CRIMENEWSನಮ್ಮಜಿಲ್ಲೆ

KKRTC: ಲಿಂಗಸುಗೂರು ಡಿಎಂ ಕಿರುಕುಳ- ವಿಷ ಸೇವಿಸಿದ ಚಾಲಕ ಆಸ್ಪತ್ರೆಗೆ ದಾಖಲು

ವಿಜಯಪಥ ಸಮಗ್ರ ಸುದ್ದಿ

ಲಿಂಗಸುಗೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಲಿಂಗಸುಗೂರು ಘಟಕದ ಘಟಕದ ವ್ಯವಸ್ಥಾಪಕ ಕಿರುಕುಳ ನೀಡಿದ್ದರಿಂದ ಮನನೊಂದು ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಡಿಪೋನಲ್ಲೇ ನಡೆದಿದೆ.

ಈ ಘಟನೆ ಗುರುವಾರ ಸಂಜೆ ನಡೆದಿದ್ದು, ಕೆಕೆಆರ್‌ಟಿಸಿ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ಶಿರೂರು ಎಂಬುವರೆ ವಿಷ ಸೇವಿಸಿದ ಚಾಲಕ. ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹೈದರಾಬಾದ್ ಮಾರ್ಗದಲ್ಲಿ ಡ್ಯೂಟಿ ಮಾಡುವ ಅಬ್ದುಲ್ ಶಿರೂರು ಅವರನ್ನು ಘಟಕದ ವ್ಯವಸ್ಥಾಪಕ ರಾಹುಲ್ ಹೊನಸೂರೆ ಅವರು ಬೇರೆ ಮಾರ್ಗದಲ್ಲಿ ಡ್ಯೂಟಿ ಮಾಡುವಂತೆ ಹೇಳಿದ್ದಾರೆ. ಅಲ್ಲದೆ ಹಳೇ ಬಸ್‌ ಕೊಟ್ಟು ಈ ಬಸ್‌ನಲ್ಲೇ ಡ್ಯೂಟಿ ಮಾಡಬೇಕು ಎಂದು ದಮ್ಕಿ ಹಾಕಿದ್ದಾರೆ. ಈ ವೇಳೆ ಘಟಕದ ಗೇಟಿನಲ್ಲಿ ವಾಗ್ವಾದ ನಡೆದಿದ್ದು ಬಳಿಕ ಮನನೊಂದ ಚಾಲಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇತ್ತ ಸೇವಾ ಹಿರಿತನ ಪರಿಗಣಿಸಿ ಆರು ತಿಂಗಳ ಕಾಲ ಒಂದೇ ಮಾರ್ಗದಲ್ಲಿ ಡ್ಯೂಟಿ ಮಾಡಲು ಘಟಕ ವ್ಯವಸ್ಥಾಪಕರೇ ಕೌನ್ಸಿನಿಂಗ್‌ನಲ್ಲಿ ಡ್ಯೂಟಿ ರೋಟ ಕೊಟ್ಟಿದ್ದಾರೆ. ಅದರಂತೆ ನಾನು ಹೈದರಾಬಾದ್ ಮಾರ್ಗದ ಡ್ಯೂಟಿ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಡ್ಯೂಟಿ ಸಂದರ್ಭದಲ್ಲಿ ಕೆಎಂಪಿಎಲ್ ತರುವಂತೆ ಹಾಗೂ ಹೈದರಾಬಾದ್ ತಲುಪಿದ ನಂತರ ಡೇ ಡ್ಯೂಟಿ ಸೇರಿದಂತೆ ಹಲವು ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.

ಹೀಗಿದ್ದರೂ ಇಷ್ಟು ದಿನ ಸಹಿಸಿಕೊಂಡಿದ್ದೆ. ಇಂದು ರಾತ್ರಿ ಹೈದರಾಬಾದ್‌ಗೆ ಹೋಗಿ ಬೆಳಗ್ಗೆ ವಾಪಸ್ ಬರುವಂತೆ ಹೇಳಿದರು. ವಿಶ್ರಾಂತಿ ಇಲ್ಲದೇ ಡ್ಯೂಟಿ ಮಾಡಲು ನನ್ನಿಂದ ಆಗಲ್ಲ ಎಂದಾಗ ಅಮಾನತು ಮಾಡುವುದಾಗಿ ಬೆದರಿಸಿದರು. ಇದರಿಂದ ನೊಂದು ಕ್ರಿಮಿನಾಶಕ ಸೇವಿಸಿದ್ದೇನೆ. ವ್ಯವಸ್ಥಾಪಕರನ್ನು ಅಮಾನತು ಮಾಡಬೇಕು. ಉಳಿದ ಚಾಲಕರು ನೆಮ್ಮದಿಯಿಂದ ಕೆಲಸ ಮಾಡುವಂತಾಗಬೇಕು ಎಂದು ಚಾಲಕ ಅಬ್ದುಲ್ ಶಿರೂರು ಹೇಳಿದ್ದಾರೆ.

ಘಟಕದ ವ್ಯವಸ್ಥಾಪಕರ ಕಿರುಕುಳದಿಂದ ಬೇಸತ್ತು ಐದು ತಿಂಗಳ ಹಿಂದೆ ಚಾಲಕ ಮಹ್ಮದ್ ರಫಿ ಎಂಬುವರು ಕುಟಂಬ ಸಮೇತ ಬಂದು ಘಟಕದ ಎದುರು ವಿಷ ಕುಡಿಯಲು ಯತ್ನಿಸಿದ್ದರು. ಅಲ್ಲದೆ ಇತ್ತೀಚೆಗೆ ವಿದ್ಯಾರ್ಥಿಗಳು ಬಸ್‌ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಬಸ್‌ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದರೆ, ಶಾಲೆ ಕಲಿಲಿಕೆ ಹಣಕೊಟ್ಟು ಹೋಗುತ್ತೀರಿ ಬಸ್‌ ಮಾತ್ರ ನಿಮಗೆ ಫ್ರೀಯಾಗಿ ಬೇಕಾ ಎಂದು ಅಸಭ್ಯವಾಗಿ ವರ್ತಿಸಿದ ಈ ಡಿಎಂ.

ಇದಿಷ್ಟೆ ಅಲ್ಲದೆ ಚಾಲಕರಿಗೆ ನೀವು ಡೀಸೆಲ್‌ ಕುಡಿಸಿಕೊಂಡು ಬಸ್‌ ತರುತ್ತೀರಿ ನಿಮಗೆ ಬಸ್‌ ಓಡಿಸುವುದಕ್ಕೆ ಬರುವುದಿಲ್ಲ ಎಂದು ಚಾಲಕರ ವೇತನದಲ್ಲಿ ಡೀಸೆಲ್‌ ಹಣವನ್ನು ಕಡಿತ ಮಾಡಿಕೊಳ್ಳುವಂತ ನಡೆಯನ್ನು ತೋರಿದ್ದಾರೆ ಈ ಡಿಎಂ ಇಷ್ಟಾದರೂ ಕೂಡ ಮೇಲಧಿಕಾರಿಗಳು ಈತನ ಬಗ್ಗೆ ಯಾವುದೇ ರೀತಿಯ ಸಂಸ್ಥೆಯಲ್ಲಿ ಶಿಸ್ತು ಕ್ರಮ ತೆಗೆದುಕೊಂಡಿಲ್ಲ ಎಂದು ಘಟಕದ ನೌಕರರು ಆರೋಪಿಸಿದ್ದಾರೆ.

Deva
the authorDeva

Leave a Reply

error: Content is protected !!