NEWSಕೃಷಿನಮ್ಮಜಿಲ್ಲೆ

ಪಾಂಡವಪುರ: ರೈತ ಸಂಘದ ನೂತನ ಅಧ್ಯಕ್ಷರಾಗಿ ಪಿ.ನಾಗರಾಜು ಆಯ್ಕೆ

ವಿಜಯಪಥ ಸಮಗ್ರ ಸುದ್ದಿ

ಪಾಂಡವಪುರ: ರಾಜ್ಯರೈತ ಸಂಘಟನೆ ಮಂಡ್ಯ ಜಿಲ್ಲಾದ್ಯಕ್ಷ ಕೆಂಪುಗೌಡ ಅವರ ನೇತೃತ್ವದಲ್ಲಿ ಪಟ್ಟಣದ ರೈತಸಂಘದ ಕಚೇರಿಯಲ್ಲಿ ತಾಲೂಕು ಪದಾಧಿಕಾರಿಗಳ ಘೊಷಣೆ ಮಾಡಲಾಯಿತು.

ತಾಲೂಕು ನೂತನ ಅಧ್ಯಕ್ಷರಾಗಿ ಪಿ.ನಾಗರಾಜು, ಉಪಾಧ್ಯಕ್ಷರಾಗಿ ಹಾರೋಹಳ್ಳಿ ಲಕ್ಷ್ಮೇಗೌಡರು, ಹರವು ಗೋವಿಂದರಾಜು, ಹರಳಕುಪ್ಪೆ ವೆಂಕಟರಾಮ್, ಬೆಟ್ಟಹಳ್ಳಿ ಮಾಕೇಗೌಡರು, ಮಾವಳ್ಳಿ ಪುಟ್ಟೇಗೌಡರು, ನುಗ್ಗಹಳ್ಳಿ ರಾಮಕೃಷ್ಣ ಆಯ್ಕೆಯಾಗಿದ್ದಾರೆ.

ಇನ್ನು ಕೆನ್ನಾಳು ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ, ಬೇವಿನಕುಪ್ಪೆ ಯೋಗೇಶ್ ಖಜಾಂಚಿ, ಬಿರಸಟ್ಟಹಳ್ಳಿ‌ ಗೀರೀಶ್, ಕಟೇರಿ ಕುಮಾರ್, ಬೇಬಿ ನಟರಾಜ್, ಚಿನಕುರಳಿ ಪುಟ್ಟೆಗೌಡ, ಕದಲಗೆರೆ ರಾಮು, ಪಾಂಡವಪುರ ಪಾರ್ಥ, ಹಾರೋಹಳ್ಳಿ ಸೋಮು, ಕ್ಯಾತನಹಳ್ಳಿ ಚಿದಾನಂದ, ಬ್ಯಾಟರಹಳ್ಳಿ ಪ್ರೇಮ್, ಅಶೋಕ್ ಹರಳಕುಪ್ಪೆ, ರಾಜೇಂದ್ರ ಪಟ್ಟಸೋಮನಹಳ್ಳಿ, ಬನ್ನಂಗಾಡಿ ಶಂಕರ್, ಬೋಮ್ಮಲಪುರ ಉಮೇಶ್, ಸಿಂಗ್ರಿಗೌಡನಕೊಪ್ಪಲು ಬಾಬು, ಡಿಂಕಾ ರಮೇಶ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ತಾಲೂಕು ನೂತನ ಅಧ್ಯಕ್ಷ ಪಿ.ನಾಗರಾಜು ತಾಲೂಕಿನ ರೈತಸಂಘದ ಕಾರ್ಯಕರ್ತರು, ರೈತ ಮುಖಂಡರು ಮತ್ತು ಪದಾಧಿಕಾರಿಗಳನ್ನು ಒಗ್ಗೂಡಿಸಿ ಕೊಂಡು ಸಂಘಟನೆ ಮಾಡುವುದರ ಮೂಲಕ ಮುಂಬರುವ ಚುನಾವಣೆಯಲ್ಲಿ ನಮ್ಮ ನಾಯಕರಾದ ದರ್ಶನ ಪುಟ್ಟಣಯ್ಯ ಅವರನ್ನು ಶಾಸಕರಾಗಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
         ವರದಿ: ವಿಶ್ವನಾಥ್, ಪಾಂಡವಪುರ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ