ಬೆಂಗಳೂರು: ಕಬ್ಬು ಬೆಳೆಗಾರರ ಧರಣಿ ಸ್ಥಳದಿಂದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರನ್ನು ಕಾನೂನು ಭಾಹಿರವಾಗಿ ಪೊಲೀಸರು ದಬ್ಬಾಳಿಕೆ ಮೇಲೆ ಬಂಧಿಸಿ ಕರೆದೊಯ್ದರು ಎಂದು ಆರೋಪಿಸಿ ರಾಜ್ಯದ ವಿವಿಧೆಡೆ ರೈತರು ರಸ್ತೆ ತಡೆ ನಡೆಸಿದರು.
ಬೆಂಗಳೂರಿನಲ್ಲಿ ಧರಣಿ ನಿರತ ಕಬ್ಬು ಬೆಳೆಗಾರ ರೈತರು ಐದನೇ ದಿನ ಸರ್ಕಾರದ ನಿರ್ಲಕ್ಷ ನೀತಿಯ ವಿರುದ್ಧ ಶವಯಾತ್ರೆ ನಡೆಸಲು ಯತ್ನಿಸಿದಾಗ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು, ಕಾರ್ಪೊರೇಟ್ ಉದ್ಯಮಿಗಳ ಮರ್ಜಿಯಲ್ಲಿ ವಾಮ ಮಾರ್ಗದಲ್ಲಿ ವ್ಯವಸ್ಥಿತ ಕಾರ್ಯಯೋಜನೆ ಜಾರಿಗೆ ತರುತ್ತಿದೆ ಎಂದು ಕಿಡಿಕಾರಿದರು.
ಇನ್ನು ದೆಹಲಿಯಲ್ಲಿ ರೈತರು ಒಂದು ವರ್ಷ ಚಳವಳಿ ನಡೆಸಿದ ಕಾರಣ ನವಂಬರ್ 26 ಪ್ರಧಾನಿ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ರೂಪಿಸುತ್ತೇವೆ ಎಂದು ಭರವಸೆ ನೀಡಿ ಒಂದು ವರ್ಷವಾದರೂ ಜಾರಿಗೆ ತಂದಿಲ್ಲ.
ಪದೇ ಪದೇ ರೈತರಿಗೆ ಸುಳ್ಳು ಹೇಳುತ್ತಲೇ ರಾಜ್ಯಭಾರ ಮಾಡುತ್ತಿದ್ದಾರೆ. ಸ್ವಾಮಿನಾಥನ್ ವರದಿ ಜಾರಿಗೆ ತರಲಿಲ್ಲ, ರೈತರ ಆದಾಯ ದ್ವಿಗುಣ ಭರವಸೆ ಈಡೇರಿಸಿಲ್ಲ, ಕೃಷಿ ಉತ್ಪನ್ನಗಳಿಗೆ ಜಿಎಸ್ಟಿ ತೆರಿಗೆ ಹಾಕಿ ಮತ್ತಷ್ಟು ಸಂಕಷ್ಟ ಉಂಟು ಮಾಡಿದ್ದಾರೆ ಎಂದು ಶವ ಯಾತ್ರೆ ಆರಂಭಕ್ಕೂ ಮೊದಲೇ ನಾವು ಅನುಮತಿ ನೀಡಿಲ್ಲ ಎಂದು ಪೊಲೀಸರು ಕಿತ್ತುಕೊಂಡರು ಆಗ ಪೊಲೀಸರು ರೈತರ ನಡುವೆ ವಾಗ್ವಾದ ನಡೆಯಿತು.
ಪೊಲೀಸರ ದಬ್ಬಾಳಿಕೆ ವರ್ತನೆಯನ್ನು ಖಂಡಿಸಿದರು. ಮತ್ತೆ ನೈಜ ರೈತನನ್ನ ಶವದ ರೀತಿ ಮಲಗಿಸಿ ಮೆರವಣಿಗೆ ಮುಂದಾದಾಗ ಬಲತ್ಕಾರವಾಗಿ ದಬ್ಬಾಳಿಕೆಯಿಂದ ಎಲ್ಲ ರೈತರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಸರ್ಕಾರ ಪೊಲೀಸ್ ಬಲದ ಮೂಲಕ ಹೋರಾಟಗಾರರ ಹಕ್ಕನ್ನು ಧಮನಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಕಿಡಿಕಾರಿದರು.
![](https://vijayapatha.in/wp-content/uploads/2022/11/Dharwada-300x168.jpg)
![](https://vijayapatha.in/wp-content/uploads/2022/11/kalburagi--300x160.jpg)
ಇನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರ ಮರ್ಜಿಯಲ್ಲಿ ಸಾಗುತ್ತಿದ್ದು ಚುನಾವಣೆಯ ವೇಳೆ ಸಕ್ಕರೆ ಕಾರ್ಖಾನೆಗಳ ಉಡುಗೊರೆ ನೆಪದಿಂದ, ಕಬ್ಬು ಬೆಳೆಗಾರ ರೈತರಿಗೆ ವಂಚನೆ ಎಸಗುತಿದ್ದು, ಇನ್ನೂ ರೈತರು ಸುಮ್ಮನೆ ಕುಳಿತರೆ, ಬೀದಿಗೆ ತಳ್ಳುತ್ತಾರೆ ಐದು ದಿನದಿಂದ ಧರಣಿ ಕುಳಿತ ರೈತರ ಸಮಸ್ಯೆ ಬಗೆಹರಿಸದೆ, ವಾಮ ಮಾರ್ಗ ಬಳಸುತ್ತಿದ್ದಾರೆ ಇನ್ನೂ ರೈತರು ಸುಮ್ಮನೆ ಕೂರಬಾರದು ಎಂದು ರೈತರಿಗೆ ಕರೆ ನೀಡಿದರು.
![](https://vijayapatha.in/wp-content/uploads/2022/11/tTN-Pur--300x169.jpg)
ಚಳವಳಿ ಹಾಗೂ ಬಂಧನ ರಾಜ್ಯ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್ ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ ಪಾಟೀಲ್, ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಪಿ. ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ಮಹದೇವಸ್ವಾಮಿ, ಗೋವಿಂದರಾಜು ಇದ್ದರು.
![](https://vijayapatha.in/wp-content/uploads/2022/11/Bannur-Farmer-300x163.jpg)
![](https://vijayapatha.in/wp-content/uploads/2024/02/QR-Code-VP-1-1-300x62.png)