NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪುರ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡಲೇ ಬೇಕು: ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ರಾತ್ರಿ-ಹಗಲೆನ್ನದೇ ಸೇವೆ ಗೈಯುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನೌಕರರಿಗೆ ಸರ್ಕಾರಿ ನೌಕರರಂತೆ ಸರಿಸಮಾನ ವೇತನ ಕೊಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರವೂ ಕೂಡ ಸಾರಿಗೆ ನೌಕರರನ್ನು ಕಡೆಗಣಿಸಿತು ಮತ್ತೆ ಈಗ ಇರುವ ಸರ್ಕಾರ ಕೂಡ ಅದೇ ಅಮಾಡುತ್ತಿದೆ. ಇದು ತಪ್ಪು ಅವರು ರಾತ್ರಿ ಹಗಲು ಎನ್ನದೆ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದಾರೆ. ಇಂಥ ನೌಕರರಿಗೆ ಸರಿ ಸಮಾನ ವೇತನ ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ನೌಕರರ ಬೇಡಿಕೆಗಳನ್ನು ಒಮ್ಮೆಗೆ ಈಡೇರಿಸುವುದಕ್ಕೆ ಆಗದಿದ್ದರೆ ಮೂರು ತಿಂಗಳೋ ಆರು ತಿಂಗಳೂ ಕಾಲವಕಾಶ ತೆಗೆದುಕೊಂಡು ಈಡೇರಿಸಬೇಕಿದೆ. ಈ ಬಗ್ಗೆ ನಾವು ಕೂಡ ಸದನದಲ್ಲಿ ಚರ್ಚಿಸಿದ್ದೇವೆ ಆದರೆ ಅದು ಇನ್ನು ಸಕಾರಗೊಂಡಿಲ್ಲ ಮಂತ್ರಿಗಳು ಈ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇನ್ನು ಇತ್ತ ನೌಕರರ ವೇತನವನ್ನು ಕನಿಷ್ಠ 36,000 ರೂ.ಗಳಿಗೆ ಹೆಚ್ಚಿಸುವ ಜತೆಗೆ ವೇತನ ಆಯೋಗದಂತೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನಿಗದಿ ಮಾಡಬೇಕು ಎಂದು ಸಮಸ್ತ ಸಾರಿಗೆ ಅಧಿಕಾರಿಗಳು ಆಗ್ರಹಿಸಿದ್ದಾರೆ. ಅಲ್ಲದೆ ಈ ಸಂಬಂಧ ಇದೇ ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ನಮ್ಮನ್ನು ಸಭೆಗೆ ಆಹ್ವಾನ ಮಾಡಬೇಕು ಎಂದು ಮನವಿ ಮತ್ರ ಸಲ್ಲಿಸುವುದಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಳದೆ 5 ವರ್ಷಗಳಿಂದ ಸರಿಯಾಗಿ ವೇತನ ಪರಿಷ್ಕರಣೆಯಾಗದೆ ನೌಕರರು ಸಂಕಷ್ಟದಲ್ಲಿದ್ದಾರೆ. 7ನೇ ವೇತನ ಆಯೋಗದಂತೆ ಸರ್ಕಾರ ಕನಿಷ್ಠ ವೇತನವನ್ನು 36,000 ರೂ.ಗೆ ಹೆಚ್ಚಿಸಬೇಕು ಎಂದು ನಾಲ್ಕೂ ನಿಗಮಗಳ ಅಧಿಕಾರಿಗಳು ಒತ್ತಾಯಿಸಿದ್ದು, ಈ ಜತೆಗೆ ಕಳೆದ 2020 ಜನವರಿ 1ರಿಂದ ಜಾರಿಗೆ ಬಂದಿರುವ ವೇತನ ಹೆಚ್ಚಳದ ಶೇ.15ರಷ್ಟರ 38 ತಿಂಗಳ ಮೂಲ ವೇತನದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ಕೂಡ ಕಾನೂನಾತ್ಮಹವಾಗಿ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಹಿಂದಿನಿಂದಲೂ ಟ್ರೇಡ್‌ ಯೂನಿಯನ್‌ಗಳು ಬರಿ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳಷ್ಟೇ ಹೋರಾಟದಲ್ಲಿ ಭಾಗವಹಿಸಬೇಕು ಕಾರಣ ಇವರೆಲ್ಲ ಕಾರ್ಮಿಕರು ಎಂದು ಸಂಸ್ಥೆಯಲ್ಲಿ ಬೇಡದ ನಿಯಮವನ್ನು ಹಾಕಿ ಹೋರಾಟ ಮಾಡಿಕೊಂಡು ಬರುತ್ತಿರುವುದರಿಂದ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಹೆಣಗಾಡುತ್ತಿದ್ದೇವೆ. ಇದರಿಂದ ನಾವು ಕೂಡ ಸಂಸ್ಥೆಯಲ್ಲಿ ಬರಿ ದುಡಿಯುವ ಎತ್ತುಗಳಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ನಮ್ಮ ಸಂಸ್ಥೆಗಳಲ್ಲಿ ಜಂಟಿ ಕ್ರಿಯಾ ಸಮಿತಿ ಎಂಬ ಬಣ ನಮಗೆ ಅಗ್ರಿಮೆಂಟ್‌ ಮೂಲಕವೇ ವೇತನ ಹೆಚ್ಚಳ ಮಾಡಬೇಕು. ಅದು ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಅತ್ತ ನೌಕರರ ಒಕ್ಕೂಟ ಎಂಬ ಬಣ ಸಮಾನವ ವೇತನ ಬೇಕು. ಅದು ನೀವು ಕಳೆದ ವಿಧಾನ ಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸುತ್ತಿದೆ.

ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ರಾಜ್ಯ ಸರ್ಕಾರ ನೌಕರರಿಗೆ ಕೊಟ್ಟ ಭರವಸೆ ಈಡೇರಿಸದೆ ಕಾಲದೂಡುತ್ತಿದೆ. ಆದರೆ ಇದು ಸರಿಯಾದ ಕ್ರಮವಲ್ಲ. ಎಂದಿದ್ದರೂ ತಾವು ನಮಗೆ ಈ ಸೌಲಭ್ಯಗಳನ್ನು ಕೊಡಲೇಬೇಕು. ಹೀಗಾಗಿ ಈ ವಿಳಂಬ ನೀತಿ ಬಿಟ್ಟು ನಮಗೆ ಬರಬೇಕಿರುವ 38 ತಿಂಗಳ ಹಿಂಬಾಕಿಯನ್ನು ಕೊಡಲೇ ಬಿಡುಗಡೆ ಮಾಡಬೇಕು. ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಕೊಡಬೇಕು. ಅದಕ್ಕೆ ಮಧ್ಯಂತ್ರ ಪರಿಹಾರವನ್ನು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದು ಪ್ರಮುಖ ವಿಷಯವೆಂದರೆ ಈ ಎಲ್ಲವನ್ನು ಗಮನಿಸುತ್ತಿರುವ ನೌಕರರ ಸಂಘಟನೆಗಳನ್ನು ಹೊರತುಪಡಿಸಿ ನಮ್ಮ ಕುಟುಂಬ ಸದಸ್ಯರ ನೆರವಿನೊಂದಿಗೆ ಖುದ್ದು ಕುಟುಂಬದವರ ಮೂಲಕವೇ ಹೋರಾಟ ಮಾಡಿಸುವುದಕ್ಕೂ ಈಗಾಗಲೇ ಒಂದೆರಡು ಗೌಪ್ಯ ಸಭೆಗಳು ಕೂಡ ಆಗಿವೆ. ಹೀಗಾಗಿ ತಾವು ಜಟಿಲ ಸಮಸ್ಯೆ ತಂದುಕೊಳ್ಳದೆ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಅಧಿಕಾರಿಗಳು ನೌಕರರ ಸಂಘಟನೆಗಳ ಆಗ್ರಹದ ನಡುವೆ ಇಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ನೌಕರರಿಗೆ ಸಿಗಬೇಕಿರುವುದನ್ನು ಕೊಡಬೇಕು ಈ ರೀತಿ ಕಾಡಿಸುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಈ ನಡುವೆ ಸಾರಿಗೆ ಸಚಿವರು ಡಿ.13ರಂದು ನಡೆದ ಸಭೆಯಲ್ಲಿ ಈ ಎಲ್ಲವನ್ನು ಮತ್ತೊಮ್ಮೆ ಸಿಎಂ ಅವರ ಜತೆ ಚರ್ಚಿಸುತ್ತೇನೆ ಈ ಅಧಿವೇಶನ ಮುಗಿಯಲಿ ಎಂದು ಹೇಳಿದ್ದರು. ಆದರೆ ಅಧಿವೇಶನ ನಿನ್ನೆಯೇ ಮುಗಿದಿದ್ದು ಮತ್ತೆ ಯಾವಾಗ ಚರ್ಚಿಸಿ ನೌಕರರಿಗೆ ಸಿಹಿ ಸುದ್ದಿಕೊಡುತ್ತಾರೋ ಗೊತ್ತಿಲ್ಲ ಆದರೆ ನೌಕರರು ಮಾತ್ರ ಯಾವುದೇ ಮಾಹಿತಿ ಕೊಡದೆ ದಿಢೀರ್‌ ಪ್ರತಿಭಟನೆ ಮಾಡುವುದಕ್ಕೆ ಸಜ್ಜಾಗುತ್ತಿದ್ದು, ಈ ಬಾರಿ ಅಧಿಕಾರಿಗಳು ಕೂಡ ಭಾಗಿಯಾಗಬೇಕು ಎಂದು ಮನವಿ ಮಾಡುತ್ತಿದ್ದಾರೆ.

Megha
the authorMegha

Leave a Reply

error: Content is protected !!