NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಬೆಂಗಳೂನಿಂದ ಬಾಣಾವರಕ್ಕೆ ಟಿಕೆಟ್‌ ಪಡೆದು ತುಮಕೂರಿನಲ್ಲಿ ಇಳಿಯಲು ಮುಂದಾಗಿ ನಿನ್ನ ಮನೆ ಹಾಳಾಗ ಎಂದು ನಾಲಿಗೆ ಹರಿಯಬಿಟ್ಟ ಮಹಿಳೆ..

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಹತ್ತಿದ ಮಹಿಳೆಯೊಬ್ಬರು ಬಾಣಾವರಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾರೆ. ಆದರೆ, ತುಮಕೂರಿನಲ್ಲಿ ಇಳಿಯುವುದಕ್ಕೆ ಮುಂದಾಗಿದ್ದು, ಅದನ್ನು ಕೇಳಿದ ನಿರ್ವಾಹಕ ಮತ್ತು ಸಹ ಪ್ರಯಾಣಿಕರಿಗೆ ಅವಾಜ್‌ ಹಾಕಿದ್ದಾರೆ.

ಇದು ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ ಭಾರಿ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಹೌದು! ಬೆಂಗಳೂರಿನಲ್ಲಿ ಬಸ್‌ ಹತ್ತಿದ ಮಹಿಳೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾಳೆ. ಆದರೆ, ಮಾರ್ಗಮಧ್ಯೆ ಅಂದರೆ ತುಮಕೂರಿನಲ್ಲಿ ಇಳಿಯುವುದಕ್ಕೆ ಮುಂದಾಗಿದ್ದಾಳೆ. ಈ ವೇಳೆ ನಿರ್ವಾಹಕರು ನೀವು ಹೀಗೆ ಇಳಿದು ಹೋದರೆ ನಮ್ಮ ಕೆಲಸ ಹೋಗುತ್ತದೆ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ನೀವು ತುರ್ತು ಕೆಲಸದ ನಿಮಿತ್ತ ಇಲ್ಲೇ ಇಳಿಯಲೇ ಬೇಕು ಎಂದರೆ, ತುಮಕೂರು ಬಸ್‌ ನಿಲ್ದಾಣದಲ್ಲಿ ನಮ್ಮ ನಿಲ್ದಾಣಧಿಕಾರಿಯವರಿಗೆ ಈ ಟಿಕೆಟ್‌ ಕೊಟ್ಟು ಅವರಿಂದ ಅನುಮತಿ ಪಡೆದು ಇಳಿದುಕೊಳ್ಳಿ ಎಂದು ತಿಳಿಸಿದ್ದಾರೆ.

ಆದರೆ ಆ ಮಹಿಳೆ ನಿರ್ವಾಹಕರ ಮನವಿಗೆ ಸ್ಪಂದಿಸದೆ ಅವರಿಗೆ ಅವಾಜ್‌ ಹಾಕಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿರ್ವಾಹಕರನ್ನು ನಿಂದಿಸಿದ್ದು, ಏಕ ವಚನ ಪ್ರಯೋಗ ಮಾಡಿದ ಈಕೆಯೇ ನೀನು ನನ್ನನ್ನು ಏಕೆ ಹೇ ಎಂದೆ ಎಂದು ಅವಾಜ್‌ ಹಾಕಿದ್ದಾರೆ. ಇಲ್ಲ ನಾನು ನಿಮಗೆ ಆ ರೀತಿ ಹೇಳಿಲ್ಲ ಎಂದರೂ ಕೇಳದೆ ನಿರ್ವಾಹಕರನ್ನು ನಿಂದಿಸಿದ್ದಾಳೆ.

ಇನ್ನು ಈಕೆ ಕಂಡಕ್ಟರ್‌ ಜತೆ ಗಲಾಟೆ ಮಾಡುತ್ತಿರುವುದನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡುತ್ತಿದ್ದರು, ಈ ವೇಳೆ ಆ ಸಹ ಪ್ರಯಾಣಿಕರಿಗೂ ನನ್ನ ಅನುಮತಿ ಇಲ್ಲದೆ ಹೇಗೆ ನೀನು ವಿಡಿಯೋ ಮಾಡುತ್ತಿದ್ದೀಯೆ ಎಂದು ಬೆದರಿಸಿದ್ದಾಳೆ. ಆದರೆ ಆ ಸಹ ಪ್ರಯಾಣಿಕ ನೀವು ಗಲಾಟೆ ಮಾಡುತ್ತಿರುವುದಕ್ಕೆ ಮಾಡುತ್ತಿರುವುದು ಎಂದು ಪ್ರತ್ಯುತ್ತರ ನೀಡಿದ್ದಾರೆ.

ಇನ್ನು ನಿಮ್ಮಂಥವರು ಮಾಡುವ ತಪ್ಪಿಗೆ ನಿರ್ವಾಹಕರು ಕೆಲಸ ಕಳೆದುಕೊಂಡು ಮನಗೆ ಹೋಗುತ್ತಿದ್ದಾರೆ. ಅದೇರೀತಿ ಇಂದು ತನಿಖಾಧಿಕಾರಿಗಳು ಬಂದು ಟಿಕೆಟ್‌ ಚೆಕ್‌ ಮಾಡುವ ವೇಳೆ ನೀವು ಇಲ್ಲ ಎಂದು ಈ ನಿರ್ವಾಹಕರನ್ನು ಅಮಾನತು ಮಾಡಿದರೆ ಅವರ ಕುಟುಂಬಕ್ಕೆ ನೀವು ಒತ್ತಾಸೆಯಾಗುತ್ತೀರ ಎಂದು ಮತ್ತೊಬ್ಬ ಸಹಪ್ರಯಾಣಿಕರು ಆಕೆಯನ್ನು ತರಾಟೆಗೆ ತೆದುಕೊಂಡಿದ್ದಾರೆ.

ಒಟ್ಟಾರೆ, ಇತ್ತ ಅಧಿಕಾರಿಗಳು ನಾನಾ ಕಾರಣಗಳನ್ನು ನೀಡಿ ಚಾಲನಾ ಸಿಬ್ಬಂದಿಗೆ ಕಿರುಕುಳು ನೀಡುತ್ತಿದ್ದು ಅದರಿಂದ ತಪ್ಪಿಸಿಕೊಂಡು ಹೇಗೋ ಡ್ಯೂಟಿಗೆ ಬಂದರೆ ಇಲ್ಲಿ ಕೆಲ ಪ್ರಯಾಣಿಕರು ಈ ರೀತಿ ಅಸಭ್ಯವಾಗಿ ವರ್ತಿಸುವ ಮೂಲಕ ಕಿರುಕುಳ ನೀಡುತ್ತಾರೆ. ಇದರಿಂದ ನಿತ್ಯ ಚಾಲನಾ ಸಿಬ್ಬಂದಿ ಒತ್ತಡದಲ್ಲೇ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಹಲವು ಕಾಯಿಲೆಗಳೀಗೆ ತುತ್ತಾಗುತ್ತಿದ್ದಾರೆ.

ಇನ್ನು ಈ ಬಗ್ಗೆ ಕೇಳಬೇಕಾದ ಸರ್ಕಾರ ಇದಾವುದು ನಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ವರ್ತಿಸುತ್ತಿದೆ. ಅಲ್ಲದೆ ಅಧಿಕಾರಿಗಳು ಕೂಡ ಪ್ರಯಾಣಿಕರನ್ನು ಓಲೈಸಿಕೊಳ್ಳುವುದಕ್ಕೆ ಈ ಸಿಬ್ಬಂದಿಗಳ ವಿರುದ್ಧವೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡುವುದು, ಅಮಾನತು ಮಾಡುವ ಕೆಲಸಕ್ಕೆ ಮುಂದಾಗುತ್ತಿದೆ. ಇದು ಕೊನೆಯಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಈ ನಿಟ್ಟಿಲ್ಲಿ ಕ್ರಮಕ್ಕೆ ಸಂಸ್ಥೆ ಮತ್ತು ಸರ್ಕಾರ ಮುಂದಾಗಬೇಕು ಎಂದು ಸಿಬ್ಬಂದಿ ಆಗ್ರಹ ಪೂರ್ವಕವಾಗಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು