CrimeNEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಹುಚ್ಚು ಪ್ರಾಣಿ ಕಡಿತಕ್ಕೊಳಗಾದ ನೌಕರ 28 ದಿನಗಳವರೆಗೂ ರಜೆ ತೆಗೆದುಕೊಳ್ಳಬಹುದು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹುಚ್ಚು (ಆ್ಯಂಟಿ ರೇಬಿಸ್) ಪ್ರಾಣಿಯಿಂದ ಕಚ್ಚಿಸಿಕೊಂಡ ನೌಕರನು ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಬೇಕು ಎಂದು 2016ರರಲ್ಲೇ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜೇಂದರ್‌ ಕುಮಾರ ಕಟಾರಿಯಾ ಅವರು ಆದೇಶ ಹೊರಡಿಸಿದ್ದಾರೆ.

ಈ ಕುರಿತು 27-05-1975ರಲ್ಲಿ ಸ್ಪಷ್ಟ ನಿರ್ದೇಶನವಿದೆ. ಮುಂದುವರಿದಂತೆ, ಹುಚ್ಚುಪ್ರಾಣಿ ಕಡಿದ ಚುಚ್ಚುಮದ್ದಿನ ಚಿಕಿತ್ಸಾ ಪದ್ಧತಿಯು ಬದಲಾವಣೆಗೊಂಡಿದ್ದು, ನಿರ್ದಿಷ್ಟ ಅಂತರಗಳಲ್ಲಿ ಒಟ್ಟು 0.3.7.28ನೇ ದಿವಸದ ಚುಚ್ಚುಮದ್ದು ನೀಡುವ ಪದ್ಧತಿಯನ್ನು ಅನುಸರಿಸಲಾಗುತ್ತಿರುವುದಾಗಿ ತಿಳಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನುಬಂಧ-ಬಿ ಯಲ್ಲಿನ ನಿಯಮ-5 ನ್ನು ತಿದ್ದುಪಡಿ ಮಾಡಿ ಈ ಆದೇಶದ ದಿನಾಂಕದಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಹುಚ್ಚುಪ್ರಾಣಿ ಕಡಿದ ಸರ್ಕಾರಿ ನೌಕರನಿಗೆ ಚುಚ್ಚುಮದ್ದು ಪಡೆಯಬಹುದಾದ ವಾಸ್ತವ ದಿನಗಳಿಗೆ ಮಾತ್ರ ಮತ್ತು ಹುಚ್ಚುಪ್ರಾಣಿ ಕಡಿತದ ಪರಿಣಾಮವಾಗಿ ನಿರಂತರ ಚಿಕಿತ್ಸೆಯ ಅಗತ್ಯತೆಯ ಬಗ್ಗೆ ವೈದ್ಯರು ದೃಢೀಕರಿಸಿ ನೀಡುವ ವೈದ್ಯಕೀಯ ಪ್ರಮಾಣ ಪತ್ರ ಆಧಾರದ ಮೇರೆಗೆ ಗರಿಷ್ಠ 14 ದಿನಗಳಿಗೆ ಸೀಮಿತಗೊಳಿಸಿ ಸಾಂದರ್ಭಿಕ ರಜೆಯನ್ನು ಕೊಡಬಹುದು.

ಇಂಥ ರಜೆಯ ಹೊರತಾಗಿ ಇನ್ನೂ ಹೆಚ್ಚಿನ ರಜೆ ಬೇಕಾಗಿರುವಲ್ಲಿ ಅದನ್ನು ಗಳಿಕೆ ರಜೆ ಅಥವಾ ಹಕ್ಕಿನ ರಜೆ ಅಥವಾ ಅರ್ಧ ವೇತನ ರಜೆಯಾಗಿ ಪರಿಗಣಿಸಬೇಕು ಎಂದು ಮೇ 23 – 2016ರಂದೆ ಎಂಡಿ ಆದೇಶ ಹೊರಡಿಸಿದ್ದಾರೆ.

ಆದುದರಿಂದ. ಈ ಆದೇಶದಂತೆ ನಿಗಮದ ಅಧಿಕಾರಿ/ ನೌಕರರಿಗೂ (ತರಬೇತಿಯಲ್ಲಿರುವವರನ್ನು ಒಳಗೊಂಡಂತೆ) ಸಹ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವುದು. ಉಳಿದಂತೆ 27-05-1975ರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಸುತ್ತೋಲೆಯು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ.

ಆದರೆ, ಇತ್ತೀಚೆಗೆ ನಿಗಮಗಳ ಕೆಲ ಅಧಿಕಾರಿಗಳು ಇದನ್ನು ಪಾಲಿಸದೆ ಇಂಥ ಸಂದರ್ಭದಲ್ಲಿ ನೌಕರರಿಗೆ ರಜೆ ಕೊಡದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಹೀಗಾಗಿ ಇನ್ನಾದರೂ ಅಧಿಕಾರಿಗಳು 2016ರಲ್ಲೇ ಜಾರಿಗೆ ಬಂದಿರುವ ಈ ಆದೇಶವನ್ನು ಪಾಲಿಸಬೇಕು ಎಂದು ನೊಂದ ನೌಕರರು ಆಗ್ರಹಕಫರ್ವಕವಾಗಿ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ