ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿತರಿಸುವ ಟಿಕೆಟ್ನ ಇಟಿಎಂ ರೋಲ್ಗಳ ಬಳಕೆ ಬಗ್ಗೆ ಮಾರ್ಗಸೂಚಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಈ ಸಂಬಂಧ ಮಾ.14ರಂದು ಸಂಸ್ಥೆಯ ಸಂಚಾರ ಆಚರಣೆ ಶಾಖೆಯಿಂದ ಆದೇಶ ಹೊರಡಿಸಲಾಗಿದೆ. ಸಂಸ್ಥೆಯಲ್ಲಿ ಸಾರಿಗೆಗಳ ಸುಗಮ ಕಾರ್ಯಾಚರಣೆಯಲ್ಲಿ ದಕ್ಷತೆ, ನಿಯಮಿತತೆ ತರುವ ಉದ್ದೇಶದಿಂದ ಹಾಗೂ ಸುಲಭ ಮೇಲ್ವಿಚಾರಣೆ ಹಿತದೃಷ್ಟಿಯಿಂದ ಚತುರ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅದರ ಒಂದು ಭಾಗವಾಗಿ ಸಂಸ್ಥೆಯ ಎಲ್ಲ ಸಾರಿಗೆಗಳಲ್ಲಿ ಇಟಿಎಂ ಯಂತ್ರದ ಮೂಲಕ ಪ್ರಯಾಣಿಕರ ಟಿಕೆಟ್ ಹಾಗೂ ದೈನಂದಿನ ಪಾಸುಗಳನ್ನು ವಿತರಿಸಲಾಗುತ್ತಿದೆ.
ಈ ನಡುವೆ ಘಟಕಗಳಲ್ಲಿ ಇಟಿಎಂ ರೋಲ್ಗಳ ಬಳಕೆ ಬಗ್ಗೆ ಕೆಳಕಂಡಂತೆ ಅಗತ್ಯ ಕ್ರಮ ವಹಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. 1.ಘಟಕ ವ್ಯವಸ್ಥಾಪಕರು/ ಲೆಕ್ಕ ಪತ್ರ ಮೇಲ್ವಿಚಾರಕರು ಪ್ರತಿದಿನ ಕಾರ್ಯಾಚರಣೆಗೆ ಅಗತ್ಯವಿರುವ ಇಟಿಎಂ ರೋಲ್ಗಳ ದಾಸ್ತಾನು ಲಭ್ಯತೆ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಲೆಕ್ಕಪತ್ರ ಮೇಲ್ವಿಚಾರಕರು/ ಉಗ್ರಾಣ ರಕ್ಷಕರು/ ಸಹಾಯಕ ಲೆಕ್ಕಿಗರು/ ಕಿರಿಯ ಸಹಾಯಕರು ಕನಿಷ್ಠ ಟಿಕೆಟ್ ರೋಲ್ಗಳ ದಾಸ್ತಾನು ಮಟ್ಟವನ್ನು ನಿರ್ವಹಣೆ ಮಾಡುವುದು ಹಾಗೂ ಪೂರೈಕೆಯಾದ ಟಿಕೆಟ್ ರೋಲ್ಗಳ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುವುದು.
ಟಿಕೇಟ್ ರೋಲ್ ಅಳತೆ ಮತ್ತು ಅಂದಾಜು ಟಿಕೆಟ್ ಲಭ್ಯತೆ ವಿವರ: ಒಂದು ರೋಲ್ನ ಸರಾಸರಿ ಉದ್ದ-15 ಮೀ. ಒಂದು ಟಿಕೆಟ್ ಉದ್ದ-8.5 ಸೆ.ಮೀ.
ಸರಾಸರಿ ಒಂದು ರೋಲ್ನಲ್ಲಿ ಅಂದಾಜು 175 ಟಿಕೆಟ್ಗಳನ್ನು ಮುದ್ರಿಸಬಹುದು ಆದ್ದರಿಂದ ಈಗಾಗಲೇ ಫೆಬ್ರವರಿಯಲ್ಲೇ ತಿಳಿಸಿರುವಂತೆ “ಟಿಕೆಟ್ ರೋಲ್ಗಳನ್ನು ಅನುಸೂಚಿಗಳ ಪಾಳಿಗನುಗುಣವಾಗಿ (Schedules Shiftwise), ಅಂದರೆ ಅನುಸೂಚಿಗಳಲ್ಲಿ ಈಗಾಗಲೇ ಮಾರಾಟವಾಗುತ್ತಿರುವ ಟಿಕೆಟ್ಗಳಿಗೆ ಅನುಗುಣವಾಗಿ ಲೆಕ್ಕಾಚಾರ ಮಾಡಿ (ಶೇ.10 ರಷ್ಟು ಮಾತ್ರ ಹೆಚ್ಚಾಗಿ) ನಿರ್ವಾಹಕರಿಗೆ ನೀಡುವುದು.
ಘಟಕಗಳಲ್ಲಿ ಅನುಸೂಚಿವಾರು ವಿತರಣೆಯಾದ ಟಿಕೆಟ್ಗಳ ಮಾಹಿತಿ ಲಭ್ಯವಾಗುವಂತೆ ಚತುರ ಸಾರಿಗೆ ವ್ಯವಸ್ಥೆ (ITS) ಶಾಖೆಯಿಂದ ಕ್ರಮ ವಹಿಸುವುದು.
ನಿರ್ವಾಹಕರಿಗೆ ನೀಡಿದ, ಬಳಕೆಯಾದ ಮತ್ತು ಹಿಂದಿರುಗಿಸಿದ ಟಿಕೆಟ್ ರೋಲ್ಗಳ ಮಾಹಿತಿಯನ್ನು ರಿಜಿಸ್ಟರ್ನಲ್ಲಿ ದಾಖಲಿಸುವುದು. ಪ್ರತಿದಿನ ಲೆಕ್ಕಪತ್ರ ಮೇಲ್ವಿಚಾರಕರು, ಉಗ್ರಾಣ ರಕ್ಷಕರು ಹಾಗೂ ವಿಷಯ ನಿರ್ವಾಹಕರು ರಿಜಿಸ್ಟರ್ ಪರಿಶೀಲಿಸಿ, ಸಹಿ ಮಾಡುವುದು.
ನಿರ್ವಾಹಕರು ಟಿಕೆಟ್ ರೋಲ್ಗಳನ್ನು ರಿಜಿಸ್ಟರ್ನಲ್ಲಿ ಸಹಿ ಮಾಡಿ ಪಡೆಯುವುದು. 7. ಸಂಪೂರ್ಣವಾಗಿ ಬಳಕೆಯಾದ ಇಟಿಎಂ ರೋಲ್ಗಳ Plastic Empty Cap ಗಳನ್ನು ಮತ್ತು ಬಳಕೆಯಾಗದ ಪೂರ್ಣ ರೋಲ್ಗಳಿದ್ದಲ್ಲಿ ಘಟಕದ ಚೀಟಿ ಶಾಖೆಗೆ ಕಡ್ಡಾಯವಾಗಿ ಹಿಂದಿರುಗಿಸುವುದು.
ಘಟಕಗಳಲ್ಲಿ ನಿರ್ವಾಹಕರಿಂದ ಹಿಂಪಡೆದ ಇಟಿಎಂ ರೋಲ್ಗಳ Plastic Empty Cap ಗಳನ್ನು ಪ್ರತಿ ಮಾಹೆ ಕೇಂದ್ರ ಉಗ್ರಾಣಕ್ಕೆ ಹಿಂದಿರುಗಿಸುವುದು. 9. ಬಳಕೆಯಾದ ಟಿಕೆಟ್ ರೋಲ್ಗಳನ್ನು ಕೇಂದ್ರ ಉಗ್ರಾಣಕ್ಕೆ ಹಿಂದಿರುಗಿಸಿರುವ ಹಾಗೂ ಬಳಕೆಯಾಗಿರುವ ರೋಲ್ ಸರಿಯಾಗಿರುವ ಬಗ್ಗೆ ಘಟಕ ವ್ಯವಸ್ಥಾಪಕರು ಪರಿಶೀಲಿಸಿ ದೃಢೀಕರಿಸುವುದು.
ಈ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ. ಮೇಲಿನ ಎಲ್ಲ ಅಂಶಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಕುರಿತು ಅನುಸರಣಾ ವರದಿ ಸಲ್ಲಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೊರಡಿಸುವ ಆದೇಶವನ್ನು ಎಲ್ಲರೂ ತಪ್ಪದೆ ಪಾಲಿಸ ಬೇಕು ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು(ಕಾ) ಸೂಚನೆ ನೀಡಿದ್ದಾರೆ.
Related

You Might Also Like
BMTC ನೌಕರರಿಗೆ ಸಾರಿಗೆ ಸಚಿವರಿಂದ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಯೋಗದೊಂದಿಗೆ ಜೂನ್-2025ರ ಮಾಹೆಯ ಸಂಸ್ಥೆಯ 100ಕ್ಕೂ ಹೆಚ್ಚು ಅರ್ಹ ನೌಕರರಿಗೆ ಪ್ರಯಾಸ್ ಯೋಜನೆಯಡಿ...
KKRTC ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ತಾತ್ಕಾಲಿಕ ನೇಮಕ
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (CPM)...
ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 20ಕ್ಕೂ ಹೆಚ್ಚು ಜನರು ಮೃತ: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು...
KSRTC ನೌಕರರ ವೇತನ ಹೆಚ್ಚಳ ಪ್ರಕರಣ: ನಾಳೆ ಹೈ ಕೋರ್ಟ್ನಲ್ಲಿ ವಿಚಾರಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!
ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...