CRIMENEWSನಮ್ಮಜಿಲ್ಲೆ

KKRTC: ಸಂಸ್ಥೆಯ ವಾಹನ ದುರ್ಬಳಕೆ ಮಾಡಿಕೊಂಡ ಅಧಿಕಾರಿಯ ಪತ್ನಿ- ವಜಾ ಮಾಡಿದ್ದು ಮಾತ್ರ ಸಾಮಾನ್ಯ ನೌಕರನ!!

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ನಿಕಟಪೂರ್ವ ವಿಭಾಗೀಯ ಸಾರಿಗೆ ಅಧಿಕಾರಿ ಹಾಗೂ ಪದೇಪದೆ ನಿಗಮದ ಕಾನೂನುಗಳನ್ನು ಗಾಳಿಗೆ ತೂರಿ ಇಲಾಖಾ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವ ದೇವಾನಂದ ಬಿರಾದಾರ ಅವರ ಪತ್ನಿ 2021 ರಲ್ಲಿ ಇಲಾಖಾ ವಾಹನ ಸಂಖ್ಯೆ KA 32 F 2238 ವನ್ನು ಗುಡಿ ಗುಂಡಾರಗಳನ್ನು ಸುತ್ತಲೂ ಬಳಸಿಕೊಂಡಿದ್ದರು.

ಅವರು ಇಲಾಖಾ ವಾಹನವನ್ನು ದುರ್ಬಳಕೆ ಮಾಡುತ್ತಿರುವ ವಿಡಿಯೋ ಇಲಾಖಾ ವಾಹನ ಅಧಿಕಾರಿಗಳಿಗಿಂತ ಅವರ ಫ್ಯಾಮಿಲಿಯವರು ಜಾಸ್ತಿ ಬಳಕೆ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿತ್ತು.

ಅದಕ್ಕೆ ಸಂಸ್ಥೆಯ ನೌಕರ ಎಂ.ಎನ್. ಇಳಕಲ್ (ಈಗ ಮಾಜಿ ಕಿರಿಯ ಸಹಾಯಕ ವಿಜಯಪುರ ವಿಭಾಗ) ಅವರ ಡೂಪ್ಲಿಕೇಟ್ ID ಸೃಷ್ಟಿಸಿ ಆ ಮುಖಾಂತರ ಮೇಡಂ ಇದು ವಿಜಯಪುರ ವಿಭಾಗದಲ್ಲಿ ಕಾಮನ್ ಇದಕ್ಕಿಂತ ಹೆಚ್ಚು ಭ್ರಷ್ಟಾಚಾರ ವಿಭಾಗದಲ್ಲಿ ನಡೆಯುತ್ತಿದೆ ಆನೆ ನಡೆದಿದ್ದೆ ದಾರಿ ಎಂದು ಕಾಮೆಂಟ್ ಹಾಕಿದ್ದರು ಎಂದು ಆರೋಪಿಸಿ ವಜಾ ಮಾಡಲಾಗಿದೆ.

ಇನ್ನು ಈ ಕಾಮೆಂಟ್ ಹಾಕಿದ್ದಕ್ಕೆ ವಿಜಯಪುರ ವಿಭಾಗದ ಭ್ರಷ್ಟ, ನೌಕರರ ವಿರೋಧಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ಎಂ.ಎನ್. ಇಳಕಲ್ ಅವರನ್ನು ಅಧಿಕಾರಿಗಳ ಬಗ್ಗೆ ಹಾಗೂ ಸಂಸ್ಥೆಯ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್ ಮಾಡಿರುತ್ತೀರಿ ಎಂದು ಅಮಾನತು ಮಾಡಿದ್ದರು.

ಅಲ್ಲದೆ ನಿಮ್ಮ ಫೇಸ್ಬುಕ್ ID ಹ್ಯಾಕ್ ಆಗಿದ್ದು ಗೊತ್ತಿದ್ದರೂ ಸಹ ನೀವು CEN ಪೊಲೀಸ್ ಸ್ಟೇಷನ್ ವಿಜಯಪುರದಲ್ಲಿ ದೂರು ದಾಖಲು ಮಾಡಲು ವಿಫಲರಾಗಿರುತ್ತೀರಿ ಎಂದು 2022ರಲ್ಲಿ ನಿಬಂಧನೆ 23ರಲ್ಲಿ ಆಪಾದನಾ ಪತ್ರ ನೀಡಿದ್ದರು. ನಿಬಂಧನೆ 23ರಲ್ಲಿ ಜಾರಿ ಮಾಡಿರುವ ಆಪಾದನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ನಿಮ್ಮ ಫೇಸ್ಬುಕ್ ID ಹ್ಯಾಕ್ ಆಗಿದ್ದು ಅಂತಾ. ಇವರ ಫೇಸ್ಬುಕ್ ID ಹ್ಯಾಕ್ ಆಗಿದ್ದರೆ ಇವರು ಕಾಮೆಂಟ್ ಮಾಡಲಿಕ್ಕೆ ಹೇಗೆ ಸಾಧ್ಯ? ಹಾಗಾದರೆ ಇವರನ್ನು ದುರುದ್ದೇಶ ಪೂರ್ವಕವಾಗಿ ಅಮಾನತು ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಹಾಗೂ ಅಮಾನತು ಮಾಡಿರುವುದು ಕಾನೂನು ಬಾಹಿರವಾಗಿದೆ ಅಲ್ಲವೇ?

ಇನ್ನು ಈ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆದು ವಿಚಾರಣಾಧಿಕಾರಿಗಳು ಭಾಗಶಃ ಎಂದು ವಿಚಾರಣಾ ಫಲಿತಾಂಶ ವರದಿ ನೀಡಿದ್ದಾರೆ.  ಆ ವರದಿಯ ಆಧಾರದ ಮೇಲೆ ನೀತಿ ಸಂಹಿತೆ ಉಲ್ಲಘನೆ ಪ್ರಕಾರಣದಲ್ಲಿ ನಿವೃತ್ತಿ ಆಗುವುದಕ್ಕಿಂತ ಮುಂಚೆ 13 ದಿನ ಮೊದಲು ಅಮಾನತಾದ ಜೆ.ಎಂ.ಫೈಜ್ (ಆಗಿನ ವಿಭಾಗೀಯ ನಿಯಂತ್ರಣಾಧಿಕಾರಿ) ಅವರು ಎಂ.ಎನ್. ಇಳಕಲ್ ಅವರನ್ನು ವ್ಯಯಕ್ತಿಯ ದ್ವೇಷದಿಂದ ವಜಾ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು.

ಇಳಕಲ್ ಅವರು ಮಾಡದ ತಪ್ಪಿಗೆ ಕಾನೂನು ಬಾಹಿರವಾಗಿ ಅವರನ್ನು ವಜಾ ಮಾಡಿರುವುದು ತಪ್ಪಲ್ಲವೇ?. ಈ ವಿಷಯದಲ್ಲಿ ಎಂ.ಎನ್.ಇಳಕಲ್ ಅವರ ವಜಾ ಪ್ರಕರಣ ಸದ್ಯ ಕಾರ್ಮಿಕ ನ್ಯಾಯಾಲದಲ್ಲಿ ನಡೆಯುತ್ತಿದ್ದು ಇಲ್ಲಿ ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಇಳಕಲ್‌ ಹೇಳುತ್ತಿದ್ದಾರೆ.

Deva
the authorDeva

Leave a Reply

error: Content is protected !!