ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಗಳು ಅಂದರೆ ಶೇ.90ರಷ್ಟು ಜನರಿಗೆ ತುಂಬಾ ಇಷ್ಟ. ಇನ್ನು ಅದರಲ್ಲಿ ಇರುವ ಕೆಲವೇ ಕೆಲವು ಬೆರಳೆಣಿಕೆಯ ನಿರ್ವಾಹಕರ ವರ್ತನೆ ನೋಡಿದರೆ ಭಾರಿ ಹಿಂಸೆ ಅನಿಸುತ್ತದೆ.
ಆದರೆ, ನಾನು ಕಂಡ ಒಬ್ಬ ನಿಷ್ಠಾವಂತ ಕಂಡಕ್ಟರ್ ಬಗ್ಗೆ ಹೇಳಲೇಬೇಕು. ಊರು ಗೊತ್ತಿಲ್ಲ, ಆದ್ರೆ ತುಳು ಭಾಷೆ ಚೆನ್ನಾಗಿ ಮಾತಾಡ್ತಾರೆ, ಕನ್ನಡ, ಹಿಂದಿ ಎಲ್ಲಾನು ಅವರಿಗೆ ಗೊತ್ತಿದೆ, ಮಂಗಳೂರು – ಮಡಿಕೇರಿ – ಮೈಸೂರು – ಬೆಂಗಳೂರು ಮಾರ್ಗದ ಬಸ್ನಲ್ಲಿ ಕಂಡ ಒಬ್ಬ ಅಪರೂಪದ ಕಂಡಕ್ಟರ್ ಇವರು.
ಸದಾ ನಗುಮುಖದ, ಹಸನ್ಮುಖಿ. ಪ್ರತಿಯೊಬ್ಬರನ್ನು ತಮ್ಮವರಂತೆ ಕಾಣುವ ಮನಸ್ಥಿತಿ, ಎಲ್ಲರಿಗೂ ಬಸ್ನಲ್ಲಿ ಸೀಟ್ ಸಿಗಬೇಕು ಅಂತ ಸೀಟ್ ಅರೇಂಜ್ಮೆಂಟ್, ಪ್ರತಿಯೊಬ್ಬರಿಗೂ ಟಿಕೆಟ್ ಆಗಿದ್ಯಾ ಅಂತ ಮುಂದಿನಿಂದ ಹಿಂದಿನ ತನಕ ಕೇಳಿಕೊಂಡು ಬರುವರು. ರೀತಿ, ಎಲ್ಲರ ಆಧಾರ್ ಕಾರ್ಡ್ ಚೆಕ್ ಮಾಡಿ ಕೆಲಸಕ್ಕೆ ಮೋಸ ಮಾಡದೇ ಟಿಕೆಟ್ ಕೊಡುವ ರೀತಿ, ಹಾಗೇನೇ ಬಸ್ ಇಳಿದು ಹೋಗುವಾಗ ಚಿಲ್ಲರೆ/ ಚೇಂಜ್ ಮರೆತು ಹೋಗ್ತಾರೆ ಅಂತ ಎಲ್ಲರ ಟಿಕೆಟ್ ಆದ್ಮೇಲೆ ಅವರೇ ಕೇಳಿಕೊಂಡು ಬಂದು ಕೊಡುವ ರೀತಿ.
ಇನ್ನು ಅಪರೂಪಕ್ಕೆ ಬಸ್ನಲ್ಲಿ ಬಂದವರು ವಾಕರಿಕೆ ಮಾಡುತ್ತಿದ್ದರೆ ಅವವರಿಗೆ ಸೀಟ್ ಅರೇಂಜ್ಮೆಂಟ್ ಮಾಡುವ ರೀತಿ. ಸಿಕ್ಕಾಪಟ್ಟೆ ಗಲಾಟೆ ಮಾಡೋರ್ಗೆ ಅಂದ್ರೆ ನಾರ್ತ್ ಇಂಡಿಯನ್ಸ್ಗೆ ಸಪರೇಟ್ ಸೀಟ್ ಮಾಡಿ ಯಾರಿಗೂ ಹರ್ಟ್ ಆಗ್ಬಾರ್ದು ಅನ್ನೋ ತರ ನಡ್ಕೊಳ್ಳುವ ರೀತಿ.
ಎಕ್ಸ್ಪ್ರೆಸ್ ಆಗಿದ್ದರೂ ಕೂಡ ಎಲ್ಲ ಕಡೆ ಬಸ್ ನಿಲ್ದಾಣ ಬರುವ ಮೊದಲೇ ಎಚ್ಚರಿಸುವ ರೀತಿ, ಮೊದಲು ಹತ್ತಿದವರಿಗೆ ಸ್ಟ್ಯಾಂಡಿಂಗ್ ಇದ್ದವರಿಗೆ ಸೀಟ್ ಸಿಗಬೇಕು ಅಂತ ನೆಕ್ಸ್ಟ್ ಸ್ಟಾಪ್ ಅಲ್ಲಿ ಯಾರು ಕೂಡ ಕೆಳಗಡೆ ಇರುವವರಿಗೆ ಸೀಟ್ ರಿಸರ್ವ್ ಮಾಡಬಾರದು ಅಂತ ಹೇಳಿ ಮೊದಲು ಬಂದ ಪ್ರಯಾಣಿಕರಿಗೆ ಕೊಡುವ ಆದ್ಯತೆ. ಇವೆಲ್ಲ ನೋಡಿದಾಗ ಇವರ ತಾಳ್ಮೆಗೆ ಒಂದು ಸಲ್ಯೂಟ್ ಕೊಡಲೇಬೇಕು.
ಇನ್ನು ಸಿಕ್ಕಾಪಟ್ಟೆ ರಶ್ ಇದ್ದರೂ ಕೂಡ ತಾಳ್ಮೆಯಿಂದ ಎಲ್ಲರಿಗೂ ಸಹಾಯ ಮಾಡುವ ಇವರ ಮನಸ್ಥಿತಿಗೆ ದೊಡ್ಡ ಸಲಾಂ. ಇಂತಹ ಕಂಡಕ್ಟರ್ಗಳು ಎಲ್ಲ ಬಸ್ ಅಲ್ಲಿ ಇರಬೇಕು. ಜರ್ನಿ ಆಯಾಗಿರುತ್ತದೆ ಎಂದು ಮಿಲೆನಿಯರ್ ಕಾವ್ಯಾ ಪುತ್ತೂರು ಎಂಬುವವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ನೋಡಿ ಈ ಕಾವ್ಯಾ ಅವರಿಗೆ ಈ ನಿರ್ವಾಹಕರು ಯಾರು ಎಲ್ಲಿಯವರು ಎಂದು ಗೊತ್ತಿಲ್ಲ. ಆದರೂ ಅವರ ಬಗ್ಗೆ ಇಷ್ಟೊಂದು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಆ ಕಂಡಕ್ಟರ್ ಯಾರು ಎಂದರೆ ಮಂಗಳೂರು ವಿಭಾಗದ ಮೂರನೇ ಘಟಕದ ಕಂಡಕ್ಟರ್ ಜಯಂತ ಪೂಜಾರಿ ನಡುಬೖಲು ಎಂಬುವರು.
ಇನ್ನು ಈ ನಿರ್ವಾಹಕರಂತೆ ಬಹುತೇಕ ಎಲ್ಲ ನಿರ್ವಾಹಕರು ಇದ್ದಾರೆ. ಆದರೆ ಅವರು ಬೆಳಕಿಗೆ ಬಂದಿಲ್ಲ ಅಷ್ಟೆ. ಆದರೆ ಜಯಂತ ಪೂಜಾರಿ ನಡುಬೖಲು ಅವರು ಈ ಮೇಡಂ ಅವರ ಕಣ್ಣಿಗೆ ಬಿದ್ದಿದ್ದರಿಂದ ಅವರಿಗೆ ಬರವಣಿಗೆ ಇದ್ದಿದ್ದರಿಂದ ಅವರ ಬೆಳಕಿಗೆ ಬಂದಿದ್ದಾರೆ. ಇದೇ ರೀತಿ ಉಳಿಯ ನಿರ್ವಾಹಕರು ಕೂಡ ಎಲೆ,ರೆ ಕಾಯಿಯಂತೆಯೇ ನಿಮ್ಮ ನಿಷ್ಠವಂತ ಡ್ಯೂಟಿಮಾಡಿ ತಾವಾಗಿಯೇ ಒಂದುದಿನ ಹೊಳೆಯುತ್ತೀರಿ…
Related

You Might Also Like
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!
ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...
9 ಎಕರೆಯಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ ನಿರ್ಮಾಣ: ಉಸ್ತುವಾರಿ ಸಚಿವ ಕೆಎಚ್ಎಂ
ನಾಡಪ್ರಭು ಕೆಂಪೇಗೌಡರ 516 ನೇ ಜಯಂತ್ಯೋತ್ಸವ ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಆವತಿ ಗ್ರಾಮದ ಬಳಿ 9.10 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ,...
ಲೋಕಾಯುಕ್ತರು ರಾಜಿನಾಮೆ ನೀಡಬೇಕು, ಅಬಕಾರಿ ಸಚಿವರ ವಜಾಗೊಳಿಸಲು ಆಗ್ರಹಿಸಿ KRS ಪಕ್ಷದಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಲೋಕಾಯುಕ್ತರು ರಾಜಿನಾಮೆ ನೀಡಲಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾಗೊಳಿಸಿ, ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ...
ಸರ್ಕಾರ ಅತೀ ಶೀಘ್ರದಲ್ಲೇ ಸಾರಿಗೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸಲಿದೆ: ಡಿಸಿಎಂ ಡಿಕೆಶಿ
ಬೆಂಗಳೂರು: ಚುನಾವಣಾ ಪೂರ್ವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ...
KKRTC: ತನ್ನದಲ್ಲದ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿದ ಮಹಿಳೆ- ಪ್ರಶ್ನಿಸಿದ್ದಕ್ಕೆ ಪ್ರಜ್ಞೆ ತಪ್ಪುವವರೆಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಸಂಬಂಧಿಕರು
ಕಲಬುರಗಿ: ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದುಕೊಳ್ಳಲು ಮುಂದಾದ ಮಹಿಳೆಗೆ ಇದು ನಿಮ್ಮ ಆಧಾರ ಕಾರ್ಡ್ ಅಲ್ಲ ನಿಮ್ಮದನ್ನು ಕೊಡಿ ಎಂದು ನಿರ್ವಾಹಕರು ಹೇಳಿದ್ದಕ್ಕೆ ಮಹಿಳೆ...