ಕೃಷಿನಮ್ಮರಾಜ್ಯ

ಮಾವಿನಲ್ಲಿ ಹೀಚು ಉದುರುವುನ್ನು ತಡೆಗಟ್ಟಲು ರೈತರು ತೆಗೆದುಕೊಳ್ಳಬೇಕಾದ ಕ್ರಮ

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾವು ಒಂದು ತೋಟಗಾರಿಕಾ ಬೆಳೆಯಾಗಿದ್ದು ಪ್ರಸ್ತುತ ಹಂಗಾಮಿನಲ್ಲಿ ಮಾವಿನ ಸಂರಕ್ಷಣೆ ಕ್ರಮಗಳ ಕುರಿತು ರೈತರು ತಿಳಿಯುವುದು ಅತ್ಯವಶ್ಯಕವಾಗಿದೆ.

ಪ್ರಸ್ತುತ ಹಂಗಾಮಿನಲ್ಲಿ ಅಧಿಕ ಉಷ್ಣಾಂಶ ಮತ್ತು ಪ್ರಖರ ಬಿಸಿಲಿನ ತೀಕ್ಷ್ಣತೆ ಕಾರಣ ಹೂ. ಹೀಚುಗಳು ಉದುರುವುನ್ನು ತಡೆಗಟ್ಟಲು ಹೂಬಿಟ್ಟಿರುವ ಮರಗಳಿಗೆ 2-3 ಬಾರಿ ಪೂರಕ ನೀರಾವರಿ ಕೈಗೊಳ್ಳುವುದು ಅವಶ್ಯಕವಾಗಿದೆ.

ಹೊಸ ಎಲೆ ಚಿಗುರು ಹೊರಟಿರುವ ಮರಗಳಿಗೆ ನೀರು ಹಾಯಿಸುವ ಅವಶ್ಯಕತೆ ಇರುವುದಿಲ್ಲ, ಹೂ ಬಿಟ್ಟಿರುವ ಗಿಡಗಳ ಪಾತಿಗೆ ಸಾವಯವ ಹೊದಿಕೆ ಕೈಗೊಳ್ಳುವುದರಿಂದ ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಂಡು ಗುಣಮಟ್ಟದ ಇಳುವರಿ ಪಡೆಯಬಹುದು.

ಕಾಯಿ ಕಚ್ಚುವ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಎಳೆಕಾಯಿಗಳ ಉದುರುವಿಕೆ ತಡೆಯಲು ಪ್ಲಾನೋಫಿಕ್ಸ್ 0.5 ಮಿ.ಲಿ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಗೋಲಿ ಗಾತ್ರದ ಹಂತದಲ್ಲಿದ್ದಾಗ ಲಘು ಪೋಷಕಾಂಶ ಮಿಶ್ರಣ ಮ್ಯಾಂಗೋಸ್ಪೆಷಲ್ ಸಿಂಪಡಣೆ ಕೈಗೊಳ್ಳಬೇಕಾಗುತ್ತದೆ.

ಫಸಲನ್ನು ಹಣ್ಣಿನ ನೊಣದ ಭಾದೆಯಿಂದ ರಕ್ಷಿಸಲು ಹಣ್ಣಿನ ನೊಣದ ಮೋಹಕ ಬಲೆ ಅಳವಡಿಸಿಕೊಳ್ಳವುದು, ಜಿಗಿಹುಳು ನಿರ್ವಹಣೆಗೆ ಥಯೋಫನೇಟ್ ಮಿಥೈಲ್ 1 ಮಿ.ಲಿ ಅಥವಾ ಡೈನೋಕ್ಯಾಪ್ 1 ಮಿ.ಲೀ* ಮ್ಯಾಂಕೋಜಿಬ್ 2 ಗ್ರಾಂ ಅನ್ನು ಪ್ರತಿ ಲೀಟರ್‌ನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಸಿಂಪಡಣಾ ದ್ರಾವಣಗಳಿಗೆ ೦.೫ ಮಿ.ಲೀ ಶಾಂಪು ಅಥವಾ ಅಂಟನ್ನು ನೀರಿನಲ್ಲಿ ಸಿಂಪಡಿಸಬೇಕು.

ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೊರತಂದಿರುವ ಮಾವು ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ೫೦ ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸಿವುದು, ಈ ಸಿಂಪಡಣೆ ದ್ರಾವಣಕ್ಕೆ  ಸೋಪು ದ್ರಾವಣವನ್ನು 0.5 ಮಿ.ಲಿ ಮತ್ತು ಅರ್ಧ ಹೋಳು ನಿಂಬೆ ರಸ ಬೆರಸಿ ಸಿಂಪಡಿಸಿದರೆ ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು ಯಾವುದೇ ಸಿಂಥೆಟಿಕ್ ಪೈರೆಥ್ರಾಯಿಟ್ ಕೀಟನಾಶಕ ಬಳಸಬಾರದು.

ಹೆಚ್ಚಿನ ಮಾಹಿತಿಗಾಗಿ ರೈತರು ಹಾರ್ಟಿ ಕ್ಲಿನಿಕ್ ತೋಟಗಾರಿಕೆ ವಿಭಾಗದ ವಿಷಯ ತಜ್ಞರನ್ನು ಅಥವಾ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಯವರನ್ನು  ಭೇಟಿಯಾಗಿ ಅಥವಾ ದೂ.ಸಂ 08262- 295043, 9110607092  ಮೂಲಕ  ಮಾಹಿತಿ ಪಡೆಯಬಹುದಾಗಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ