ಬೆಂಗಳೂರು: 1932 ರಲ್ಲೇ ಇತಿಹಾಸ ತಜ್ಞ ಡಾ.ಪಿ.ಬಿ. ದೇಸಾಯಿ ಅವರು ’ಮಿತಾಕ್ಷರ’ ಖ್ಯಾತಿಯ ವಿಜ್ಞಾನೇಶ್ವರರು ಕರ್ನಾಟಕದವರು ವಿಶೇಷವಾಗಿ ಗುಲಬರ್ಗಾ( ಈಗಿನ ಕಲಬುರಗಿ) ಜಿಲ್ಲೆಯ ಶಹಾಬಾದ್ ಬಳಿಯ ಮರತೂರು ಗ್ರಾಮದವರು ಎಂದು ಹಾಗೂ ಶಾಸನ ತಜ್ಞ ಮೈಸೂರಿನ ಸೀತಾರಾಮ ಜಾಗೀರದಾರರು, 64 ಸಾಲುಗಳ ಶಾಸನದ ಪೂರ್ತಿ ಪಾಠ ಓದಿ, ಅದರ ತಾರೀಖು 1123 ಜನವರಿ 6 ಎಂದು ಭಾಷಾಂತರಿಸಿ ಪ್ರಕಟಿಸಿದ್ದರು ಆದರೂ ನಮಗಿನ್ನೂ ಜಾಣ-ಕಿವುಡು.
ಕಲ್ಯಾಣ ಚಾಲುಕ್ಯ ಚಕ್ರವರ್ತಿ 6ನೇ ವಿಕ್ಷಮಾದಿತ್ಯನ ಆಸ್ಥಾನದಲ್ಲಿದ್ದ ವಿಜ್ಞಾನೇಶ್ವರರು ಹಿಂದೂ ಕಾನೂನಿಗೆ ಆಧಾರವಾದ ಮಿತಾಕ್ಷರ ಗ್ರಂಥವನ್ನು (1076-1126 ನಡುವೆ) ಬರೆದರು. ಬ್ರಿಟಿಷ್ ಆಡಳಿತ ವ್ಯವಸ್ಥೆಗೆ ಇಡೀ ಭಾರತಕ್ಕೆ ಅನ್ವಯಿಸಬಹುದಾದ ಒಂದು ಕಾನೂನು ಸಂಹಿತೆಯ ಅಗತ್ಯವಿತ್ತು. ಬಂಗಾಳ ಮತ್ತು ಅಸ್ಸಾಂಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳೂ ಈ ‘ಮಿತಾಕ್ಷರಾ’ದ ಹಿಂದೂ ಲಾ ಅಧಿಕೃತತೆಯನ್ನು ಒಪ್ಪಿಕೊಂಡವು.
ಆಸ್ತಿಯ ಹಕ್ಕುಗಳು, ದತ್ತಕ ಪದ್ಧತಿ, ಸ್ಥಿರ ಆಸ್ತಿಗಳ ಹಂಚಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದೂ ನ್ಯಾಯಶಾಸ್ತ್ರದ ನಿಲುವುಗಳನ್ನು ತೆಗೆದುಕೊಳ್ಳುವುದಕ್ಕೆ ತಜ್ಞರು ಈ ಪುಸ್ತಕದ ಮೊರೆಹೋಗುತ್ತಾರೆ. 90 ಬೇರೆ ಬೇರೆ ಧರ್ಮಗ್ರಂಥ, ಉಪನಿಷತ್ತು, ಧರ್ಮಸೂತ್ರಗಳನ್ನು ಅಧ್ಯಯನ ಮಾಡಿ ಬರೆದ ಗ್ರಂಥದ ಉಲ್ಲೇಖಗಳಿಲ್ಲದೇ ಭಾರತೀಯ ನ್ಯಾಯ ಪದ್ಧತಿ ಪೂರ್ಣಗೊಳ್ಳದು ಎಂಬಷ್ಟು ಪ್ರಭಾವ ವಿತಾಕ್ಷರದ್ದಾಗಿದೆ. ಮಧ್ಯಯುಗದಲ್ಲಿ ಮಿತಾಕ್ಷರವೇ ಸಂವಿಧಾನವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ವಿಜ್ಞಾನೇಶ್ವರರ ಪರಿಚಯ ನೀಡುವ ಎರಡು ಶಾಸನವು ಕಾಶಿಯ ವಿಶ್ವನಾಥ ದೇವಾಲಯ ಬಳಿ ದೊರೆತಿವೆ.
ಹೆನ್ರಿ ಥಾಮಸ್ ಕೋಲ್ ಬ್ರೂಕ್, ಈ ಪುಸ್ತಕವನ್ನು ಕ್ರಿ.ಶ.1810 ರಷ್ಟು ಹಿಂದೆಯೇ ಇಂಗ್ಲಿಷಿಗೆ ಅನುವಾದ ಮಾಡಿದರು. ಭಾರತದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಮಿತಾಕ್ಷರವು ಅತ್ಯುತ್ತಮ ಆಧಾರವಾಗಿದ್ದಿತು’ ಎಂದು ‘ಹಿಸ್ಟರಿ ಆಫ್ ಹಿಂದು ಧರ್ಮಶಾಸ್ತ್ರ’ ಎಂಬ ಕೃತಿಯಲ್ಲಿ ಮಹಾ ಮಹೋಪಾಧ್ಯಾಯ ಪಿ.ವಿ.ಕಾಣೆ ಅಭಿಪ್ರಾಯಪಡುತ್ತಾರೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ಅವರು ಮರತೂರಿನಲ್ಲಿ ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ (ನಿಯಮಿತ) ಸಂಘ ಸ್ಥಾಪಿಸಿ, ವಿಜ್ಞಾನೇಶ್ವರರ ಹೆಸರಲ್ಲಿ (2002)ಒಂದು ಸ್ಮಾರಕ ನಿರ್ಮಿಸಿದ್ದಾರೆ. ಗುಲಬರ್ಗಾ ವಿ.ವಿ. ಸಹ ಸಹಕರಿಸಿ, ಕಾನೂನು ವಿಭಾಗದ ಮೇಲ್ವಿಚಾರಣೆಯಲ್ಲಿ ಸಂಶೋಧನೆಗೆ ಅನುವು ಮಾಡಿಕೊಟ್ಟಿತು. ಈ ಕೇಂದ್ರಕ್ಕೆ ಅಖಿಲ ಭಾರತ ಮನ್ನಣೆಯೂ ದೊರೆತಿದೆ.
ಆದರೂ… ವಿಜ್ಞಾನೇಶ್ವರರ ಮರತೂರು ನಿರ್ಲಕ್ಷ್ಯ: ಮರತೂರಿನಲ್ಲಿ ಹತ್ತು ಹಲವು ದೇವಾಲಯಗಳಿವೆ. ಸುಮಾರು 800 ವರ್ಷಗಳ ಇತಿಹಾಸದ ಹತ್ತು ಹಲವು ಅಸ್ತಿತ್ವಗಳು ಕಣ್ಣ ಮುಂದಿವೆ. ಚಾಲುಕ್ಯ ಶೈಲಿಯ ಕಾಶಿ ವಿಶ್ವನಾಥ ಹಾಗೂ ಶಂಕರಲಿಂಗನ ದೇವಾಲಯವಿದೆ. ಹಿಂಭಾಗ ಪುರಾತನ ಪುಷ್ಕರಣಿ ಇದೆ. ತ್ರಿಕೂಟಾಚಲ ರಚನೆಯ ಈಶ್ವರ ದೇವಾಲಯ, ಇಲ್ಲೊಂದು ಕೋಟೆಯೂ ಇದೆ.
ಮರತೂರಿನಲ್ಲಿ ಚಾಲಕ್ಯರು 300 ದೇವಾಲಯಗಳು ಹಾಗೂ 300 ಬಾವಿಗಳಿದ್ದವು ಎಂದು ಇತಿಹಾಸ ಅರಚಿಕೊಳ್ಳುತ್ತದೆ. ಆದರೆ, ಬೆರಳೆಣಿಕೆಯಷ್ಟು ಸಿಗುವ ದೇವಾಲಯಗಳನ್ನು ಮುಳ್ಳು ಜಾಲಿ ಕಂಟಿಗಳು ಆವರಿಸಿಕೊಂಡಿವೆ. ಗರ್ಭಗುಡಿಗಳು ನಾಯಿಗಳ ಆವಾಸ ಸ್ಥಳಗಳಾಗಿವೆ. ಜನರಿಗೆ ಜೂಜು-ಮೋಜಿನ ತಾಣಗಳಾಗಿವೆ. ಕೆಲವು ದೇವಾಲಯಗಳ ಪ್ರಾಂಗಣಗಳು ದನಕರುಗಳ ಕೊಟ್ಟಿಗೆಗಳಾಗಿವೆ. ದ್ವಾರಪಾಲಕ ಶಿಲ್ಪಗಳು ಬೋರಲು ಬಿದ್ದಿವೆ. ಮುಳ್ಳು-ಕಂಟಿ ಆವರಿಸಿರುವ ಕೋಟೆಯ ಪ್ರವೇಶಕ್ಕೆ ದಾರಿ ಹುಡುಕಬೇಕು. ಬಹುತೇಕ ದೇವಾಲಯಗಳು ಜೀರ್ಣಾವಸ್ಥೆಯಲ್ಲಿವೆ.
ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ ನಿಯಮಿತ ನಂತರವಾದರೂ ಈ ಎಲ್ಲ ಸ್ಮಾರಕಗಳ ಸಂರಕ್ಷಣೆ-ಅಭಿವೃದ್ಧಿ ಯಾಗುವ ನಿರೀಕ್ಷೆ ಇತ್ತು. ಸರ್ಕಾರವು ಸಹ ಅರೆ ಕಾಸಿನ ಮಜ್ಜಿಗೆಯಷ್ಟು ಧನ ಸಹಾಯ ನೀಡಿ ಕೈತೊಳೆದುಕೊಂಡಿದೆ. ಮರತೂರಿಗೆ ರೈಲು ನಿಲ್ದಾಣವಿದೆ. ಗುಲಬರ್ಗಾದಿಂದ ಹೆಚ್ಚೆಂದರೆ 18 ಕಿ.ಮೀ. ದೂರವಿರುವ ಊರೇ ಐತಿಹಾಸಿಕ ದೃಷ್ಟಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಾಸ್ತವ ಹೀಗಿರುವಾಗ, ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿಗಳು, ವಾರಂಗಲ್ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು, ಬಹಮನಿ… ಹೀಗೆ ಸಾಲು ಸಾಲು ರಾಜವಂಶರಾಳಿದ ನಾಡು ಎಂದು ಬೀಗಲು ನಮಗೆ ಯಾವ ಹಕ್ಕಿದೆ ಎಂಬುದೇ ಪ್ರಶ್ನೆ.
Related

You Might Also Like
ಮೈಸೂರು ಅರಮನೆ ಸೇರಿದಂತೆ ಸೂಕ್ಷ್ಮ ವಲಯಗಳಲ್ಲಿ ಡ್ರೋನ್ ಹಾರಾಟ ನಿಷೇಧ
ಮೈಸೂರು: ಭಯೋತ್ಪಾದಕರು/ ದೇಶ ವಿರೋಧಿಗಳು ಡ್ರೋನ್ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ ಗಳು, ಪ್ಯಾರಿ-ಗ್ಲೈಡರ್ ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು ಸುವ್ಯವಸ್ಥೆಗೆ...
ಸೂಕ್ಷ್ಮ ವಲಯಗಳಲ್ಲಿ ಖಾಸಗಿ ಡ್ರೋನ್ ಚಟುವಟಿಕೆ ನಿಷೇಧ: ಡಿಸಿ ಬಸವರಾಜು
ಬೆಂಗಳೂರು ಗ್ರಾಮಾಂತರ: ಭಯೋತ್ಪಾದಕರು/ ದೇಶ ವಿರೋಧಿಗಳು ಡ್ರೋನ್ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ ಗಳು, ಪ್ಯಾರಿ-ಗ್ಲೈಡರ್ ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು...
ವೈದ್ಯರು, ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ರಾಜ್ಯ ಸರ್ಕಾರ ಅನುಮೋದನೆ...
ರಾಜ್ಯಾದ್ಯಂತ 7 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 40 ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ದಾಖಲೆಗಳು ವಶ
ಬೆಂಗಳೂರು: ರಾಜ್ಯಾದ್ಯಂತ 40 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದ್ದು, ಭ್ರಷ್ಟರ ಭೇಟಿಯಾಡುತ್ತಾ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಭಷ್ಟ್ರ ಅಧಿಕಾರಿಗಳ ವಿರುದ್ಧ ಅಕ್ರಮ...
BMTC: ಸಾರಿಗೆ ನೌಕರರಿಗೆ ಹಿಂಬಾಕಿ, ವೇತನ ಹೆಚ್ಚಳ ಮಾಡದಿದ್ದರೂ ಪ್ರಯಾಣಿಕರಿಗೆ ಹೊಸ ಹೊಸ ಯೋಜನೆ ಮಾತ್ರ ನಿಂತಿಲ್ಲ
ಬೆಂಗಳೂರು: ರಾಜ್ಯ ಸರ್ಕಾರಿ ಸಾರಿಗೆ ನೌಕರರಿಗೆ 2024ರ ಜನವರಿಯಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ ಕಳೆದ 2020ರ ಜನವರಿಯಿಂದ ಆಗಿರುವ ತೇತನ ಹೆಚ್ಚಳದ 38 ತಿಂಗಳ ಹಿಂಬಾಕಿ...
44ನೇ ವಯಸ್ಸಿಗೇ ಸಿಎಂ ಆಗಿ ಸಾಧನೆಗೈದ ಆರ್. ಗುಂಡೂರಾವ್: ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಸಿಎಂ ಆಗಿದ್ದಾಗ ನಾನು ಜನತಾ ಪಕ್ಷದಲ್ಲಿ ಇದ್ದೇ, ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಹೋಗಿದ್ದೇ ಎಂದು ಸಿಎಂ ಸಿದ್ದರಾಮಯ್ಯ...
ಸಾಮಾಜಿಕ ನ್ಯಾಯದ ಬದ್ಧತೆ ಇರಬೇಕು ತೋರಿಕೆಯಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ...
ಕೆಂಪೇಗೌಡ ಬಸ್ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಸಿಎಂ ಎನಿಸಿಕೊಂಡಿದ್ದ ಆರ್. ಗುಂಡೂರಾವ್ ಪ್ರತಿಮೆ ಅನಾವರಣ
ಬೆಂಗಳೂರು: ದಕ್ಷಿಣ ಏಷ್ಯಾದಲ್ಲೇ ಪ್ರಪ್ರಥಮ ಹಾಗೂ ಅತ್ಯಪೂರ್ವ ಎಂಬ ಖ್ಯಾತಿಯ ಕೆಂಪೇಗೌಡ ಸಾರಿಗೆ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಮುಖ್ಯ ಮಂತ್ರಿ ಎನಿಸಿಕೊಂಡಿದ್ದ ಪ್ರಾತ:ಸ್ಮರಣಿಯ ಆರ್. ಗುಂಡೂರಾವ್...
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಕೇಂದ್ರದ ಪಾಲು ₹4,195 ಕೋಟಿ ಬಿಡುಗಡೆಯಾಗಿಲ್ಲ. ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಕೇಂದ್ರದ ಪಾಲು ಸುಮಾರು ₹4,195 ಕೋಟಿ ಬಿಡುಗಡೆಯಾಗಿಲ್ಲ. ಈ ದಿಸೆಯಲ್ಲಿ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಕೇಂದ್ರವನ್ನು ಒತ್ತಾಯಿಸಿ ಬಾಕಿ...