NEWSಬೆಂಗಳೂರು

BOBಯಲ್ಲಿ ವೇತನ ಖಾತೆ ಹೊಂದಿರುವ BMTC ನೌಕರರಿಗೆ 1.25 ಕೋಟಿ ರೂ. ವಿಮೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬ್ಯಾಂಕ್ ಆಫ್ ಬರೋಡದೊಂದಿಗೆ ವೇತನ ಖಾತೆ ಹೊಂದಿರುವ ನೌಕರರಿಗೆ 1.25 ಕೋಟಿ ರೂ. ಅಪಘಾತ ವಿಮೆ ನೀಡಲಾಗುವುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಾರ್ಮಿಕ ಮತ್ತು ಕಲ್ಯಾಣ ಇಲಾಖೆ ತಿಳಿಸಿದೆ.

ಈ ಸಂಬಂಧ ಇಂದು ಸುತ್ತೋಲೆ ಹೊರಡಿಸಿದ್ದು, ಇದೇ ತಿಂಗಳ 23ರಂದು State Government Salary Package (SGSP) ಯೋಜನೆಯಡಿ ಸಂಸ್ಥೆ ಹಾಗೂ ಬ್ಯಾಂಕ್‌ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಜು.23ರ 2025ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಆಫ್ ಬರೋಡ (Bank of Baroda) ದೊಂದಿಗೆ ಐದು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ, ಈ ಬ್ಯಾಂಕಿನಲ್ಲಿ ವೇತನ ಖಾತೆ ಹೊಂದಿರುವ ಅಧಿಕಾರಿ/ ನೌಕರರಿಗೆ SGSP ಯೋಜನೆಯಡಿ ಈ ಸಮಗ್ರ ಸೌಲಭ್ಯಗಳನ್ನು Insurance Regulatory and Development Authority of India (IRDAI) ಅವರ ನಿಯಮಗಳು ಮತ್ತು ಷರತ್ತುಗಳನ್ವಯ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

1. ವೈಯಕ್ತಿಕ ಅಪಘಾತ ವಿಮೆ: ಬ್ಯಾಂಕ್ ಆಫ್ ಬರೋಡದಲ್ಲಿ ವೇತನಖಾತೆ ಹೊಂದಿರುವ ಅಧಿಕಾರಿ/ನೌಕರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ನಾಮನಿರ್ದೇಶಿತರಿಗೆ 1 ಕೋಟಿ ರೂ. ವಿಮಾ ಪರಿಹಾರ. ಒಂದು ವೇಳೆ ಕರ್ತವ್ಯ ನಿರತ ವೇಳೆ ಅಪಘಾತದಿಂದ ಮೃತಪಟ್ಟಲ್ಲಿ 1.25 ರೂ. ಕೋಟಿ ವಿಮಾ ಪರಿಹಾರ ನೀಡಲಾಗುವುದು.

3. ವಾಯು ಅಪಘಾತದಲ್ಲಿ ಮೃತಪಟ್ಟಲ್ಲಿ 1 ರೂ. ಕೋಟಿ ವಿಮಾ ಪರಿಹಾರ. ಉಚಿತ ಜೀವ ವಿಮೆ ಪರಿಹಾರ ಮೊತ್ತ 10 ಲಕ್ಷ ರೂ. ಅಪಘಾತದಿಂದ ಶಾಶ್ವತ ಪೂರ್ಣ ಅಂಗವಿಕಲತೆ ಉಂಟಾದಲ್ಲಿ 1 ಕೋಟಿ ರೂ ವಿಮಾ ಪರಿಹಾರ. ಒಂದು ವೇಳೆ ಅಪಘಾತದಿಂದ ಶಾಶ್ವತ ಭಾಗಶಃ ಅಂಗವಿಕಲತೆ ಉಂಟಾದಲ್ಲಿ 75 ಲಕ್ಷ ರೂ ವಿಮಾ ಪರಿಹಾರ. ಅಲ್ಲದೆ ಆಸ್ಪತ್ರೆ ನಗದು ಸೌಲಭ್ಯ 30 ಸಾವಿರ ರೂ ಕೊಡಲಾಗುವುದು.

ಇದಲ್ಲದೆ ಹೆಚ್ಚುವರಿ ಸೌಲಭ್ಯಗಳು: 1. ಹೆಣ್ಣು ಮಕ್ಕಳ ಮದುವೆಗಾಗಿ : 18 ರಿಂದ 25 ವರ್ಷಗಳ ವಯೋಮಿತಿಯೊಳಗಿನ ಹೆಣ್ಣು ಮಕ್ಕಳ ಮದುವೆಗೆ ಮೂಲ ವೈಯಕ್ತಿಕ ಅಪಘಾತ ವಿಮಾ ಮೊತ್ತದ ಶೇಕಡ 10 ರಷ್ಟು (ರೂ 10 ಲಕ್ಷಗಳು). 2. ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ : ಮೂಲ ವೈಯಕ್ತಿಕ ಅಪಘಾತ ವಿಮಾ ಮೊತ್ತದ ಶೇಕಡ 10
ರಷ್ಟು (ರೂ 10 ಲಕ್ಷಗಳು) (10+2 ನಂತರ ತರಗತಿ).

ಯೋಜನೆಯಡಿ ವಿಧಿಸಿರುವ ಷರತ್ತುಗಳು: 1. ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರು ಬ್ಯಾಂಕ್ ಆಫ್ ಬರೋಡದಲ್ಲಿ SGSP ಯೋಜನೆಯಡಿ ವೇತನ ಖಾತೆ ಹೊಂದಿರುವವರು ಒಟ್ಟು ವೇತನದ ಆಧಾರದ ಮೇರೆಗೆ ಈ ಸೌಲಭ್ಯಗಳನ್ನು ಪಡೆಯಲು ಅರ್ಹರಿರುತ್ತಾರೆ.

2. ಈ ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಆಫ್ ಬರೋಡದಲ್ಲಿ ವೇತನ ಖಾತೆ ತೆರೆದು. ಒಂದು ಮಾಹೆಯ ವೇತನ ಆ ಖಾತೆಗೆ ಕಡ್ಡಾಯವಾಗಿ ಜಮೆ ಆಗಿರತಕ್ಕದ್ದು. 3. ಅಪಘಾತದಿಂದ ಅಧಿಕಾರಿ/ನೌಕರರು ಮೃತಪಟ್ಟಲ್ಲಿ ಬ್ಯಾಂಕ್‌ಗೆ 90 ದಿನಗಳ ಒಳಗೆ ಅಪಘಾತದ ಮಾಹಿತಿಯನ್ನು ನೀಡುವುದು ಮತ್ತು ಕೇಮ್ಸ್ ದಾಖಲಾತಿಗಳನ್ನು 180 ದಿನಗಳ ಒಳಗೆ ಸಲ್ಲಿಸುವುದು.

4. ಪ್ರತಿ ತಿಂಗಳ 15 ನೇ ತಾರೀಖಿನಂದು ಹೊಸದಾಗಿ ಬ್ಯಾಂಕ್ ಆಫ್ ಬರೋಡದಲ್ಲಿ ವೇತನ ಖಾತೆ ತೆರೆಯುವ ಅಧಿಕಾರಿ/ನೌಕರರ ಮಾಹಿತಿಯನ್ನು (ಹೆಸರು, ಹುಟ್ಟಿದ ದಿನಾಂಕ, ಬ್ಯಾಂಕ್ ಆಫ್ ಬರೋಡ ಶಾಖೆ ಮತ್ತು ಒಟ್ಟು ವೇತನ ಬ್ಯಾಂಕ್ ಆಫ್ ಬರೋಡದ ಇಮೇಲ್ ವಿಳಾಸಗಳಾದ rbdm.blrcentral@ bankofbaroda.com ಮತ್ತು
planning.blrcentral@ bankofbaroda.com ಇವುಗಳಿಗೆ ಇ-ಮೇಲ್ ಮುಖಾಂತರ ಗಣಕ ಇಲಾಖೆ, ಬೆಂಮಸಾಸಂಸ್ಥೆ ರವರಿಂದ ಕಡ್ಡಾಯವಾಗಿ ಕಳುಹಿಸುವುದು.

5. ಶಿಸ್ತು ಪ್ರಾಧಿಕಾರ ಹೊಂದಿರುವ ಇಲಾಖಾ ಮುಖ್ಯಸ್ಥರು/ವಿಭಾಗೀಯ ನಿಯಂತ್ರಣಾಧಿಕಾರಿಗಳು ನೌಕರರ ವಜಾ ರಾಜೀನಾಮೆ ಹಾಗೂ ಅಮಾನತು ಇತ್ಯಾದಿ ಕಾರಣಗಳಿಂದ ವೇತನ ಖಾತೆಗೆ ಸಂಬಳ ಜಮಾ ಆಗುವುದು ನಿಂತ ಪಕ್ಷದಲ್ಲಿ ಬ್ಯಾಂಕ್ ಆಫ್ ಬರೋಡದ ಇ-ಮೇಲ್ ವಿಳಾಸಗಳಾದ rbdm.blrcentral@ bankofbaroda.com ಮತ್ತು planning.blrcentral@bankofbaroda.com ಇವುಗಳಿಗೆ ಇ-ಮೇಲ್ ಮುಖಾಂತರ ಮಾಹಿತಿಯನ್ನು ಕಡ್ಡಾಯವಾಗಿ ಕಳುಹಿಸಲು ಕ್ರಮಕೈಗೊಳ್ಳುವುದು ಹಾಗೂ ಮಾಹಿತಿ ನೀಡಿರುವ ಬಗ್ಗೆ ದಾಖಲೆಗಳನ್ನು ನಿರ್ವಹಿಸುವುದು.

6. ಬ್ಯಾಂಕ್ ಆಫ್ ಬರೋಡದಲ್ಲಿ ವೇತನಖಾತೆ ಹೊಂದಿರುವ ಅಧಿಕಾರಿ/ನೌಕರರು ಬೇರೆ ಸಂಸ್ಥೆ/ಘಟಕಗಳಿಗೆ ವರ್ಗಾವಣೆಗೊಂಡಲ್ಲಿ ಅದರ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡುವುದು ಅವರ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ. ಸ್ವಯಂವೇದ್ಯವಾಗಿರುವ ಅನುಬಂಧದ (Annexure : 1-A, I-B, 11, 111-A. IV-1 & IV-2) ಪ್ರತಿಗಳನ್ನು ಅಡಕಗೊಳಿಸಿದೆ.

ಅದರಂತೆ ಬ್ಯಾಂಕ್ ಆಫ್ ಬರೋಡದಲ್ಲಿ ವೇತನಖಾತೆ ಹೊಂದಿರುವ ಅಧಿಕಾರಿ/ನೌಕರರು ಅಪಘಾತದಿಂದ ಮೃತಪಟ್ಟಲ್ಲಿ ಅಥವಾ ಶಾಶ್ವತ/ಭಾಗಶಃ ಅಂಗವೈಕಲ್ಯಕ್ಕೆ ಒಳಗಾದಲ್ಲಿ ನಾಮನಿರ್ದೇಶಿತರು ಅರ್ಹ ವಿಮಾ ಮೊತ್ತ ಪಡೆಯಲು ಸಲ್ಲಿಸುವ ಕ್ಲೈಮ್ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡುವುದರ ಮೂಲಕ ಕ್ಲೈಮ್ ದಾಖಲಾತಿಗಳನ್ನು ಮೃತ ಅಧಿಕಾರಿ/ ನೌಕರರ ಕುಟುಂಬದ ಅವಲಂಬಿತರಿಂದ ಪಡೆದುಕೊಂಡು ಇಲಾಖಾ/ಕಾರ್ಯಸ್ಥಾನ ಮುಖ್ಯಸ್ಥರ ಇ-ಮೇಲ್ ಮುಖಾಂತರ ಸಂಬಂಧಪಟ್ಟ ವಿಮಾ ಕಂಪನಿಗೆ ಕಳುಹಿಸುವುದು ಹಾಗೂ ಕ್ಲೈಮ್ಗಳ ಎಲ್ಲ ಮೂಲ ದಾಖಲಾತಿಗಳನ್ನು ಕೇಂದ್ರ ಕಛೇರಿಯ ಕಾರ್ಮಿಕ ಇಲಾಖೆಗೆ ಕಡ್ಡಾಯವಾಗಿ ಕಳುಹಿಸಲು ಸೂಚಿಸಲಾಗಿದೆ.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ