NEWSನಮ್ಮಜಿಲ್ಲೆನಮ್ಮರಾಜ್ಯ

ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಇದೇ ಅಕ್ಟೋಬರ್‌ ಮೊದದಿನದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕರಿಗೆ ಕೊಟ್ಟಿರುವ ETM ಮಷಿನ್‌ಗಳಿಂದ ಹಲವಾರು ಸಮಸ್ಯೆಗಳಾಗುತ್ತಿವೆ. ಇದರಿಂದ ನಿರ್ವಾಹಕರು ತಮ್ಮ ಜೇಬು ಖಾಲಿ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಅಲ್ಲದೆ ಈ ಹೊಸ ETM ಮಷಿನ್‌ಗಳು ಬ್ಲಾಸ್ಟ್‌ ಆಗುವ ಆತಂಕ ಕೂಡ ಇದೆ. ಈಗಾಗಲೇ ಚಿಕ್ಕಮಗಳೂರು ವಿಭಾಗದ ಬಸ್ಸೊಂದರ ETM ಮಷಿನ್ ಸಿಡಿದು ಬಸ್‌ನಲ್ಲಿ ಆತಂಕ ಉಂಟುಮಾಡಿ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು ಇದೆ.

ಜತೆಗೆ ಸರಿಯಾಗಿ ಪರಿಶೀಲನೆ ಮಾಡದೆ ಆತುರಾತುರವಾಗಿ ಈ ETM ಮಷಿನ್‌ಗಳನ್ನು ನಿರ್ವಾಹಕರಿಗೆ ಕೊಟ್ಟಿದ್ದು, ನಿರ್ವಾಹಕರು ನಮೋದಿಸುವುದು ಒಂದು ಆದರೆ ಮಷಿನ್‌ನಲ್ಲಿ ಬರುವುದು ಇನ್ನೊಂದು. ಇದರಿಂದ ನಿರ್ವಾಹಕರು ತಮ್ಮದಲ್ಲದ ತಪ್ಪಿಗೆ ಸಂಸ್ಥೆಗೆ ತಮ್ಮ ಹಣವನ್ನು ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ.

ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ: ನೋಡಿ ಇಂದು (ಅ.21) ಬೆಳಗ್ಗೆ 8.51ರಲ್ಲಿ ರಾಮನಗರ ಘಟಕದ ವಾಹನವೊಂದರಲ್ಲಿ ಮಂಚನಬೆಲೆಯಿಂದ ರಾಮನಗರಕ್ಕೆ 9 ಪಾಸ್ ನಮೂದಿಸಿದ ನಿರ್ವಾಹಕನಿಗೆ ತಲಾ 25 ಮುಖಬೆಲೆಯ ಒಂದು ಚೀಟಿ ಬಂದಿದೆ. ಇದರಿಂದ ಗಾಬರಿಗೊಂಡ ನಿರ್ವಾಹಕ ಕೂಡಲೇ ಘಟಕದ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಅದಕ್ಕೆ ಅಧಿಕಾರಿಗಳು ಸರಿ Adjust ಮಾಡಿಕೊಂಡು ಬಾ ಎಂದು ಹೇಳಿದ್ದಾರೆ.

ಆದರೆ, 9 ಪಾಸ್ ನಮೂದಿಸಿದ ನಿರ್ವಾಹಕನಿಗೆ ತಲಾ 25 ರೂ. ಮುಖಬೆಲೆಯ ಒಂದು ಚೀಟಿ ಬಂದಿದೆ ಅಂದರೆ ಈ 225 ರೂಪಾಯಿಯನ್ನು ನಿರ್ವಾಹಕ ಕಟ್ಟಬೇಕು. ಇಲ್ಲಿ ನಿರ್ವಾಹಕ ಮಾಡದ ತಪ್ಪಿಗೆ ತಮ್ಮ ಕೈಯಿಂದ ಸಂಸ್ಥೆಗೆ ಹಣಕಟ್ಟಬೇಕು ಎಂದರೆ ಹೇಗೆ? ಅಲ್ಲದೆ ಮಷಿನ್‌ ರೆಡಿ ಮಾಡಿರುವವರು ಈ ಬಗ್ಗೆ ಸರಿಯಾಗಿ ಅಳವಡಿಸಿಲ್ಲ ಎಂದರೆ ಅದು ಅವರ ತಪ್ಪು ಅದಕ್ಕೆ ನಿರ್ವಾಹಕರು ಏಕೆ ದಂಡಕಟ್ಟಬೇಕು.

ಒಟ್ಟಾರೆ ಹೊಸ ETM ಮಷಿನ್ ಅವಾಂತರದಿಂದಾಗಿ ನಿರ್ವಾಹಕರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲಾಗದ ಸ್ಥಿತಿ ತಲುಪಿದೆ. 225 ರೂ. ನಿರ್ವಾಹಕನೇ ತನ್ನ ಸಂಬಳದಲ್ಲಿ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರುಂತ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಹಾಕು ಎಂಬಂತಾಗಿದೆ.

ಇನ್ನು ಈ ಮಷಿನ್‌ಗಳನ್ನು ಸರಿಪಡಿಸಿ ಇಲ್ಲ ಹಳೇ ಮಷಿನ್‌ಗಳನ್ನೇ ಕೊಡಿ ಎಂದು ನೌಕರರು ಮನವಿ ಮಾಡಿದ್ದರೂ ಕೂಡ ಎಂಡಿ ಅನ್ಬುಕುಮಾರ್‌ ಮಾತ್ರ ಈ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಅನ್ಬುಕುಮಾರ್‌ ಅವರು ನಿಗಮಕ್ಕೆ ಬಂದ ಹೊಸದರಲ್ಲಿ ನೌಕರರ ಪಾಲಿನ ದೇವರು ಎಂಬಂತೆ ಓಡಾಡುತ್ತಿದ್ದರು. ಆದರೆ ಈಗ ನೌಕರರ ಪಾಲಿನ ದೆವ್ವವಾಗುತ್ತಿರುವುದು ನೋಡಿದರೆ ಅಚ್ಚರಿಯಾಗುತ್ತಿದೆ. ಅಲ್ಲದೆ ರಾಯರ ಕುದುರೆ ಆಗುತ್ತಿದ್ದಾರೆ ಎನಿಸುತ್ತಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ