Please assign a menu to the primary menu location under menu

NEWSನಮ್ಮರಾಜ್ಯ

232ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

ಶೂನ್ಯದಲ್ಲಿದ್ದ ವಿಜಯಪುರ ಜಿಲ್ಲೆಯಲ್ಲಿ ಒಂದೇದಿನ ಆರು ಮಂದಿಯಲ್ಲಿ ಸೋಂಕು ದೃಢ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಏ.12) 16 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ , ಶೂನ್ಯದಲ್ಲಿದ್ದ ವಿಜಯಪುರದಲ್ಲೇ 6, ಮೈಸೂರಿನಲ್ಲಿ  ಒಂದು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 232 ಕ್ಕೆ ಏರಿದೆ.

ನ್ಯೂಡೆಲ್ಲಿಯ ನಿಜಾಮುದ್ದೀನ್ ಧರ್ಮಸಭೆಗೆ ಹೋಗಿ ಬಂದಿದ್ದ ತಬ್ಲಿಘಿಗಳು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸೋಂಕು ಹಬ್ಬಿಸಿದ್ದರು. 1,300 ಮಂದಿ ಪೈಕಿ ನಿನ್ನೆಯವರೆಗೂ 55 ಮಂದಿಗೆ ಸೋಂಕು ತಗುಲಿತ್ತು. ಆ ಸಂಖ್ಯೆ ಈಗ  ಹೆಚ್ಚಾಗಿದೆ.

ಇಂದು ಬೆಳಕಿಗೆ ಬಂದ 16 ಸೋಂಕಿತರ ಪೈಕಿ 6 ಮಂದಿಗೆ ಜಮಾತ್ ನಂಟಿದೆ. ಕೊರೊನಾಗೆ ಬಲಿಯಾದ ಕಲಬುರಗಿಯ ವೃದ್ಧ(ರೋಗಿ ನಂಬರ್ 177)ನ ಕುಟುಂಬದಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿರಿ ಇಂದು ಮೈಸೂರಿನಲ್ಲಿ ಮತ್ತೆ 5 ದೃಢ, 214ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

ಮೃತ ವೃದ್ಧನ ಸೊಸೆಗೆ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೇ, ಬಹಮನಿ ಆಸ್ಪತ್ರೆಯಲ್ಲಿದ್ದಾಗ ವೃದ್ಧನನ್ನು ನೋಡಿಕೊಂಡಿದ್ದ ಆಯಾಗೂ ಸೋಂಕು ವ್ಯಾಪಿಸಿದೆ. ಬೆಳಗಾವಿಯ ನಾಲ್ವರಿಗೂ ಕೂಡ ಜಮಾತ್ ನಂಟು ಇರುವುದು ಖಚಿತಪಟ್ಟಿದೆ.

ಇಂದಿನ ಪ್ರಕರಣ

* ರೋಗಿ ನಂ.220 – ಕಲಬುರಗಿಯ 24 ವರ್ಷದ ಮಹಿಳೆ – ಕೇಸ್ ನಂ.177ರ ಸೊಸೆ
* ರೋಗಿ ನಂ.222 – ಕಲಬುರಗಿಯ 38 ವರ್ಷದ ಮಹಿಳೆ – ಕೇಸ್ ನಂ.177ರ ಸಂಪರ್ಕ – ಆಸ್ಪತ್ರೆ ಆಯಾ

* ರೋಗಿ ನಂ.223 – ಬೆಳಗಾವಿಯ ರಾಯಭಾಗದ 19 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ

* ರೋಗಿ ನಂ.224 – ಬೆಳಗಾವಿಯ ಹಿರೇಬಾಗೇವಾಡಿಯ 38 ವರ್ಷದ ಪುರುಷ – ಕೇಸ್ ನಂ.128ರ ಸಂಪರ್ಕ

* ರೋಗಿ ನಂ.225 – ಬೆಳಗಾವಿಯ ರಾಯಭಾಗದ 55 ವರ್ಷದ ಪುರುಷ – ಕೇಸ್ ನಂ.150ರ ಸಂಪರ್ಕ

* ರೋಗಿ ನಂ.226 – ಬೆಳಗಾವಿಯ ರಾಯಭಾಗದ 25 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ

Leave a Reply

error: Content is protected !!
LATEST
ನಮ್ಮ ಕ್ಲಿನಿಕ್ ಹೆಸರಲ್ಲಿ ನೂರಾರು ಕೋಟಿ ಗುಳುಂ: ಎಎಪಿ ಉಷಾ ಮೋಹನ್ KSRTC- ಫೋನ್‌ ಪೇ ಹಗರಣ- ₹20 ಸಾವಿರ ಲಂಚ ಕೊಟ್ಟ ಡಿಸಿ, ಡಿಟಿಒ ಅಮಾನತುಮಾಡಿ: ಎಂಡಿ ಭೇಟಿ ಮಾಡಿದ ನಾಗರಾಜ್‌ ಇಂದು ಸಾರಿಗೆ ನಿಗಮಗಳಲ್ಲಿ ಚಾಲಕರ ದಿನದ ಸಂಭ್ರಮ - ಘಟಕಗಳಲ್ಲಿ ಹೂಗುಚ್ಛ ನೀಡಿ ಶುಭ ಕೋರಿದ ಸಹೋದ್ಯೋಗಿಗಳು KSRTC ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಡಿಸಿ ಬೆವರಿಳಿಸಿದ  ಉಪಲೋಕಾಯುಕ್ತರು BMTC: ಅತೀ ಶೀಘ್ರದಲ್ಲೇ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ- ಎಂಡಿ ರಾಮಚಂದ್ರನ್‌ KKRTC ಬಸ್‌-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಯುವತಿ ಸಾವು, 18ಮಂದಿಗೆ ಗಾಯ KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ! ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌ ಚಾಲಕನ ನಿಯಂತ್ರಣ ತಪ್ಪಿ ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿ: 14 ಜನ ಮೃತ 2026ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿ ಸಾಧ್ಯತೆ: ರಾಜ್ಯಾಧ್ಯಕ್ಷ ಷಡಾಕ್ಷರಿ