NEWSನಮ್ಮಜಿಲ್ಲೆನಮ್ಮರಾಜ್ಯಶಿಕ್ಷಣ-

ಶಾಲೆಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ನಿರ್ದೇಶನ: ಇದು ಕಾನೂನು ಸಚಿವಾಲಯದ ವೈಫಲ್ಯ ಎಂದ ಎಎಪಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸಂಕಷ್ಟದಿಂದ ತತ್ತರಿಸಿ ಹೋಗಿದ್ದ ಪೋಷಕರ ಹೊರಾಟಕ್ಕೆ ಮಣಿದು ಶೇ.30 ರಷ್ಟು ಶಾಲಾ ಶುಲ್ಕ ಕಡಿತ ಮಾಡಿದ್ದ ರಾಜ್ಯ ಸರ್ಕಾರ ಪೋಷಕರ‌ ಮೂಗಿಗೆ ತುಪ್ಪ ಸವರಿತ್ತು. ಈಗ ರಾಜ್ಯ ಕಾನೂನು ಸಚಿವಾಲಯದ ವೈಫಲ್ಯದಿಂದ ಕರ್ನಾಟಕ ಹೈಕೋರ್ಟ್ ಕಳೆದ ಸೋಮವಾರ ( ಮಾ.8 ) ಸಿಬಿಎಸ್ಇ, ಐಸಿಎಸ್ಇ ಪಠ್ಯ ಕ್ರದ ಅನುಸಾರ ಶಿಕ್ಷಣ ನೀಡುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳದಂತೆ ನಿರ್ದೇಶನ ನೀಡಿರುವುದರ ಹಿಂದೆ ಸರ್ಕಾರದ ವೈಫಲ್ಯವೂ ಅಡಗಿದೆ ಎಂದು ಆಮ್ ಆದ್ಮಿ ಪಕ್ಷ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆರೋಪಿಸಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾನೂನು ಸಚಿವಾಲಯ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಿದಂತಿದೆ. ಇಂತಹ ಜನೋಪಯೋಗಿ ಆದೇಶವನ್ನು ಹೈಕೋರ್ಟ್ ಹಾಳುಗೆಡವಲು ಸಾಧ್ಯವೇ ಎನ್ನುವ ಅನುಮಾನ ಮೂಡುತ್ತಿದೆ ಎಂದರು.

ಸಿಬಿಎಸ್ಇ, ಐಸಿಎಸ್ಇ ಪಠ್ಯ ಕ್ರಮ ಬೋಧಿಸುತ್ತಿರುವ ಶಾಲೆಗಳಲ್ಲಿ ಹಣ ಉಳ್ಳವರ ಮಕ್ಕಳು ಓದುತ್ತಾರೆ ಎನ್ನುವುದು ಸುಳ್ಳು, ತಮ್ಮ ಮಕ್ಕಳಿಗೂ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಿಗಲಿ ಎಂದು ಅನೇಕ ಪೋಷಕರು ಹಗಲು ರಾತ್ರಿ ದುಡಿದು ಭವಿಷ್ಯ ರೂಪಿಸಲು ಒದ್ದಾಡುತ್ತಿರುತ್ತಾರೆ. ಇಂತಹ ಪೋಷಕರ ಬಗ್ಗೆ ಕಿಂಚಿತ್ತಾದರೂ ಸರ್ಕಾರ ಯೋಚಿಸಿದೆಯೇ?. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಎಲ್ಲಿದ್ದೀರಿ. ಈ ಜಟಾಪಟಿಯಿಂದ ತೊಂದರೆಗೆ ಒಳಗಾಗುವುದು ಮುಗ್ದ ಮಕ್ಕಳು ಅವರ ಬಗೆಗಾದರೂ ಕಾಳಜಿ ತೋರಿಸಿ ಎಂದು ಹೇಳಿದರು.

2011ರ ಜನವರಿ ತಿಂಗಳಿನಲ್ಲಿ ನ್ಯಾ. ನಾಗಮೋಹನ್ ದಾಸ್ ಅವರ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿತ್ತು. ಸಿಬಿಎಸ್ಇ, ಐಸಿಎಸ್ಇ ಪಠ್ಯ ಕ್ರಮದ ಅನುಸಾರ ಶಿಕ್ಷಣ ನೀಡುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳು ರಾಜ್ಯ ಶಿಕ್ಷಣ ಕಾಯ್ದೆ ಅನುಸಾರ ಶುಲ್ಕ ನೀತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿತ್ತು. ಆದರೆ ಈಗ ಪ್ರಭಾವಿಗಳ ಕೈಚಳಕದಿಂದ ಪೋಷಕರು ಕಷ್ಟ ಅನುಭವಿಸುವಂತಾಗಿದೆ ಎಂದರು.

ಸರ್ಕಾರ ಸಿಬಿಎಸ್ಇ, ಐಸಿಎಸ್ಇ ಪಠ್ಯ ಕ್ರಮ ಬೋದಿಸುತ್ತಿರುವ ಶಾಲೆಗಳ ಪರ ವಕಾಲತ್ತು ವಹಿಸಿರುವುದು ಇದೇ ಮೊದಲೇನಲ್ಲ. 1998ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದು ಇಂತಹ ಶಾಲೆಗಳನ್ನು ಕಾಯ್ದೆಯಿಂದ ಹೊರಗಿಡಲಾಗಿತ್ತು. ಪ್ರತಿಯೊಂದು ವಿಷಯಗಳ ಕುರಿತು ತಮ್ಮದೇ ಆದ ತೀರ್ಮಾನ ತೆಗೆದುಕೊಳ್ಳುವ ಅವಕಾಶವನ್ನು ಸರ್ಕಾರ ನೀಡಿತ್ತು ಎಂದು ಹೇಳಿದರು.

2007- 08 ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದ ಅಂಕುಶದಿಂದ ತಪ್ಪಿಸಿಕೊಂಡಿದ್ದ ಇಂತಹ ಶಾಲೆಗಳು ಶೇ.136 ರಷ್ಟು ಶುಲ್ಕವನ್ನು ಹೆಚ್ಚಿಸಿ ಆಟಾಟೋಪ ಮೆರೆದಿದ್ದವು. ಈಗ ಈ ಕೊರೊನಾ ಸಂದರ್ಭದಲ್ಲೂ ಸರ್ಕಾರ ಬಿಗಿ ನಿಲುವು ತಾಳದೆ ಅಸಹಾಯಕತೆ ಪ್ರದರ್ಶನದ ನಾಟಕವಾಡುತ್ತಿದೆ ಎಂದು ಕಿಡಿಕಾರಿದು.

ವಕೀಲರು ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರಾದ ರವಿಚಂದ್ರ ಮಾತನಾಡಿ, ಶುಲ್ಕ ಕಡಿತ ಮಾಡದ ಶಾಲೆಗಳ ವಿರುದ್ದ ದೂರು ಸಲ್ಲಿಸಲು ಸರ್ಕಾರ ಪ್ರತ್ಯೇಕ ಕೌಂಟರ್ ತೆರೆದಿತ್ತು. ಈ ದೂರುಗಳನ್ನು ಪ್ರತಿ ಸೋಮವಾರ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಶಿಕ್ಷಣ ಇಲಾಖೆಗೆ ಸೂಚನೆಯನ್ನು ಕೊಟ್ಟಿತ್ತು ಆದರೆ ಇದುವರೆಗು ಕೇವಲ ಬೆರಳೆಣಿಕೆಯಷ್ಟು ದೂರುಗಳನ್ನು ವಿಲೇವಾರಿ ಮಾಡಲಾಗಿದೆಯೇ ಹೊರತು ಯಾರಿಗೂ ಶಿಕ್ಷಣ ಇಲಾಖೆ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ಆರೋಪಿಸಿದರು.

ಈ ಕೂಡಲೇ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿ ಎಲ್ಲಾ ಪೋಷಕರಿಗೆ ಅನುಕೂಲವಾಗುವಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ. ಇಲ್ಲದಿದ್ದರೆ ಶಿಕ್ಷಣ ಸಚಿವರ ಮನೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

1 Comment

  • ಖಾಸಗಿ ಶಾಲೆಗಳ ನಿಯಂತ್ರಣ ಅವಶ್ಯಕ

Leave a Reply

error: Content is protected !!
LATEST
ರಾಯಚೂರು: ಕೊರವಿಹಾಳದಲ್ಲಿ ಬೀದಿ ನಾಯಿ ದಾಳಿಗೆ 4 ವರ್ಷ ಹೆಣ್ಣು ಮಗು ಬಲಿ ಮೈಸೂರು: ಕಲುಷಿತ ನೀರು ಸೇವಿಸಿ ಯುವಕ ಮೃತ, 35ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋದ ದಂಪತಿ: ಸಂಪ್‌ಗೆ ಬಿದ್ದು ಮಗು ಸಾವು ಜೂನ್​ 4ರಿಂದ ಗೂಗಲ್ ಪೇ ಕಾರ್ಯ ನಿರ್ವಹಿಸುದಿಲ್ಲ : ಅಚ್ಚರಿ ಮೂಡಿಸಿದ ನ್ಯೂಸ್‌ KSRTC: ಬಸ್‌ ಕಂಪನಿಯೇ ಪ್ರಮಾಣಪತ್ರ ಕೊಟ್ಟಿಲ್ಲ- ಕೆಎಂಪಿಎಲ್ ಕಡಿಮೆ ಅಂತ ನೌಕರರಿಗೆ ಮೆಮೋ ಕೊಡುವ ಅಧಿಕಾರಿಗಳು !? ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್