ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದೇಶ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ರಾಜ್ಯದ ಹಿರಿಯ ರಾಜಕಾರಣಿಯೂ ಆದ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೊರೊನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಜರುಗಿಸಲು ಬೇಕಾದ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.
ಈ ಬಗ್ಗೆ ದೇವೇಗೌಡರೆ ಟ್ವೀಟ್ ಮೂಲಕ ತಿಳಿಸಿದ್ದು, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಕೆಲವು ಸಲಹೆಗಳನ್ನು ನೀಡಿ ನಾನು ನಿನ್ನೆ ಪ್ರಧಾನಿ ಮೋದಿ ಜಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ವಿವರಿಸಿದ್ದಾರೆ.
ಇದು ರಾಷ್ಟ್ರೀಯ ಬಿಕ್ಕಟ್ಟು ಮತ್ತು ನಾವು ಅದನ್ನು ಒಂದು ರಾಷ್ಟ್ರವಾಗಿ ಹೋರಾಡಬೇಕಾಗಿದೆ. ಜೀವಗಳನ್ನು ಉಳಿಸಲು ಮತ್ತು ಸಂಕಷ್ಟಗಳನ್ನು ಕಡಿಮೆ ಮಾಡಲು ತೆಗೆದುಕೊಂಡ ಎಲ್ಲಾ ರಚನಾತ್ಮಕ ಕ್ರಮಗಳನ್ನು ನಾವು ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರವೇನಾದರೂ ಎಲ್ಲಾ ನಾಗರಿಕರಿಗೆ ಉಚಿತ ಕೋವಿಡ್ ಲಸಿಕೆ ನೀಡಲು ನಿರ್ಧಾರ ತೆಗೆದುಕೊಂಡರೆ ಅದು ಅತ್ಯುತ್ತಮ ನಡೆಯಾಗಲಿದೆ ಎಂದು ಪತ್ರದಲ್ಲಿ ಗೌಡರು ಉಲ್ಲೇಖಿಸಿದ್ದಾರೆ.
I wrote a letter to Hon'ble PM Shri Narendra Modi ji yesterday offering a few suggestions to tackle the pandemic. This is a national crisis and we need to fight it as one nation. We should support all constructive measures taken to save lives and reduce suffering.@PMOIndia pic.twitter.com/jHEZFZLalP
— H D Devegowda (@H_D_Devegowda) April 26, 2021