NEWSಸಿನಿಪಥ

ಕಿರುತೆರೆ ವೀಕ್ಷಕರ ಮನ ಸೆಳೆದ ನಟಿ ನಯನಾ ಈಗೇನುಮಾಡುತ್ತಿದ್ದಾರೆ ಗೊತ್ತಾ? 

ವಿಜಯಪಥ ಸಮಗ್ರ ಸುದ್ದಿ

ಭಾರತದ ಜನಪ್ರಿಯ ವರ್ಣ ಚಿತ್ರಗಾರ ರಾಜಾ ರವಿವರ್ಮ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅವರು ಬರೆದಂತಹ ಒಂದೊಂದು ಚಿತ್ರಗಳು ಇಂದು ಜೀವಂತವಾಗಿವೆ. ಅವರು ಬರೆದ ಸುಂದರ ಕಲಾಕೃತಿಗೆ ಮನ ಸೋಲದವರಿಲ್ಲ. ತಮ್ಮ ಕಲಾಕುಂಚದಿಂದ ನಿರ್ಜೀವ ವಸ್ತುವಿಗೂ ಜೀವ ಭರಿಸುವ ಶಕ್ತಿ ರಾಜ ರವಿವರ್ಮರಿಗಿತ್ತು. ಅಂದ ಹಾಗೇ ಈಗ್ಯಾಕೆ ರಾಜಾ ರವಿವರ್ಮನ ವಿಚಾರ ಎಂದು ಕೇಳುತ್ತಿದ್ದೀರಾ?

ಕಿರುತೆರೆ ನಟಿಯೊಬ್ಬರು ಇದೀಗ ಹೊಸತಾಗಿ ಫೋಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದು ಅದನ್ನು ನೋಡಿದಾಗ ರವಿವರ್ಮನ ವರ್ಣಚಿತ್ರ ನೆನಪಾಗಿಯೇ ಆಗುತ್ತದೆ. ಅಂದ ಹಾಗೇ ರವಿವರ್ಮನ ಕಲಾಕೃತಿಯನ್ನು ಫೋಟೋಶೂಟ್ ಮೂಲಕ ಮರು ಸೃಷ್ಟಿ ಮಾಡಿಸಿಕೊಂಡಿರುವ ಆ ಕಿರುತೆರೆ ನಟಿ ಹೆಸರು ನಯನಾ ವೆಂಕಟೇಶ್.

ಕಳೆದ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ನಯನಾ ತಮ್ಮ ಮಗುವಿಗೆ ಪ್ರಯಾನ್ ಭಾರದ್ವಾಜ್ ಎಂದು ನಾಮಕರಣವನ್ನು ಮಾಡಿದ್ದಾರೆ.

5 ತಿಂಗಳ ಮುದ್ದು ಹುಡುಗ ಪ್ರಯಾನ್ ಇನ್ ಸ್ಟಾ ಗ್ರಾಂ ಖಾತೆಯನ್ನು ಕೂಡಾ ಹೊಂದಿದ್ದಾನೆ. ಲಿಟಲ್ ಎನ್ವಿಸ್ ಎಂಬ ಹೆಸರಿನ ಈ ಖಾತೆಗೆ ಈಗಾಗಲೇ ಮೂರುವರೆ ಸಾವಿರಕ್ಕಿಂತಲೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ.

ಚಿಕ್ಕಮ್ಮ, ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ನಯನಾ ಸದ್ಯ ಪತಿ ವೆಂಕಟೇಶ್ ಮತ್ತು ಮಗ ಪ್ರಯಾನ್ ರೊಂದಿಗೆ ಕಾಲ ಕಳೆಯುತ್ತಿದ್ದಾರೆ. ತಾಯ್ತನವನ್ನು ಸಕತ್ ಎಂಜಾಯ್ ಕೂಡಾ ಮಾಡುತ್ತಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ