ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಹೆಸರಲ್ಲಿ ಅನೇಕ ಸಂಘಟನೆ ಕಟ್ಟಿಕೊಂಡು ನೌಕರರ ಹಿತ ಕಾಪಾಡುವಲ್ಲಿ ವಿಫಲವಾಗಿವೆ.
ಸಂಘಟನೆಗಳ ನಾಯಕರೇ ನೌಕರರ ನಿತ್ಯದ ಜೀವನವನ್ನು ಒಂದು ಸಾರಿ ತಮ್ಮ ಕಣ್ಣ ಮುಂದೆ ತಂದು ಕೊಳ್ಳಿ… ನಾವು ಮಾಡುವ ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿದೆಯಾ? ಜೀವನ ಸರಿಯಾಗಿ ನಡೆಯುತ್ತಿದೆಯಾ? ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವ? ನೌಕರರ ಕೌಟುಂಬಿಕ ಸಮಸ್ಯೆಗಳು ಏನು ಎಂಬ ಬಗ್ಗೆ ತಮಗೆ ಅರಿವಿದೆಯಾ?
ತಾವುಗಳು ಹತ್ತಾರು ಸಂಘಟನೆ ಕಟ್ಟಿಕೊಂಡು ತಮ್ಮಗಳಲ್ಲೇ ಪೈಪೋಟಿ ಮಾಡುತ್ತಾ, ತಮ್ಮಗಳ ಸಂಘಟನೆಗಳ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ನೌಕರರ ನೈಜ ಸಮಸ್ಯೆಯನ್ನೇ ಮರೆಯುತ್ತಿದ್ದೀರಾ ಅಲ್ವಾ? ನಿಮಗೆ ಇದೇ ಮುಖ್ಯ ವಾಗಿದೆ. ಇದು ನಿಮಗೇ ಸರಿ ಅನಿಸುತ್ತದೆಯೇ ಒಮ್ಮೆ ಯೋಚಿಸಿ.
ನಿಮ್ಮ ಸಂಘಟನೆ ಯಾವುದೇ ಆಗಿರಲಿ, ಬಲ ಎಷ್ಟೇ ಇರಲಿ, ಇದೊಂದು ಬಾರಿ ಎಲ್ಲರೂ ಸೋತು ಬಿಡಿ. ನೌಕರರ ಹಿತಕ್ಕಾಗಿ, ನೌಕರರ ಅನುದಿನದ ಬೇಡಿಕೆ ಈಡೇರಿಕೆಗಾಗಿ, ನೌಕರರ ನೊಂದಿರುವ ಮನಸಿಗಾಗಿ. ನೀವು ಇದೀಗ ಸೋತು ನೌಕರರ ಪರವಾಗಿ ನಿಂತುಬಿಡಿ.
ಆಗ ಮಾತ್ರ ನಿಮ್ಮ ಸಂಘಟನೆಗಳು ನೌಕರರ ಮನಸಲ್ಲಿ ಉಳಿಯುತ್ತವೆ ಜತೆಗೆ ನಿಮ್ಮ ಅಸ್ತಿತ್ವವೂ ಉಳಿಯುತ್ತದೆ. ಸರ್ಕಾರ ಕೂಡಾ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ.
ಬೇರೆ ಇಲಾಖೆಗಳು, ನಿಗಮಗಳ ವೇತನ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಮತ್ತು ಆಡಳಿತ ಮಂಡಳಿ ಜತೆಗೆ ಮಾತನಾಡಿ, ಸರಿ ಸಮಾನ ವೇತನಕ್ಕಾಗಿ ಸಂಸ್ಥೆಯ ಬಹುತೇಕ ಅಧಿಕಾರಿಗಳು, ನೌಕರರ ಒಲವು ಇರುವಾಗ ಅದರ ಕಡೆಗೆ ತಾವೆಲ್ಲರೂ ಒಟ್ಟಾಗಿ ಒಪ್ಪಿ ಸರ್ಕಾರಕ್ಕೆ ಒತ್ತಾಯ ಮಾಡಿ.
ಅಕಸ್ಮಾತ್ ನಮ್ಮದೇ ನಡೆಯಬೇಕು ಅಗ್ರಿಮೆಂಟ್ ಆಗಲೇಬೇಕು ಅನ್ನೋ ಹಾಗಿದ್ರೆ ಸರಿ ಸಮಾನ ವೇತನಕ್ಕೆ ಸಮಾನ ರೀತಿ ಬರುವ ಅಗ್ರಿಮೆಂಟ್ ಮಾಡಿಸಿ ಕೊಡಿ. ಬಂದಿರುವ ಸುಸಮಯದಲ್ಲಿ ತಮ್ಮಗಳ ಸ್ವಾರ್ಥ ನಿಲುವು ನಿರ್ಧಾರ ಬದಿಗೊತ್ತಿ ಒಗ್ಗಟ್ಟಿನಲ್ಲಿ ನಿಂತರೆ ನಮ್ಮಯ ಎಲ್ಲ ಬೇಡಿಕೆಗಳು ಈಡೇರುತ್ತವೆ.
ನಾವೆಲ್ಲರೂ ಅತ್ಯಂತ ವಿನಮ್ರ ವಾಗಿ ಕೇಳೋದು ಇಷ್ಟೇ ಹಿಂದಿನದೆಲ್ಲ ಬಿಟ್ಟು ಸರ್ಕಾರದ ಜತೆಗೆ ಒಗ್ಗಟ್ಟಿನಲ್ಲಿ ತಮ್ಮಗಳ ಅಭಿಪ್ರಾಯ ಮಂಡಿಸಿ, ಈಡೇರಿಸುವಂತೆ ಒತ್ತಾಯಿಸುವುದು ಸೂಕ್ತ.
ಇನ್ನು ಅಧಿಕಾರಿಗಳ ಸಂಘಟನೆಗಳ ಮುಖಂಡರು ಕಳೆದ 2024ರ ಅಕ್ರೋಬರ್ನಲ್ಲಿ ಮತ್ತು ಅದರ ನಂತರ ಒಂದೆರಡು ಬಾರಿ ವೇತನ ಆಯೋಗದಂತೆ ವೇತನ ಕೊಡಿ ಎಂದು ಸರ್ಕಾರಕ್ಕೆ ಹಾಗೂ ಸಾರಿಗೆ ಸಚಿವರಿಗೆ ಮನವಿ ಕೊಟ್ಟಿದ್ದು ಬಿಟ್ಟರೆ ಮತ್ತೆ ಏನನ್ನು ಮಾಡಲಿಲ್ಲ. ಜತೆಗೆ ಮುಷ್ಕರವನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಲಿಲ್ಲ. ಇದರಿಂದ ಸರ್ಕಾರ ಇನ್ನಷ್ಟು ವಿಳಂಬಧೋರಣೆ ತಳಿಯುವುದಕ್ಕೆ ದಾರಿಯಾಯಿತು.
ಇನ್ನಾದರೂ ಅಧಿಕಾರಿಗಳ ಸಂಘಟನೆಗಳ ಮುಖಂಡರು ಈ ಬಗ್ಗೆ ಎಚ್ಚೆತ್ತು ನಾವೆಲ್ಲರೂ ಒಂದೆ ಎಂಬ ನಿಲುವಿನೊಂದಿಗೆ ಹೋದರೆ ಸರ್ಕಾರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ ಈಗ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಜತೆಗೆ ಅದರ 16 ತಿಂಗಳ ವೇತನ ಹಿಂಬಾಕಿಯನ್ನು ಕೊಡಲು ಒಪ್ಪುತ್ತದೆ. ಇದಕ್ಕೆ ಸಂಘಟನೆಗಳ ಮುಖಂಡರು ಒಮ್ಮತದಿಂದ ನಡೆದುಕೊಳ್ಳಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
Related

You Might Also Like
KSRTC ನೌಕರರ ವೇತನ ಹೆಚ್ಚಳ ಪ್ರಕರಣ: ನಾಳೆ ಹೈ ಕೋರ್ಟ್ನಲ್ಲಿ ವಿಚಾರಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!
ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...
9 ಎಕರೆಯಲ್ಲಿ ಕೆಂಪೇಗೌಡರ ವಸ್ತು ಸಂಗ್ರಹಾಲಯ ನಿರ್ಮಾಣ: ಉಸ್ತುವಾರಿ ಸಚಿವ ಕೆಎಚ್ಎಂ
ನಾಡಪ್ರಭು ಕೆಂಪೇಗೌಡರ 516 ನೇ ಜಯಂತ್ಯೋತ್ಸವ ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಆವತಿ ಗ್ರಾಮದ ಬಳಿ 9.10 ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ,...
ಲೋಕಾಯುಕ್ತರು ರಾಜಿನಾಮೆ ನೀಡಬೇಕು, ಅಬಕಾರಿ ಸಚಿವರ ವಜಾಗೊಳಿಸಲು ಆಗ್ರಹಿಸಿ KRS ಪಕ್ಷದಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಲೋಕಾಯುಕ್ತರು ರಾಜಿನಾಮೆ ನೀಡಲಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾಗೊಳಿಸಿ, ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ...
ಸರ್ಕಾರ ಅತೀ ಶೀಘ್ರದಲ್ಲೇ ಸಾರಿಗೆ ನೌಕರರಿಗೆ ಕೊಟ್ಟ ಭರವಸೆ ಈಡೇರಿಸಲಿದೆ: ಡಿಸಿಎಂ ಡಿಕೆಶಿ
ಬೆಂಗಳೂರು: ಚುನಾವಣಾ ಪೂರ್ವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ...