ಸಿಂಧನೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಹಿಂದಿನ ಬಂದು ಡಿಕ್ಕಿ ಹೊಡೆದು ಆಕೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿಂಧನೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ನಡೆದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಜಚೂರು ಮೂರನೆ ಘಟಕದ ಬಸ್ ಕರಟಗಿ ತಾಲೂಕಿನ ನಿವಾಸಿ ಈರಮ್ಮ (45) ಎಂಬುವರ ಮೇಲೆ ಹರಿದ ಪರಿಣಾಮ ಆಕೆ ಮೃತಪಟ್ಟಿದ್ದಾರೆ.
ಬಸ್ ಸರ್ಕಲ್ನಲ್ಲಿ ತಿರುವು ಪಡೆಯುತ್ತಿದ್ದಾಗ ಈರಮ್ಮ ಅವರು ಮುಂದೆ ಹೋಗುತ್ತಿದ್ದರು ಅದನ್ನು ಗಮನಿಸದ ಚಾಲಕ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ ಪರಿಣಾಮ ಆಕೆ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರು ಮುಂದಿನ ಚಕ್ರದಿಂದ ಪಾರಾಗಿದ್ದಾರೆ. ಆದರೆ ಬಸ್ ತಿರುವು ಪಡೆಯುತ್ತಿದ್ದರಿಂದ ಹಿಂದಿನ ಚಕ್ರ ಅವರ ತಲೆ ಎದೆಯ ಮೇಲೆ ಹಿರಿದು ಒಂದೆರಡು ಮೀಟರ್ ಎಳೆದುಕೊಂಡು ಹೋಗಿದ್ದರಿಂದ ತಲೆ ಎದೆಯ ಭಾಗ ಗುರುತಿಲಾರದಷ್ಟು ಛಿದ್ರಛಿದ್ರವಾಗಿದೆ.
ಇದು ಚಾಲಕನ ನಿರ್ಲಕ್ಷ್ಯದಿಂದ ಆಗಿರುವ ಘಟನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ ಸರ್ಕಲ್ನಿಂದ ನಿಲ್ದಾಣದ ಒಳಕ್ಕೆ ಬರುವ ವೇಳೆ ವೃತ್ತದಲ್ಲಿ ತಿರುಗಿಸಿಕೊಳ್ಳುತ್ತಿದ್ದಾಗ ಮುಂದೆ ಹೋಗುತ್ತಿದ್ದ ಮಹಿಳೆಯನ್ನು ಗಮನಿಸಲಾದೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ರಾಯಚೂರು ಮೂರನೆ ಘಟಕದ ಬಸ್ ಚಾಲಕ ಹುಲುಗಪ್ಪ ಈ ಅಪಘಾತ ಎಸಗಿರುವ ಚಾಲಕರಾಗಿದ್ದು, ಇವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಚಾಲಕನ ವಿರುದ್ಧ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೆಕೆಆರ್ಟಿಸಿ ರಾಯಚೂರು ಸಾರಿಗೆ ವಿಭಾಗದ ಡಿಟಿಒ ಚಂದ್ರಶೇಖರ್, ಡಿಎಂಇ ನಾಗರಾಜು ಹಾಗೂ ಸಿಂಧನೂರು ಘಟನದ ಡಿಎಂ ಎಂ.ಹೊನ್ನಪ್ಪ ಭೇಟಿನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Related










