ಕೃಷಿನಮ್ಮರಾಜ್ಯ

ಮಾವಿನಲ್ಲಿ ಹೀಚು ಉದುರುವುನ್ನು ತಡೆಗಟ್ಟಲು ರೈತರು ತೆಗೆದುಕೊಳ್ಳಬೇಕಾದ ಕ್ರಮ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾವು ಒಂದು ತೋಟಗಾರಿಕಾ ಬೆಳೆಯಾಗಿದ್ದು ಪ್ರಸ್ತುತ ಹಂಗಾಮಿನಲ್ಲಿ ಮಾವಿನ ಸಂರಕ್ಷಣೆ ಕ್ರಮಗಳ ಕುರಿತು ರೈತರು ತಿಳಿಯುವುದು ಅತ್ಯವಶ್ಯಕವಾಗಿದೆ.

ಪ್ರಸ್ತುತ ಹಂಗಾಮಿನಲ್ಲಿ ಅಧಿಕ ಉಷ್ಣಾಂಶ ಮತ್ತು ಪ್ರಖರ ಬಿಸಿಲಿನ ತೀಕ್ಷ್ಣತೆ ಕಾರಣ ಹೂ. ಹೀಚುಗಳು ಉದುರುವುನ್ನು ತಡೆಗಟ್ಟಲು ಹೂಬಿಟ್ಟಿರುವ ಮರಗಳಿಗೆ 2-3 ಬಾರಿ ಪೂರಕ ನೀರಾವರಿ ಕೈಗೊಳ್ಳುವುದು ಅವಶ್ಯಕವಾಗಿದೆ.

ಹೊಸ ಎಲೆ ಚಿಗುರು ಹೊರಟಿರುವ ಮರಗಳಿಗೆ ನೀರು ಹಾಯಿಸುವ ಅವಶ್ಯಕತೆ ಇರುವುದಿಲ್ಲ, ಹೂ ಬಿಟ್ಟಿರುವ ಗಿಡಗಳ ಪಾತಿಗೆ ಸಾವಯವ ಹೊದಿಕೆ ಕೈಗೊಳ್ಳುವುದರಿಂದ ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಂಡು ಗುಣಮಟ್ಟದ ಇಳುವರಿ ಪಡೆಯಬಹುದು.

ಕಾಯಿ ಕಚ್ಚುವ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಎಳೆಕಾಯಿಗಳ ಉದುರುವಿಕೆ ತಡೆಯಲು ಪ್ಲಾನೋಫಿಕ್ಸ್ 0.5 ಮಿ.ಲಿ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಗೋಲಿ ಗಾತ್ರದ ಹಂತದಲ್ಲಿದ್ದಾಗ ಲಘು ಪೋಷಕಾಂಶ ಮಿಶ್ರಣ ಮ್ಯಾಂಗೋಸ್ಪೆಷಲ್ ಸಿಂಪಡಣೆ ಕೈಗೊಳ್ಳಬೇಕಾಗುತ್ತದೆ.

ಫಸಲನ್ನು ಹಣ್ಣಿನ ನೊಣದ ಭಾದೆಯಿಂದ ರಕ್ಷಿಸಲು ಹಣ್ಣಿನ ನೊಣದ ಮೋಹಕ ಬಲೆ ಅಳವಡಿಸಿಕೊಳ್ಳವುದು, ಜಿಗಿಹುಳು ನಿರ್ವಹಣೆಗೆ ಥಯೋಫನೇಟ್ ಮಿಥೈಲ್ 1 ಮಿ.ಲಿ ಅಥವಾ ಡೈನೋಕ್ಯಾಪ್ 1 ಮಿ.ಲೀ* ಮ್ಯಾಂಕೋಜಿಬ್ 2 ಗ್ರಾಂ ಅನ್ನು ಪ್ರತಿ ಲೀಟರ್‌ನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಸಿಂಪಡಣಾ ದ್ರಾವಣಗಳಿಗೆ ೦.೫ ಮಿ.ಲೀ ಶಾಂಪು ಅಥವಾ ಅಂಟನ್ನು ನೀರಿನಲ್ಲಿ ಸಿಂಪಡಿಸಬೇಕು.

ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೊರತಂದಿರುವ ಮಾವು ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ೫೦ ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸಿವುದು, ಈ ಸಿಂಪಡಣೆ ದ್ರಾವಣಕ್ಕೆ  ಸೋಪು ದ್ರಾವಣವನ್ನು 0.5 ಮಿ.ಲಿ ಮತ್ತು ಅರ್ಧ ಹೋಳು ನಿಂಬೆ ರಸ ಬೆರಸಿ ಸಿಂಪಡಿಸಿದರೆ ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು ಯಾವುದೇ ಸಿಂಥೆಟಿಕ್ ಪೈರೆಥ್ರಾಯಿಟ್ ಕೀಟನಾಶಕ ಬಳಸಬಾರದು.

ಹೆಚ್ಚಿನ ಮಾಹಿತಿಗಾಗಿ ರೈತರು ಹಾರ್ಟಿ ಕ್ಲಿನಿಕ್ ತೋಟಗಾರಿಕೆ ವಿಭಾಗದ ವಿಷಯ ತಜ್ಞರನ್ನು ಅಥವಾ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಯವರನ್ನು  ಭೇಟಿಯಾಗಿ ಅಥವಾ ದೂ.ಸಂ 08262- 295043, 9110607092  ಮೂಲಕ  ಮಾಹಿತಿ ಪಡೆಯಬಹುದಾಗಿದೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ ನಿರಂತರ ಮಳೆ- BBMP ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ: ತುಷಾರ್ ಗಿರಿನಾಥ್