NEWSದೇಶ-ವಿದೇಶನಮ್ಮರಾಜ್ಯ

ಯೂಟ್ಯೂಬ್‍ನ ಸೆಕ್ಸ್ ಜಾಹೀರಾತಿನಿಂದ ಪರೀಕ್ಷೆ ಸಿದ್ಧತೆಗೆ ಅಡ್ಡಿ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿ

75 ಲಕ್ಷ ರೂ. ಪರಿಹಾರ ಕೇಳಿದ ನಿರುದ್ಯೋಗಿಗೆ ಬಿದ್ದು 25 ಸಾವಿರ ರೂ. ದಂಡ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಯೂಟ್ಯೂಬ್‍ನಲ್ಲಿ ಬರುವ ಸೆಕ್ಸ್ ಸಂಬಂಧಿತ ಪ್ರಚೋದನಕಾರಿ ಜಾಹೀರಾತುಗಳಿಂದ ನಾನು ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಅಡ್ಡಿಯಾಯಿತು ಎಂದು ಆರೋಪಿಸಿ ಮಧ್ಯಪ್ರದೇಶದ ನಿರುದ್ಯೋಗಿ ಯುವಕನೊಬ್ಬ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಯೂಟ್ಯೂಬ್‍ನಿಂದ 75 ಲಕ್ಷ ರೂಪಾಯಿ ಪರಿಹಾರ ಕೋರಿದ್ದಾನೆ.

ಮಧ್ಯಪ್ರದೇಶದ ನಿರುದ್ಯೋಗಿ ಯುವಕ ಆನಂದ ಕಿಶೋರ ಚೌಧರಿ ಎಂಬಾತನೆ ಕೋರ್ಟ್ ಮೆಟ್ಟಿಲೇರಿದ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿ.

ಈತ ಪೊಲೀಸ್ ಹುದ್ದೆಯ ಆಕಾಂಕ್ಷಿಯಾಗಿದ್ದು, ಪರೀಕ್ಷೆಗೆ ತಯಾರಿ ನಡೆಸಿದ್ದ. ಆದರೆ ಯೂ ಟ್ಯೂಬ್‍ನಲ್ಲಿ ಬರುವ ಸೆಕ್ಸ್ ಸಂಬಂಧಿತ ಪ್ರಚೋದನಕಾರಿ ಜಾಹೀರಾತಿನಿಂದ ತನಗೆ ಓದಲು ಸಾಧ್ಯವಾಗಿಲ್ಲ, ಇದರಿಂದ ನಾನು ಪರಿಕ್ಷೆಗೆ ಸಿದ್ಧವಾಗುವುದಕ್ಕೆ ಅಡ್ಡಿಯಾಯಿತು ಎಂದು ಆರೋಪ ಮಾಡಿದ್ದ.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‍ನ ದ್ವಿಸದಸ್ಯರನ್ನೊಳಗೊಂಡ ನ್ಯಾಯಪೀಠ ಈತನ ಆರೋಪವನ್ನು ತಳ್ಳಿ ಹಾಕಿತು. ಅಲ್ಲದೆ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರಿದ್ದ ಈ ನ್ಯಾಯಪೀಠ ಜಾಹೀರಾತು ಇಷ್ಟವಾಗದಿದ್ದರೆ ಅದನ್ನು ನೋಡುವ ಅಗತ್ಯವಿರಲಿಲ್ಲ, ಇಂಥ ಕ್ಷುಲ್ಲಕ ದೂರುಗಳನ್ನು ತಂದು ಕೋರ್ಟ್‌ನ ಸಮಯ ಹಾಳು ಮಾಡಬೇಡಿ ಎಂದು ಛೀಮಾರಿ ಹಾಕಿತು.

ಅಲ್ಲದೆ ಅಭ್ಯರ್ಥಿ ನಿರುದ್ಯೋಗಿ ಯುವಕ ಆನಂದ ಕಿಶೋರ ಚೌಧರಿಗೆ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇನ್ನು ದಂಡದ ಹಣವನ್ನು ಸುಪ್ರೀಂ ಕೋರ್ಟ್‌ನ ಧ್ಯಾನ ಕೇಂದ್ರಕ್ಕೆ ನೀಡುವಂತೆ ನ್ಯಾಯಪೀಠ ಸೂಚಿಸಿದೆ.

ಈ ವೇಳೆ ಆನಂದ ಕಿಶೋರ ಚೌಧರಿ ತಾನು ನಿರುದ್ಯೋಗಿ ನನಗೆ ದಂಡ ವಿಧಿಸಿದರೆ ಅದನ್ನು ಬರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಬೇಡಿಕೊಂಡನು. ಹೀಗಾಗಿ ಪ್ರಾರಂಭದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿದ್ದ 1 ಲಕ್ಷ ರೂಪಾಯಿ ದಂಡವನ್ನು  ಬಳಿಕ  25,000 ರೂಪಾಯಿಗಳಿಗೆ ಇಳಿಕೆ ಮಾಡಿತು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ