಕಾರರು ಹೆಗಡೆಯವರ ಜೊತೆ ಹಗೆತನ ಬೇಡ. ನಿಮಗೆ ಶಾಪ ತಟ್ಟುತ್ತದೆ. ಜೊತೆಗೆ ನೀವು ಯಾವುದೇ ಅಧಿಕಾರ ಪಡೆದರೂ ಪೂರ್ಣ ಅವಧಿ ಮುಗಿಸುವುದಿಲ್ಲ. ಜಾರು ಬಂಡೆಯ ತುದಿಯಲ್ಲಿ ಕುಳಿತಂತೆ ಕೆಳಕ್ಕೆ ಜಾರಿಬಿಡುತ್ತೀರಿ ಎಂದು ಹೇಳಿದರು.

ಆದರೆ ದೊಡ್ಡಗೌಡರು ಆ ಸಲಹೆಯನ್ನು ತಕ್ಷಣಕ್ಕೆ ಸ್ವೀಕರಿಸಲಿಲ್ಲ. ಹಾಗಾಗಿ ಅವರು ಯಾವ ಅಧಿಕಾರವನ್ನೂ ಪೂರ್ಣಾವಧಿ ಮುಗಿಸಲಿಲ್ಲ. ಆದರೆ ಎಷ್ಟೋ ಸಮಯದ ನಂತರ ಅವರು ಆತ್ಮೀಯ ಮತ್ತು ಗೌರವಾನ್ವಿತ ಹಿರಿಯ ಪತ್ರಕರ್ತರೊಬ್ಬರ ಸತತ ಮನವೊಲಿಕೆಯ ನಂತರ ಹೆಗಡೆಯವರ ಜೊತೆ ರಾಜಿಯಾದರು. ತತ್ಫಲವಾಗಿ 1994ರಲ್ಲಿ ಮುಖ್ಯಮಂತ್ರಿಯಾದರು. ಪ್ರಧಾನಿ ಸ್ಥಾನಕ್ಕೆ ಆಯ್ಕೆ ಆದುದರಿಂದ ಅವಧಿಗೆ ಮುಂಚೆಯೇ ಮುಖ್ಯ ಮಂತ್ರಿ ಸ್ಥಾನ ತ್ಯಜಿಸಿದರು. ಅಲ್ಲಿಯೂ ಪೂರ್ಣಾವಧಿ ಇರಲಿಲ್ಲ.

ಈ ಪರಂಪರೆ ಅವರ ಪುತ್ರ ಕುಮಾರಸ್ವಾಮಿ ಅವರ ಕಾಲಕ್ಕೂ ಮುಂದುವರಿಯಿತು. ಮುಖ್ಯ ಮಂತ್ರಿ ಎಸ್. ಎಂ. ಕೃಷ್ಣ ಅವರು ವಿಧಾನ ಸಭೆ ವಿಸರ್ಜಿಸಿ ಚುನಾವಣೆಗೆ ಹೋದಾಗ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. (ಇದೇ ಭವಿಷ್ಯಕಾರರು ವಿಧಾನ ಸಭೆ ವಿಸರ್ಜಿಸದಂತೆ ಕೃಷ್ಣ ಅವರಿಗೂ ಸಲಹೆ ಮಾಡಿದ್ದರು. ಈ ಬಗ್ಗೆ ಮುಂದೆ ಬರೆಯುತ್ತೇನೆ.) ಆಗ ಕಾಂಗ್ರೆಸ್ ಜೊತೆ ಕೃಜೋಡಿಸಿದ ದೊಡ್ಡ ಗೌಡರು ಮಗನನ್ನು ಉಪ ಮುಖ್ಯ ಮಂತ್ರಿ ಮಾಡಿದರು. ಆಗಲೂ ಕುಮಾರ ಸ್ವಾಮಿಯವರು ಅವಧಿ ಪೂರೈಸಲಿಲ್ಲ.

ಮುಖ್ಯ ಮಂತ್ರಿಯಾಗುವ ಆಸೆಯಿಂದ 40 ಜನ ಜೆಡಿಎಸ್ ಶಾಸಕರ ಜೊತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿ ಬಿಜೆಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಿದರು. ಆಗಲೂ ಸಂಪೂರ್ಣ ಅವಧಿ ಅಧಿಕಾರದಲ್ಲಿರಲಿಲ್ಲ. ಕಳೆದ ಚುನಾವಣೆಯಲ್ಲೂ ಮುಖ್ಯ ಮಂತ್ರಿ ಪದವಿ ಕುಮಾರ ಸ್ವಾಮಿಯವರನ್ನು ಹುಡುಕಿಕೊಂಡು ಬಂದಿತು ಆದರೂ ಪೂರ್ಣಾವಧಿ ಮುಗಿಸಲಾಗಲಿಲ್ಲ.

ಈ ಎಲ್ಲ ಬೆಳವಣಿಗೆಗಳನ್ನೂ ವಿಶ್ಲೇಷಿಸಿದಾಗ ಕುಮಾರ ಸ್ವಾಮಿಯವರು ಭಾವಿಸಿದಂತೆ ದೊಡ್ಡ ಗೌಡರು ಕುಟುಂಬದ ಮೇಲೆ ಹೆಗಡೆಯವರ ಕೆಟ್ಟ ದೃಷ್ಟಿಯೇ ಬಿದ್ದಿರಬಹುದಾ?

l ವೆಂಕಟನಾರಾಯಣ,
ಹಿರಿಯ ಪತ್ರಕರ್ತ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ KSRTC ಬಸ್‌-ಬೈಕ್ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್...