ಸೀಬಿ: ರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಒಕ್ಕೂಟ ಹಮ್ಮಿಕೊಂಡಿರುವ ಪಾದಯಾತ್ರೆ ಸೋಮವಾರಕ್ಕೆ 6ನೇದಿನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಮತ್ತೆ ನಾಳೆ ಅಂದರೆ ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಪಾದಯಾತ್ರೆಗೆ ವಿರಾಮ ಹಾಕಲಾಗಿದೆ.

ಇದೇ ಏ.8ರಿಂದ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆರಂಭಗೊಂಡ ಸಾರಿಗೆ ನೌಕರರ ಪಾದಯಾತ್ರೆ ಇಂದಿಗೆ 6ನೇ ದಿನ ಯಶಸ್ವಿಗೊಳಿಸಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳಾದಿಂದ 6ನೇ ದಿನದ ಪಾದಯಾತ್ರೆ ಆರಂಭವಾಗಿ ಮಧ್ಯಾಹ್ನದ ಹೊತ್ತಿಗೆ ದೊಡ್ಡಾಲದ ಮರದವರೆಗೆ ಜಡೆಯಿತು. ಬಳಿಕ ಅಲ್ಲಿಂದ ಸೀಬಿವರೆಗೆ ಸಾಗಿದ್ದು ಈ ರಾತ್ರಿ ಹಾಘೂ ನಾಳೆ ಸೀಬಿಯಲ್ಲೇ ವಾಸ್ತವ್ಯ ಹೂಡಲಾಗುತ್ತಿದೆ.
ಇನ್ನು ಏ.15ರಿಂದ ಇದೇ ಸೀಬಿಯಿಂದ ಪಾದಯಾತ್ರೆ ಮುಂದುರಿಯಲಿದೆ ಎಂದು ಕೂಟ ಹಾಗೂ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಾದಯಾತ್ರೆಯಲ್ಲಿ ವಿವಿಧೆಡೆಯಿಂದ ಹಲವಾರು ನೌಕರರು ಭಾಗವಹಿಸಿದ್ದರು.
Related


Megha








