CrimeNEWSದೇಶ-ವಿದೇಶ

ಪೊಲೀಸರ ಕ್ರೌರ್ಯದಿಂದ ರೈಲಿಗೆ ಸಿಲುಕಿ ಎರಡೂ ಕಾಲುಗಳ ಕಳೆದುಕೊಂಡ ಬೀದಿಬದಿ ವ್ಯಾಪಾರಿ

ವಿಜಯಪಥ ಸಮಗ್ರ ಸುದ್ದಿ

ಕಾನ್ಪುರ: ಪೊಲೀಸರು ಎಸೆದ ತನ್ನ ತಕ್ಕಡಿ ತೆಗೆದುಕೊಳ್ಳಲು ರೈಲ್ವೆ ಹಳಿ ಪ್ರವೇಶಿಸಿದ ಬೀದಿಬದಿ ವ್ಯಾಪಾರಿ ಬಾಲಕ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ಜರುಗಿದೆ.

ಕಾನ್ಪುರದ ಕಲ್ಯಾಣಪುರ್ ಬಳಿಯ ಸಾಹೇಬ್ ನಗರದ ನಿವಾಸಿ 17 ವರ್ಷದ ಅರ್ಸಲಾನ್ ಎರಡೂ ಕಾಲನ್ನು ಕಳೆದುಕೊಂಡ ಬಾಲಕ. ಈ ವೇಳೆ ತೀವ್ರ ಗಾಯೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಎಸ್‌ಡಿಪಿಜಿಐಗೆ ದಾಖಲಿಸಲು ವೈದ್ಯರು ಸೂಚಿಸಿದ್ದಾರೆ.

ಪ್ರತಿದಿನದಂತೆ ಶುಕ್ರವಾರ ಸಂಜೆ ಅರ್ಸಲಾನ್ ಜಿಟಿ ರಸ್ತೆಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ. ಆ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಶದಬ್ ಖಾನ್ ಮತ್ತು ಹೆಡ್ ಕಾನ್ಸ್ಟೇಬಲ್ ರಾಕೇಶ್ ಕುಮಾರ್ ಅರ್ಸಲಾನ್ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೆ ತಕ್ಕಡಿಯನ್ನು ರೈಲು ಹಳಿಗಳ ಮೇಲೆ ಎಸೆದಿದ್ದಾರೆ.

ಭಯಭೀತಗೊಂಡ ಅರ್ಸಲಾನ್ ಏನನ್ನು ಯೋಚಿಸಿದೆ ಮರುಕ್ಷಣವೇ ತಕ್ಕಡಿ ಎತ್ತಿಕೊಳ್ಳಲು ರೈಲು ಹಳಿ ತಲುಪಿದಾಗ ವೇಗವಾಗಿ ಬರುತ್ತಿದ್ದ ಮೆಮು ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಆತನ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತ ಶ್ರಾವವೂ ಆಗಿದೆ.

ಕೂಡಲೇ ಜನರು ಮತ್ತು ಪೊಲೀಸರು ಆ ಬಾಲಕನ್ನು ರೈಲುಹಳಿಯಿಂದ ಎತ್ತಿಕೊಂಡು ಹೋಗುವಾಗ ಎರಡೂ ಕಾಲುಗಳು ಸಂಪೂರ್ಣ ನಜ್ಜುಗುಜ್ಜಾಗಿರುವುದನ್ನು ತೋರಿಸುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಷಯ ತಿಳಿದ ಕಾನ್ಪುರ ಪಶ್ಚಿಮ ಡಿಸಿಪಿ ವಿಜಯ್ ಧುಲ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಬದಿಯ ವ್ಯಾಪಾರಿ ಅರ್ಸಲಾನ್ ಮೇಲೆ ಹಲ್ಲೆ ನಡೆದಿರುವುದು, ಆತನ ತಕ್ಕಡಿಯನ್ನು ರೈಲು ಹಳಿಗಳ ಮೇಲೆ ಎಸೆದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಸತ್ಯ ಎಂಬುವುದು ಕಂಡುಬಂದಿದೆ. ಹೀಗಾಗಿ ಆ ಇಬ್ಬರೂ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಮತ್ತು ಎಸಿಪಿ ಮಟ್ಟದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತ ಅರ್ಸಲಾನ್‌ನ ಪರಿಸ್ಥಿತಿ ಗಂಭೀರವಾಗಿದ್ದು, ಆತನ ಕಾಲುಗಳು ತುಂಡರಿಸಿದ್ದು, ಹೆಚ್ಚಿನ ರಕ್ತ ಸೋರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಟ್ಟಾರೆ ಪೊಲೀಸರ ರಕ್ಕಸ ನಡೆಗೆ ಬಡ ಬೀದಿಬದಿ ವ್ಯಾಪಾರಿ ಬಾಲಕನ ಕಾಲು ಶಾಶ್ವತವಾಗಿ ಹೋಗಿದ್ದು, ಆತನ ಪ್ರಾಣದ ಬಗ್ಗೆ ಯಾವುದೇ ಭರವಸೆಯೂ ಇಲ್ಲದಂತಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ