Thu. Feb 6th, 2025
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳೂ ನೌಕರರ ವರ್ಗದವರಿಗೆ ಇದೇ ಏ.26 ಮತ್ತು ಮೇ 7ರಂದು ರಾಜ್ಯದಲ್ಲಿ ನಡೆಯಲಿರುವ 2 ಹಂತದ ಲೋಕಸಭಾ ಚುನಾವಣೆಗೆ ವೇತನ ಸಹಿತ ರಜೆ ನೀಡಲಾಗುತ್ತಿದೆ.

vijayapatha.in - ವಿಜಯಪಥ.ಇನ್‌ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ.   ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ. 

ಅದೇ ರೀತಿ ಸಾರಿಗೆ ನಿಗಮಗಳ ಕೇಂದ್ರ ಕಚೇರಿಗಳು, ವಿಭಾಗದ ಕಚೇರಿಗಳು , ಮುದ್ರಣಾಲಯ ಹಾಗೂ ಕಾರ್ಯಾಗಾರಗಳು ಹೀಗೆ ಎಲ್ಲರಿಗೂ ಚುನಾವಣೆ ನಡೆಯುವ ಎರಡು ದಿನಗಳ ಕಾಲ ರಜೆಯನ್ನು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಘೋಷಣೆ ಮಾಡಿದ್ದಾರೆ.

ಆದರೆ ಜಾಲಕ – ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳಿಗೆ ಡ್ಯೂಟಿಗೆ ಹತ್ತುವ ಮೊದಲು ಮತ್ತು ಡ್ಯೂಟಿ ಇಳಿದ ನಂತರ ಮತ ಚಲಾಯಿಸಲು ಸೂಚಿಸಿದ್ದಾರೆ. ಇದು ತಾರತಮ್ಯತೆಯ ಆದೇಶವಲ್ಲವೇ? ಇನ್ನು ನಮ್ಮದು ಅಗತ್ಯ ಸೇವೆಯಾಗಿರುವುದರಿಂದ ಓಕೆ ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಡ್ಯೂಟಿ ಮಾಡುವ ನಮ್ಮೆಲ್ಲ ಸಿಬ್ಬಂದಿಗಳು ಒಂದೇ ಊರಿನಲ್ಲಿ ಇದ್ದರೆ ಮತ ಚಲಾಯಿಸಬಹುದು. ಬೇರೆ ಊರಿನಲ್ಲಿ ಇದ್ದರೆ ವೋಟ್‌ ಮಾಡಲು ಹೇಗೆ ಸಾಧ್ಯವಾಗುತ್ತದೆ?

ಇನ್ನು ಪ್ರಮುಖವಾಗಿ ಇಡೀ ರಾಜ್ಯದ ಸಮಸ್ತ ಅಧಿಕಾರಿಗಳು, ನೌಕರರಿಗೂ ಮತದಾನದ ದಿನಗಳಂದು ಸಾರ್ವತ್ರಿಕ ರಜೆ ಮಂಜೂರು ಮಾಡಿದ್ದು ಅದೂ ಕೂಡ ವೇತನ ಸಹಿತ ರಜೆ ನೀಡಿದ್ದಾರೆ. ಅದರಂತೆ ಈ ದಿನಗಳಂದು ಜಾಲಕ – ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳಿಗೂ ರಜೆ ಕೊಡಿ ಇಲ್ಲ ಹೆಚ್ಚುವರಿ ವೇತನ ಮಂಜೂರು ಮಾಡುವ ಆದೇಶ ಹೊರಡಿಸಿ ಎಂದು ನೌಕರರು ಒತ್ತಾಯಿಸಿದ್ದಾರೆ.

ಇಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸಾರಿಗೆ ನಿಗಮಗಳ ಕೇಂದ್ರ ಕಚೇರಿಗಳು, ವಿಭಾಗದ ಕಚೇರಿಗಳು, ಮುದ್ರಣಾಲಯ ಹಾಗೂ ಕಾರ್ಯಾಗಾರಗಳು ಹೀಗೆ ಎಲ್ಲರಿಗೂ ಚುನಾವಣೆ ನಡೆಯುವ ಎರಡು ದಿನಗಳ ಕಾಲ ರಜೆಯನ್ನು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಘೋಷಣೆ ಮಾಡಿದ್ದು, ನಮಗೆ ಯಾವುದೇ ರಜೆಯನ್ನು ನೀಡಿಲ್ಲ. ಜತೆಗೆ ಕೆಲಸ ಮಾಡಿಕೊಂಡೇ ವೋಟ್‌ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ. ಇದು ಇವರಿಗೇ ಸರಿ ಎನಿಸುತ್ತದೆಯೇ?

ಇನ್ನು ಡ್ಯೂಟಿ ಮಾಡುವ ನಮಗೆ ರಜೆ ಕೊಡಿ ಇದು ಸಾಧ್ಯವಿಲ್ಲ ಎಂದರೆ ಹೆಚ್ಚುವರಿ ಅಂದರೆ ಡಬಲ್‌ ವೇತನ ಮಂಜೂರು ಮಾಡಿ ಆದೇಶ ಹೊರಡಿಸಿ ಅದನ್ನು ಬಿಟ್ಟು ಈ ರೀತಿ ಒಂದುಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಏಕೆ ಮಾಡುತ್ತೀರಿ? ಇದು ನಿಮಗೆ ನ್ಯಾಯವೆನಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಅದು ಏನೆ ಇರಲಿ ಡ್ಯೂಟಿ ಮಾಡದೆ ಮನೆಯಿಂದ ಬಂದು ವೋಟ್‌ ಮಾಡಿ ಹೋಗುವವರಿಗೆ ವೇತನ ಸಹಿತ ರಜೆ ಕೊಡುತ್ತೀರಿ ಡ್ಯೂಟಿ ಮಾಡುವ ನಮಗೆ ಏಕೆ ಡಬಲ್‌ ವೇತನ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತೀರಿ? ನಾವು ಕೆಲಸ ಮಾಡುತ್ತಿಲ್ಲವೇ? ನಮಗೂ ಕಾನೂನಾತ್ಮಕವಾಗಿಯೇ ನಿರ್ಧಾರ ತೆಗೆದುಕೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಒಂದು ದೃಢ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಸಂಘಟನೆಗಳ ಮುಖಂಡರು ಏನು ಹೇಳುತ್ತಾರೋ ಅದರಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕೂಡಲೇ ಈ ಬಗ್ಗೆ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಕಾನೂನಿನಡಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲದೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಕೂಡ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

By Deva

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!