NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ
ನಮ್ಮೆಲ್ಲರ ನೆಚ್ಚಿನ ಅಧಿಕಾರಿ ಹಾ ಗೂ ನೌಕರರ ಮಾರ್ಗದರ್ಶಕರಾಗಿದ್ದ ನೀವು ಇಂದು ನಿವೃತ್ತರಾಗುತ್ತಿರುವುದು ಭಾರಿ ಭಾವಕರನ್ನಾಗಿಸಿದೆ

ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ವಿಭಾಗದಲ್ಲಿ ಆಡಳಿತಾತ್ಮಕ ಸೇವೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಳೆ ಮೇ 31ರಂದು ನಿವೃತ್ತರಾಗುತ್ತಿರುವ ಹಿರಿಯ ಅಧಿಕಾರಿ ಸುರೇಶ ಸರ್ಜಾಪುರ ಹಾಗೂ ಸುಣಗಾರ ಅವರಿಗೆ ಇಂದು ನೌಕರರು ಹೃದಯಸ್ಪರ್ಷಿ ಬೀಳ್ಕೊಡುಗೆ ನೀಡಿದರು.
ನಾಳೆ ಮೇ 31 ಭಾನುವಾರ ಬಂದಿರುವುರಿಂದ ಬಹುತೇಕ ಅಧಿಕಾರಿಗಳು ರಜೆಯಲ್ಲಿರುತ್ತಾರೆ, ಹೀಗಾಗಿ ನಾಳೆ ನಿವೃತ್ತರಾಗುತ್ತಿರುವ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ಇಂದೇ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ವೇಳೆ ನಾಳೆ ನಿವೃತ್ತರಾಗುತ್ತಿರುವ ಅಧಿಕಾರಿ ಸುರೇಶ ಅವರ ವೃತ್ತಿಪರತೆ ಬಗ್ಗೆ ಶ್ಲಾಘಿಸಿದ್ದಾರೆ. ನಮ್ಮೆಲ್ಲರ ನೆಚ್ಚಿನ ಅಧಿಕಾರಿ ಹಾಗೂ ನೌಕರರ ಮಾರ್ಗದರ್ಶಕರಾಗಿದ್ದ ನೀವು ಇಂದು ನಿವೃತ್ತರಾಗುತ್ತಿರುವುದು ಭಾರಿ ಭಾವಕರನ್ನಾಗಿಸಿದೆ ಎಂದು ಹೇಳಿದ್ದಾರೆ.
ಇನ್ನು ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವ ಗಳಿಂದ ಪ್ರೇರಿತರಾಗಿ, ಸಾಮಾಜಿಕ ನ್ಯಾಯವನ್ನು ತಮ್ಮ ಸಾರಿಗೆ ಸೇವೆಯ ಜೀವನದ ಮುಖ್ಯ ಧ್ಯೇಯವನ್ನಾಗಿಸಿಕೊಂಡ ಖಡಕ್ ಅಧಿಕಾರಿಗಳಾದ್ರಿ, ಅದೇ ರೀತಿ ನಿಮ್ಮ ನಿವೃತ್ತಿಯ ಜೀವನವು ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
ಅಲ್ಲದೆ ಅಧಿಕಾರಿಗಳು / ನೌಕರರ ಮೇಲಿನ ನಿಮ್ಮ ಅಚಲ ಬದ್ಧತೆ, ಸಾಮಾಜಿಕ ನ್ಯಾಯದ ಪರವಾದ ಕರ್ತವ್ಯನಿಷ್ಠೆ, ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ತತ್ವಗಳ ಮೇಲಿನ ನಿಷ್ಠೆ ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದು ಹೇಳಿದ್ದಾರೆ.
ತಾವು ಪ್ರಮುಖವಾಗಿ ಹೇಳಬೇಕು ಎಂದರೆ ಸಾಮಾನ್ಯ ನೌಕರರ ಕಣ್ಣೀರಿನ ಭಾಷೆಯನ್ನು ಅರ್ಥಮಾಡಿ ಕೊಂಡ ಅಧಿಕಾರಿಯಾಗಿದ್ದೀರಿ ಎಂದು ಸುರೇಶ ಸರ್ಜಾಪುರ ಹಾಗೂ ಸುಣಗಾರ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.
ಇನ್ನು ಅಧಿಕಾರವಿರುವುದು ವೈಭವಕ್ಕಾಗಿ ಅಲ್ಲ, ಅದು ಜನಸೇವೆಯ ಸಾಧನವಾಗಿ ಎಂದು ಹೇಳಿ ಅದೇರೀತಿ ನಡೆದುಕೊಂಡ ಅಪರೂಪದ ಅಧಿಕಾರಿಗಳು ತಾವು ಎಂದು ಹೇಳಿದ್ದಾರೆ.
ಒಟ್ಟಾರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಧಾರವಾಡ ಗ್ರಾಮಾಂತರ ವಿಭಾಗದಲ್ಲಿ ಆಡಳಿತಾತ್ಮಕ ಸೇವೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಇಂದು DTO ಸಂತೋಷ ಕಮತ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧಿಕಾರಿ/ ನೌಕರ ಮಿತ್ರರೆಲ್ಲರೂ ಸೇರಿ ಆತ್ಮೀಯವಾಗಿ ನಿಮಗೆ ಬೀಳ್ಕೊಡುತ್ತಿದ್ದು, ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
Related









