ಬೆಂಗಳೂರು: 1932 ರಲ್ಲೇ ಇತಿಹಾಸ ತಜ್ಞ ಡಾ.ಪಿ.ಬಿ. ದೇಸಾಯಿ ಅವರು ’ಮಿತಾಕ್ಷರ’ ಖ್ಯಾತಿಯ ವಿಜ್ಞಾನೇಶ್ವರರು ಕರ್ನಾಟಕದವರು ವಿಶೇಷವಾಗಿ ಗುಲಬರ್ಗಾ( ಈಗಿನ ಕಲಬುರಗಿ) ಜಿಲ್ಲೆಯ ಶಹಾಬಾದ್ ಬಳಿಯ ಮರತೂರು ಗ್ರಾಮದವರು ಎಂದು ಹಾಗೂ ಶಾಸನ ತಜ್ಞ ಮೈಸೂರಿನ ಸೀತಾರಾಮ ಜಾಗೀರದಾರರು, 64 ಸಾಲುಗಳ ಶಾಸನದ ಪೂರ್ತಿ ಪಾಠ ಓದಿ, ಅದರ ತಾರೀಖು 1123 ಜನವರಿ 6 ಎಂದು ಭಾಷಾಂತರಿಸಿ ಪ್ರಕಟಿಸಿದ್ದರು ಆದರೂ ನಮಗಿನ್ನೂ ಜಾಣ-ಕಿವುಡು.
ಕಲ್ಯಾಣ ಚಾಲುಕ್ಯ ಚಕ್ರವರ್ತಿ 6ನೇ ವಿಕ್ಷಮಾದಿತ್ಯನ ಆಸ್ಥಾನದಲ್ಲಿದ್ದ ವಿಜ್ಞಾನೇಶ್ವರರು ಹಿಂದೂ ಕಾನೂನಿಗೆ ಆಧಾರವಾದ ಮಿತಾಕ್ಷರ ಗ್ರಂಥವನ್ನು (1076-1126 ನಡುವೆ) ಬರೆದರು. ಬ್ರಿಟಿಷ್ ಆಡಳಿತ ವ್ಯವಸ್ಥೆಗೆ ಇಡೀ ಭಾರತಕ್ಕೆ ಅನ್ವಯಿಸಬಹುದಾದ ಒಂದು ಕಾನೂನು ಸಂಹಿತೆಯ ಅಗತ್ಯವಿತ್ತು. ಬಂಗಾಳ ಮತ್ತು ಅಸ್ಸಾಂಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳೂ ಈ ‘ಮಿತಾಕ್ಷರಾ’ದ ಹಿಂದೂ ಲಾ ಅಧಿಕೃತತೆಯನ್ನು ಒಪ್ಪಿಕೊಂಡವು.
ಆಸ್ತಿಯ ಹಕ್ಕುಗಳು, ದತ್ತಕ ಪದ್ಧತಿ, ಸ್ಥಿರ ಆಸ್ತಿಗಳ ಹಂಚಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದೂ ನ್ಯಾಯಶಾಸ್ತ್ರದ ನಿಲುವುಗಳನ್ನು ತೆಗೆದುಕೊಳ್ಳುವುದಕ್ಕೆ ತಜ್ಞರು ಈ ಪುಸ್ತಕದ ಮೊರೆಹೋಗುತ್ತಾರೆ. 90 ಬೇರೆ ಬೇರೆ ಧರ್ಮಗ್ರಂಥ, ಉಪನಿಷತ್ತು, ಧರ್ಮಸೂತ್ರಗಳನ್ನು ಅಧ್ಯಯನ ಮಾಡಿ ಬರೆದ ಗ್ರಂಥದ ಉಲ್ಲೇಖಗಳಿಲ್ಲದೇ ಭಾರತೀಯ ನ್ಯಾಯ ಪದ್ಧತಿ ಪೂರ್ಣಗೊಳ್ಳದು ಎಂಬಷ್ಟು ಪ್ರಭಾವ ವಿತಾಕ್ಷರದ್ದಾಗಿದೆ. ಮಧ್ಯಯುಗದಲ್ಲಿ ಮಿತಾಕ್ಷರವೇ ಸಂವಿಧಾನವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ವಿಜ್ಞಾನೇಶ್ವರರ ಪರಿಚಯ ನೀಡುವ ಎರಡು ಶಾಸನವು ಕಾಶಿಯ ವಿಶ್ವನಾಥ ದೇವಾಲಯ ಬಳಿ ದೊರೆತಿವೆ.
ಹೆನ್ರಿ ಥಾಮಸ್ ಕೋಲ್ ಬ್ರೂಕ್, ಈ ಪುಸ್ತಕವನ್ನು ಕ್ರಿ.ಶ.1810 ರಷ್ಟು ಹಿಂದೆಯೇ ಇಂಗ್ಲಿಷಿಗೆ ಅನುವಾದ ಮಾಡಿದರು. ಭಾರತದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಮಿತಾಕ್ಷರವು ಅತ್ಯುತ್ತಮ ಆಧಾರವಾಗಿದ್ದಿತು’ ಎಂದು ‘ಹಿಸ್ಟರಿ ಆಫ್ ಹಿಂದು ಧರ್ಮಶಾಸ್ತ್ರ’ ಎಂಬ ಕೃತಿಯಲ್ಲಿ ಮಹಾ ಮಹೋಪಾಧ್ಯಾಯ ಪಿ.ವಿ.ಕಾಣೆ ಅಭಿಪ್ರಾಯಪಡುತ್ತಾರೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ಅವರು ಮರತೂರಿನಲ್ಲಿ ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ (ನಿಯಮಿತ) ಸಂಘ ಸ್ಥಾಪಿಸಿ, ವಿಜ್ಞಾನೇಶ್ವರರ ಹೆಸರಲ್ಲಿ (2002)ಒಂದು ಸ್ಮಾರಕ ನಿರ್ಮಿಸಿದ್ದಾರೆ. ಗುಲಬರ್ಗಾ ವಿ.ವಿ. ಸಹ ಸಹಕರಿಸಿ, ಕಾನೂನು ವಿಭಾಗದ ಮೇಲ್ವಿಚಾರಣೆಯಲ್ಲಿ ಸಂಶೋಧನೆಗೆ ಅನುವು ಮಾಡಿಕೊಟ್ಟಿತು. ಈ ಕೇಂದ್ರಕ್ಕೆ ಅಖಿಲ ಭಾರತ ಮನ್ನಣೆಯೂ ದೊರೆತಿದೆ.
ಆದರೂ… ವಿಜ್ಞಾನೇಶ್ವರರ ಮರತೂರು ನಿರ್ಲಕ್ಷ್ಯ: ಮರತೂರಿನಲ್ಲಿ ಹತ್ತು ಹಲವು ದೇವಾಲಯಗಳಿವೆ. ಸುಮಾರು 800 ವರ್ಷಗಳ ಇತಿಹಾಸದ ಹತ್ತು ಹಲವು ಅಸ್ತಿತ್ವಗಳು ಕಣ್ಣ ಮುಂದಿವೆ. ಚಾಲುಕ್ಯ ಶೈಲಿಯ ಕಾಶಿ ವಿಶ್ವನಾಥ ಹಾಗೂ ಶಂಕರಲಿಂಗನ ದೇವಾಲಯವಿದೆ. ಹಿಂಭಾಗ ಪುರಾತನ ಪುಷ್ಕರಣಿ ಇದೆ. ತ್ರಿಕೂಟಾಚಲ ರಚನೆಯ ಈಶ್ವರ ದೇವಾಲಯ, ಇಲ್ಲೊಂದು ಕೋಟೆಯೂ ಇದೆ.
ಮರತೂರಿನಲ್ಲಿ ಚಾಲಕ್ಯರು 300 ದೇವಾಲಯಗಳು ಹಾಗೂ 300 ಬಾವಿಗಳಿದ್ದವು ಎಂದು ಇತಿಹಾಸ ಅರಚಿಕೊಳ್ಳುತ್ತದೆ. ಆದರೆ, ಬೆರಳೆಣಿಕೆಯಷ್ಟು ಸಿಗುವ ದೇವಾಲಯಗಳನ್ನು ಮುಳ್ಳು ಜಾಲಿ ಕಂಟಿಗಳು ಆವರಿಸಿಕೊಂಡಿವೆ. ಗರ್ಭಗುಡಿಗಳು ನಾಯಿಗಳ ಆವಾಸ ಸ್ಥಳಗಳಾಗಿವೆ. ಜನರಿಗೆ ಜೂಜು-ಮೋಜಿನ ತಾಣಗಳಾಗಿವೆ. ಕೆಲವು ದೇವಾಲಯಗಳ ಪ್ರಾಂಗಣಗಳು ದನಕರುಗಳ ಕೊಟ್ಟಿಗೆಗಳಾಗಿವೆ. ದ್ವಾರಪಾಲಕ ಶಿಲ್ಪಗಳು ಬೋರಲು ಬಿದ್ದಿವೆ. ಮುಳ್ಳು-ಕಂಟಿ ಆವರಿಸಿರುವ ಕೋಟೆಯ ಪ್ರವೇಶಕ್ಕೆ ದಾರಿ ಹುಡುಕಬೇಕು. ಬಹುತೇಕ ದೇವಾಲಯಗಳು ಜೀರ್ಣಾವಸ್ಥೆಯಲ್ಲಿವೆ.
ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ ನಿಯಮಿತ ನಂತರವಾದರೂ ಈ ಎಲ್ಲ ಸ್ಮಾರಕಗಳ ಸಂರಕ್ಷಣೆ-ಅಭಿವೃದ್ಧಿ ಯಾಗುವ ನಿರೀಕ್ಷೆ ಇತ್ತು. ಸರ್ಕಾರವು ಸಹ ಅರೆ ಕಾಸಿನ ಮಜ್ಜಿಗೆಯಷ್ಟು ಧನ ಸಹಾಯ ನೀಡಿ ಕೈತೊಳೆದುಕೊಂಡಿದೆ. ಮರತೂರಿಗೆ ರೈಲು ನಿಲ್ದಾಣವಿದೆ. ಗುಲಬರ್ಗಾದಿಂದ ಹೆಚ್ಚೆಂದರೆ 18 ಕಿ.ಮೀ. ದೂರವಿರುವ ಊರೇ ಐತಿಹಾಸಿಕ ದೃಷ್ಟಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಾಸ್ತವ ಹೀಗಿರುವಾಗ, ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿಗಳು, ವಾರಂಗಲ್ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು, ಬಹಮನಿ… ಹೀಗೆ ಸಾಲು ಸಾಲು ರಾಜವಂಶರಾಳಿದ ನಾಡು ಎಂದು ಬೀಗಲು ನಮಗೆ ಯಾವ ಹಕ್ಕಿದೆ ಎಂಬುದೇ ಪ್ರಶ್ನೆ.
Related

You Might Also Like
KSRTC ಕೋಲಾರ: ನೌಕರರ ದುಡಿಮೆಗೆ ತಕ್ಕ ವೇತನಕೊಡದೆ ಕಾಡುತ್ತಿರುವ ಡಿಸಿ, ಡಿಟಿಒಗಳ ಅಮಾನತು ಮಾಡಿ- ಸಾರಿಗೆ ಸಚಿವರಿಗೆ ಸೈಕಲ್ ರೆಡ್ಡಿ ಪತ್ರ
ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಲಾರ ವಿಭಾಗದ ನಿಯಂತ್ರಣಾಧಿಕಾರಿಗಳ ಅಧಿಕಾರ ದುರ್ಬಳಕೆ, ನೌಕರರಿಗೆ ಕಿರುಕುಳ ಮತ್ತು ಲಂಚಾವತಾರ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು...
KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕನಿಗೆ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ನೌಕರ ಸುರೇಶ್ ಬಾಬು, ಮತ್ತೊಬ್ಬ ಸಿಬ್ಬಂದಿ ಕಿರುಕುಳ: ಆರೋಪ
ದೊಡ್ಡಬಳ್ಳಾಪುರ: KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕ ಹನುಮಂತರಾಯ ಜಳಕಿ ಎಂಬುವರಿಗೆ ಡೀಸೆಲ್ ವಿಭಾಗದ ನೌಕರ ಸುರೇಶ್ ಬಾಬು ಮತ್ತು ಇನ್ನೊಬ್ಬ ಸಿಬ್ಬಂದಿ ಲಂಚಕ್ಕೆ ಬೇಡಿಕೆ...
ನಿವೃತ್ತಿಗೆ ಮುನ್ನವೇ ನೌಕರರ ವಿಚಾರಣೆ ಮುಗಿದಿರಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮದ ಖಡಕ್ ಎಚ್ಚರಿಕೆ
ಬೆಂಗಳೂರು: ವೃತ್ತಿಯಲ್ಲಿರುವ ಸಂದರ್ಭದಲ್ಲಿ ದುರ್ನಡತೆ, ಕರ್ತವ್ಯಲೋಪದಂತಹ ಆರೋಪಗಳನ್ನು ಎದುರಿಸುವ ಸರ್ಕಾರಿ ನೌಕರರು, ಅವರು ನಿವೃತ್ತರಾಗುವ ಮುನ್ನವೇ ಅವರ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ...
KSRTC ನೌಕರರ ವೇತನ ಹೆಚ್ಚಳಕ್ಕೆ ಜೆಡಿಎಸ್ ಮುಖಂಡ, ವಕೀಲ ಶಂಕರೇಗೌಡ ಆಗ್ರಹ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ....
ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ
ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ರೂಪಾ ನಗರದಲ್ಲಿ ಸ್ಥಳೀಯ...
ಜಮೀರ್ ರಾಜೀನಾಮೆಗೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯ
ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ...
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ
ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ...
KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ಪಾಷ ಅವರನ್ನು ಕರ್ನಾಟಕ...
ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ್ರು
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ...