NEWSದೇಶ-ವಿದೇಶನಮ್ಮಜಿಲ್ಲೆ

ಸಾಲ ಪ್ರಕರಣ: ವೃದ್ಧರ ಸಾಲ ತೀರಿಸಿ ಮಾನವೀಯತೆ ಮೆರೆದ ನ್ಯಾಯಾಧೀಶ ರಾಕೇಶ್‌ ಕುಮಾರ್

ವಿಜಯಪಥ ಸಮಗ್ರ ಸುದ್ದಿ

ಪಾಟ್ನಾ: ಬ್ಯಾಂಕ್‌ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ ವಯೋವೃದ್ದರೊಬ್ಬರ ಸ್ಥಿತಿಗೆ ಮರುಗಿದ ನ್ಯಾಯಾಧೀಶರೊಬ್ಬರು ವೃದ್ಧರ ಸಾಲ ತೀರಿಸಿದ ಮಾನವೀಯ ಪ್ರಸಂಗ ಬಿಹಾರದಲ್ಲಿ ನಡೆದಿದೆ.

ಬಿಹಾರದ ಜಿಲ್ಲಾ ನ್ಯಾಯಾಧೀಶ ರಾಕೇಶ್‌ ಕುಮಾರ್ ಅವರೇ ವೃದ್ಧರ ಸಾಲ ತೀರಿಸಿ ಮಾನವೀಯತೆ ಮೆರೆದವರು. ಬ್ಯಾಂಕ್‌ನಿಂದ ಸಾಲ ಮಾಡಿದ ರಾಜೀಂದ್ರ ಚೌಹಾನ್ ಎಂಬ ವೃದ್ಧರಿಗೆ 18 ಸಾವಿರ ರೂ.ಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ.

ಸಾಲ ಪಾವತಿ ವಿಳಂಬ ವಿಚಾರ ಸಂಬಂಧ ಬ್ಯಾಂಕ್‌ ಕೋರ್ಟ್‌ನಲ್ಲಿ ಪ್ರಕರಣ ಹೂಡಿತು. ಈ ಪ್ರಕರಣ ಇತ್ಯರ್ಥಕ್ಕಾಗಿ ಲೋಕ ಅದಾಲತ್‌ಗೆ ತೆರಳಿದ್ದರು. ಆದರೆ ಅವರ ಬಳಿ ಕೇವಲ 5 ಸಾವಿರ ರೂ. ಇನ್ನು ಅವರೊಂದಿಗೆ ಬಂದ ವ್ಯಕ್ತಿ ಬಳಿ 3 ಸಾವಿರ ರೂ. ಮಾತ್ರ ಇತ್ತು. ಸಾಲ ತೀರಿಸಲು ಇನ್ನೂ 10 ಸಾವಿರ ರೂ.ಗಳನ್ನು ವೃದ್ದ ಹೊಂದಿಸಬೇಕಿತ್ತು.

ಆ ವೇಳೆ ವೃದ್ಧರ ಸ್ಥಿತಿ ಕಂಡು ಮರುಗಿದ ಜಿಲ್ಲಾ ನ್ಯಾಯಾಧೀಶ ರಾಕೇಶ್‌ ಕುಮಾರ್ ಸಿಂಗ್ ಅವರು ತನ್ನ ಜೇಬಿನಿಂದ 10 ಸಾವಿರ ರೂ.ಗಳನ್ನು ತೆಗೆದು ವೃದ್ಧರ ಕೈಗಿತ್ತಿದ್ದಾರೆ. ಆ ಮೂಲಕ ಬಾಕಿ ಪಾವತಿಯನ್ನು ಪೂರ್ಣಗೊಳಿಸುವಲ್ಲಿ ನೆರವಾದರು.

ಇನ್ನು ನ್ಯಾಯಾಧೀಶರು ನನಗೆ ದೇವರ ರೂಪದಲ್ಲಿ ಬಂದು ಸಹಾಯ ಮಾಡಿದರು ಎಂದು ವೃದ್ದ ಚೌಹಾಣ್ ಸುದ್ದಿಗಾರರ ಬಳಿ ನೊಂದ ಕಣ್ಣೀರಿನೊಂದಿಗೆ ತನ್ನ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ