Breaking NewsNEWSದೇಶ-ವಿದೇಶನಮ್ಮರಾಜ್ಯ

ವಿಶ್ವ ಹೆಮ್ಮಾರಿ ಕೊರೊನಾ ಭೀತಿ: ಹಲವು ರೈಲುಗಳ ಸಂಚಾರಕ್ಕೆ ಮಾ.20ರಿಂದ ತಾತ್ಕಾಲಿಕ ತಡೆ

ನೈಋತ್ಯ ರೈಲ್ವೆ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಪ್ರಿಯಾ ಶೆಟ್ಟಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು:  ಕೊರೊನಾ ರೋಗಾಣು (COVID-19) ಹರಡುವಿಕೆಯ ಹಿನ್ನೆಲೆಯಲ್ಲಿ  ಕೆಲವು  ರೈಲುಗಳ ಸೇವೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ಇಂದಿನಿಂದ ಮಾ.31ರವರೆಗೆ ರದ್ದುಗೊಳಿಸಿರುವುದಾಗಿ   ನೈಋತ್ಯ ರೈಲ್ವೆ, ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

ಯಾವಯಾವ ರೈಲುಗಳ ಸೇವೆಗೆ ತಡೆ

  1. ರೈಲು ಗಾಡಿ ಸಂಖ್ಯೆ 16023/16024 ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಮಾ.20 ರಿಂದ ಮಾ.31 ರವರೆಗೆ
  2. ರೈಲು ಗಾಡಿ ಸಂಖ್ಯೆ 16557/16558 ಮೈಸೂರು-ಕೆ.ಎಸ್.ಆರ್. ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ ಮಾ. 31ರವರೆಗೆ.
  3. ರೈಲು ಗಾಡಿ ಸಂಖ್ಯೆ 17325 ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮಾ. 21ರಿಂದ ಏ.1 ರವರೆಗೆ.
  4. ರೈಲು ಗಾಡಿ ಸಂಖ್ಯೆ 17326 ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ 31ರವರೆಗೆ.
  5. ರೈಲು ಗಾಡಿ ಸಂಖ್ಯೆ 11065 ಮೈಸೂರಿನಿಂದ ರೇಣಿಗುಂಟ ವಾರದ ಎಕ್ಸ್ ಪ್ರೆಸ್ ರೈಲು ಮಾ. 20 ಮತ್ತು 27 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ ಇರುವುದಿಲ್ಲ.
  6. ರೈಲು ಗಾಡಿ ಸಂಖ್ಯೆ 11066 ರೇಣಿಗುಂಟದಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಮಾ. 21 ಮತ್ತು 28 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ.
  7. ರೈಲು ಗಾಡಿ ಸಂಖ್ಯೆ 16217 ಮೈಸೂರಿನಿಂದ ಸಾಯಿನಗರ ಶಿರಡಿ ವಾರದ ಎಕ್ಸ್ ಪ್ರೆಸ್ ರೈಲು ಮಾ. 23 ಮತ್ತು ಮಾ.30 ರಂದು ಪ್ರಾರಂಭವಾಗುವ ಪ್ರಯಾಣ ಸೇವೆ ಇರುವುದಿಲ್ಲ.
  8. ರೈಲು ಗಾಡಿ ಸಂಖ್ಯೆ 16218 ಸಾಯಿನಗರ ಶಿರಡಿಯಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಮಾ. 24 ಮತ್ತು ಮಾ.31 ರಂದು ಪ್ರಯಾಣ ಸೇವೆ ಇರುವುದಿಲ್ಲ.
  9. ರೈಲು ಗಾಡಿ ಸಂಖ್ಯೆ 12079/12080 ಹುಬ್ಬಳ್ಳಿ-ಕೆ.ಎಸ್.ಆರ್. ಬೆಂಗಳೂರು- ಹುಬ್ಬಳ್ಳಿ, ಜನಶತಾಬ್ದಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಮಾ. 20 ರಿಂದ 31ರವರೆಗೆ ಪ್ರಯಾಣ ಸೇವೆ ಇರುವುದಿಲ್ಲ.
  10. ರೈಲು ಗಾಡಿ ಸಂಖ್ಯೆ 06539/06540 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ವಿಷೇಶ ಎಕ್ಸ್ ಪ್ರೆಸ್ ರೈಲು ಮಾ. 20, 24, 25, 26, 27 ಮತ್ತು ಮಾ.31 ರಂದು ಪ್ರಯಾಣ ಸೇವೆ ಇರುವುದಿಲ್ಲ.
  11. ರೈಲು ಗಾಡಿ ಸಂಖ್ಯೆ 16541 ಯಶವಂತಪುರದಿಂದ ಪಂಡರಾಪುರ ವಾರದ ಎಕ್ಸ್ ಪ್ರೆಸ್ ರೈಲು ಮಾ.19 ಮತ್ತು 26 ರಂದು ಪ್ರಯಾಣ ಸೇವೆ ಇರುವುದಿಲ್ಲ.
  12. ರೈಲು ಗಾಡಿ ಸಂಖ್ಯೆ 16542 ಪಂಡರಾಪುರದಿಂದ ಯಶವಂತಪುರ ವಾರದ ಎಕ್ಸ್ ಪ್ರೆಸ್ ರೈಲು ಮಾ.20 ಮತ್ತು 27 ರಂದು ಪ್ರಯಾಣ ಸೇವೆ ಇರುವುದಿಲ್ಲ.
  13. ರೈಲು ಗಾಡಿ ಸಂಖ್ಯೆ 19667 ಉದಯಪುರದಿಂದ ಮೈಸೂರು ವಾರದ ಹಮ್ ಸಫರ್ ರೈಲು ಮಾ. 23 ಮತ್ತು 30 ರಂದು ಪ್ರಯಾಣ ಸೇವೆ ಇರುವುದಿಲ್ಲ.
  14. ರೈಲು ಗಾಡಿ ಸಂಖ್ಯೆ 19668 ಮೈಸೂರಿನಿಂದ ಉದಯಪುರ ವಾರದ ಹಮ್ ಸಫರ್ ರೈಲು ಮಾ.26 ಮತ್ತು ಏ.2 ರಂದು ಪ್ರಯಾಣ ಸೇವೆ ಇರುವುದಿಲ್ಲ ಎಂದು ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.

Leave a Reply

error: Content is protected !!
LATEST
ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ ಸಾರಿಗೆ ನೌಕರರ ವೇತನದಲ್ಲಿ ಹಣ ಕಟ್‌ ಮಾಡಿ ಎಲ್‌ಐಸಿ ಪಾಲಿಸಿಗೆ ಪಾವತಿಸದ ಬಗ್ಗೆ ದೂರು ಕೊಟ್ಟರೆ ಅಮಾನತು: ಸಚಿವ ರಾಮಲಿಂಗ... BMTC: ಚಾಲಕ ಕಂ. ನಿರ್ವಾಹಕರು ಆಗಸ್ಟ್‌ 14ರೊಳಗೆ ಸಂಪೂರ್ಣ ನಿರ್ವಾಹಕರಾಗಿ ಬದಲಾಗಬೇಕು: ಸಿಟಿಎಂ ಆದೇಶ