KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು
KSRTC ಕನಕಪುರ ಘಟಕದ ಚಾಲಕ-ಕಂ-ನಿರ್ವಾಹಕರಾದ ವಿ.ಆರ್. ಶಿವಮೂರ್ತಿ, ದೇವರಾಜು ಸಿ., ಮುನಿಬಸವರಾಜು ಹಾಗೂ ಚಾಲಕ ಕೆ.ಟಿ.ಕುಮಾರ್ ಈ ನಾಲ್ವರು 12/06/2026 ರಂದು ಎಸಗಿದ ಶಿಸ್ತು ಉಲ್ಲಂಘನೆಯ ಬಗ್ಗೆ ಇವರ ವಿರುದ್ಧ ಘಟಕ ವ್ಯವಸ್ಥಾಪಕರು ಸಲ್ಲಿಸಿರುವ ವರದಿ ಆಧಾರದ ಮೇರೆಗೆ ಈ ಅಮಾನತು ಮಾಡಲಾಗಿದೆ.

ಬೆಂಗಳೂರು ದಕ್ಷಿಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ದಕ್ಷಿಣ ವಿಭಾಗದ ಕನಕಪುರ ಘಟಕದಲ್ಲಿ ನೌಕರನ ಮೇಲೆ ಘಟಕದಲ್ಲೇ ಹಲ್ಲೆ ಮಾಡಿದ್ದ ನಾಲ್ವರನ್ನು ಶಿಸ್ತುಪಾಲನಾಧಿಕಾರಿಯೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತತು ಮಾಡಿ ಇಂದು ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಅಂದರೆ ನಿನ್ನೆ ಸಾಯಂಕಾಲ ಘಟಕದ ಚಾಲಕ ಶಿವಕುಮಾರ್ ಎಂಬುವರ ಮೇಲೆ ಇದೇ ಘಟಕದ ನೌಕರರಾದ ಮುನಿಬಸವರಾಜು, ಕೆ.ಟಿ.ಕುಮಾರ್, ಶಿವಮೂರ್ತಿ ಹಾಗೂ ಸಿ.ದೇವರಾಜ್ ಎಂಬುವರು ಹಲ್ಲೆ ಮಾಡಿದ್ದರು ಈ ಹಿನ್ನೆಲೆಯಲ್ಲಿ ಈ ಆರೋಪಿತರನ್ನು ಅಮಾನತು ಮಾಡಿ ಡಿಸಿ ಇಂದು ಆದೇಶ ಹೊರಡಿಸಿದ್ದಾರೆ.
ಇಲ್ಲಿ ಕನಕಪುರ ಘಟಕದ ಚಾಲಕ-ಕಂ-ನಿರ್ವಾಹಕರಾದ ವಿ.ಆರ್. ಶಿವಮೂರ್ತಿ, ದೇವರಾಜು ಸಿ., ಮುನಿಬಸವರಾಜು ಹಾಗೂ ಚಾಲಕ ಕೆ.ಟಿ.ಕುಮಾರ್ ಈ ನಾಲ್ವರು 12/06/2026 ರಂದು ಎಸಗಿದ ಶಿಸ್ತು ಉಲ್ಲಂಘನೆಯ ಬಗ್ಗೆ ಇವರ ವಿರುದ್ಧ ಘಟಕ ವ್ಯವಸ್ಥಾಪಕರು ಸಲ್ಲಿಸಿರುವ ವರದಿ ಆಧಾರದ ಮೇರೆಗೆ ಈ ಅಮಾನತು ಮಾಡಲಾಗಿದೆ.
ಅಮಾನತು:
ಚಾಲಕ-ಕಂ-ನಿರ್ವಾಹಕರಾದ ವಿ.ಆರ್. ಶಿವಮೂರ್ತಿ, ದೇವರಾಜು ಸಿ., ಮುನಿಬಸವರಾಜು ಹಾಗೂ ಚಾಲಕ ಕೆ.ಟಿ.ಕುಮಾರ್ ಈ ನಾಲ್ವರನ್ನು ವಿಚಾರಣ ಪೂರ್ವ ಅಮಾನತಿನಟ್ಟು ಆದೇಶ ಹೊರಡಿಸಿರುವ ಶಿಸ್ತುಪಾಲನಾಧಿಕಾರಿ ಅವರು, ಬೆಂಗಳೂರು ದಕ್ಷಿಣ ವಿಭಾಗದ ಕನಕಪುರ ಘಟಕದಲ್ಲಿ ಡ್ಯೂಟಿ ಮಾಡುತ್ತಿರುವ ನಿವುಗಳು ಮೇಲೋಟಕ್ಕೆ ಸಾಬೀತಾಗುವಂತಹ ಮತ್ತು ಸಂಸ್ಥೆ ನಡತೆ ಹಾಗೂ ಶಿಸ್ತು ನಿಯಮಾವಳಿಗಳು 1971 ರ ಪ್ರಕಾರ ದಂಡನಾರ್ಹವಾದ ಅಪರಾಧಗಳನ್ನು ಎಸಗಿದ್ದಾರೆಂದು ಮೇಲೆ ನಮೂದಿಸಿದ ವರದಿಯಿಂದ ತಿಳಿಯುತ್ತದೆ
ಹೀಗಾಗಿ ನೀವು ಕರ್ತವ್ಯ ನಿರ್ವಹಣೆಯ ಮೇಲೆ ಮುಂದುವರಿಸುವುದರಿಂದ ಈ ಪ್ರಕರಣದ ತನಿಖೆಗೆ ಬಾಧಕವಾಗಬಹುದಾದುದರಿಂದ ಚಾಲಕ-ಕಂ-ನಿರ್ವಾಹಕರಾದ ವಿ.ಆರ್. ಶಿವಮೂರ್ತಿ, ದೇವರಾಜು ಸಿ., ಮುನಿಬಸವರಾಜು ಹಾಗೂ ಚಾಲಕ ಕೆ.ಟಿ.ಕುಮಾರ್ ಅವರನ್ನು ಅಮಾನತುಗೊಳಿಸಬೇಕೆಂದು ತಿರ್ಮಾನಿಸಿ ಈ ಕೆಳಗಿನಂತೆ ಆದೇಶ ನೀಡುತ್ತೇನೆ.
ಶಿಸ್ತುಪಾಲನಾಧಿಕಾರಿಯವರ “ಆದೇಶ”:
ಚಾಲಕ-ಕಂ-ನಿರ್ವಾಹಕರಾದ ವಿ.ಆರ್. ಶಿವಮೂರ್ತಿ, ದೇವರಾಜು ಸಿ., ಮುನಿಬಸವರಾಜು ಹಾಗೂ ಚಾಲಕ ಕೆ.ಟಿ.ಕುಮಾರ್ ಅವರ ಬಗ್ಗೆ ಆರೋಪಿಸಲಾದ ದೋಷಾರೋಪಗಳ ಕುರಿತು ಈ ಕೂಡಲೆ ಜಾರಿಗೆ ಬರುವಂತೆ ವಿಚಾರಣಾ ಪೂರ್ವ ಅಮಾನತಿನಲ್ಲಿ ಶಿಸ್ತು ಮತ್ತು ನಡವಳಿಕೆ ನಿಯಮಾವಳಿ 1971 ರ ನಿಯಮ 21(1) ಇಡಲಾಗಿದೆ.
ಇವರೆಲ್ಲರಿಗೂ ಅಮಾನತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಯನ್ನು ಕೇಂದ್ರ ಕಚೇರಿ, ಬೆಂಗಳೂರಿನಿಂದ 29.10.1991 ರ ಅಡಿಯಲ್ಲಿ ನೀಡಲಾದ ಸುತ್ತೋಲೆ ಸಂಖ್ಯೆ 843 ರ ಪ್ರಕಾರ ನೀಡಲಾಗುವುದು. ತಾವೆಲ್ಲರೂ ತಮ್ಮ ಅಮಾನತಿನ ಅವಧಿಯಲ್ಲಿ ಯಾವುದೇ ತರಹದ ನೌಕರಿ, ವ್ಯಾಪಾರ, ಉದ್ಯೋಗ ಹಾಗೂ ವಿರಾಮಕಾಲದ ಚಟುವಟಿಕೆಗಳಲ್ಲಿ ತೊಡಗಿಲ್ಲವೆಂದು ಘೋಷಣೆ ಪತ್ರ ಸಹಿ ಮಾಡಿಕೊಟ್ಟಾಗ ಮಾತ್ರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗುತ್ತೀರಿ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಈ ಎಲ್ಲರೂ ವಿಚಾರಣಾಧಿಕಾರಿಯಿಂದ ಲಿಖಿತ ಅನುಮತಿ ಪಡೆಯದೆ ಕಾರ್ಯ ಕೇಂದ್ರವನ್ನು ಬಿಟ್ಟು ಹೊರಗೆ ಹೋಗಬಾರದು. ತಮ್ಮ ಸರಿಯಾದ ಅಂಚೆ ವಿಳಾಸವನ್ನು ತಿಳಿಸಬೇಕು. ಇಲ್ಲದೇ ಹೋದಲ್ಲಿ ಈ ಕಚೇರಿಯ ದಾಖಲಾತಿಯಲ್ಲಿ ಇರುವ ವಿಳಾಸಕ್ಕೆ ತಿಳಿವಳಿಕೆ ಪತ್ರ ಹಾಗೂ ಇತರ ಕಾಗದ ಪತ್ರಗಳನ್ನು ಕಳಿಸಲಾಗುವುದು. ಅಂತಹ ಅಂಚೆಗಳು ಬಟವಾಡೆಯಾಗದಿದ್ದಲ್ಲಿ ಅಂತಹ ವಿಳಾಸದಾರರು ಇಲ್ಲ” ಅಥವಾ ಡೆಲಿವರಿಯಲ್ಲಿ “ಸಿಗುವುದಿಲ್ಲ” ಎಂಬ ಅಂಚೆ ಶರಾಗಳೊಂದಿಗೆ ಪತ್ರ ಬಂದರೂ ಸಹ ಈ ಎಲ್ಲರಿಗೂ ಸಕಲ ಉದ್ದೇಶಗಳಿಗಾಗಿ ಆ ಪತ್ರಗಳು ಮುಟ್ಟಿರುತ್ತವೆ ಎಂದು ತಿಳಿಯಲಾಗುವುದು.
ಈ ರೀತಿ ಜಾರಿಯಾಗದೇ ಇರುವ ಪತ್ರಗಳು ಜಾರಿಯಾದ ಮತಗಳೆಂದೇ ಪರಿಗಣಿಸಲ್ಪಡುವುದರಿಂದ ವಿಚಾರಣೆಯನ್ನು ಮುಂದುವರಿಸಲು ಹಾಗೂ ಶಿಸ್ತಿನ ಕ್ರಮವನ್ನು ಜರುಗಿಸಲು ಅವು ಪ್ರತಿಬಂಧಕವಾಗಲಾರವು ಎಂದು ತಿಳಿಸಿದ್ದಾರೆ.
ಡಿಎಂ ಆಮಾನತಿಗೆ ಒತ್ತಾಯ: ಇನ್ನು ಚಾಲಕನ ಮೇಲೆ ಹಲ್ಲೆ ಮಾಡುತ್ತಿದ್ದರೂ ಕೂಡ ಘಟನೆ ನಡೆದ ಸ್ಥಳದಲ್ಲೇ ಡಿಎಂ ಇದ್ದರೂ ಸಹ ಗಲಾಟೆಯನ್ನು ತಡೆಯುವ ಪ್ರಯತ್ನ ಮಾಡಿಲ್ಲ, ಹಾಗಾಗಿ ಈ ಘಟನೆಯು ಪೂರ್ವ ನಿಯೋಜಿತವಾಗಿದ್ದು ಈ ಘಟನೆಗೆ ಕಾರಣರಾಗಿರುವಂತಹ ಘಟಕ ವ್ಯವಸ್ಥಾಪಕರನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
Related









