KSRTC: ಹೆಂಡತಿ ತಂದೆ ನಿಧನರಾಗಿದ್ದಾರೆ ರಜೆ ಕೊಡಿ ಎಂದರೆ ಆಗಲ್ಲ ಡ್ಯೂಟಿಗ್ಹೋಗು ಎಂದ ಡಿಎಂ- ಎಲ್ಲಿದೆ ಮಾನವೀಯತೆ!

ಕನಕಪುರ: ತನ್ನ ಪತ್ನಿಯ ತಂದೆ ಅಂದರೆ ಹೆಣ್ಣುಕೊಟ್ಟ ಮಾವ ನಿಧನರಾಗಿದ್ದಾರೆ ಎಂಬ ವಿಷಯ ತಿಳಿದ ಚಾಲನಾ ಸಿಬ್ಬಂದಿಯೊಬ್ಬರು ಅಂತಿಮ ದರ್ಶನಕ್ಕೆ ಹೋಗಬೇಕು ರಜೆ ಕೊಡಿ ಎಂದರೆ ಕೆಎಸ್ಆರ್ಟಿಸಿ ಕನಕಪುರ ಘಟಕದ ಪ್ರಭಾರ ಘಟಕ ವ್ಯವಸ್ಥಾಪಕ ರಜೆ ಕೊಡದೆ ದೌರ್ಜನ್ಯದಿಂದ ನಡೆದುಕೊಂಡಿರುವ ಘಟನೆ ನಡೆದಿದೆ.
ಸ್ವಂತ ಹೆಂಡತಿಯ ಅಪ್ಪ ನಿಧನರಾಗಿದ್ದಾರೆ ಅವರ ಅಂತಿಮ ದರ್ಶನಕ್ಕೆ ಹೋಗಬೇಕು ಎಂದರೂ ಇಲ್ಲ ನೀನು ಡ್ಯೂಟಿಗೆ ಹೋಗು ಎಂದು ಹೇಳುತ್ತಾರೆ ಎಂದರೆ ಇವರನ್ನು ಮನುಷ್ಯರು ಅನ್ನಬೇಕೋ ಅಥವಾ ಇನ್ನೇನು ಅಂತ ತಿಳಿದುಕೊಳ್ಳಬೇಕೊ ಹೇಳಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ವಿಭಾಗ ಕನಕಪುರ ಘಟಕದ ಪ್ರಭಾರ ಘಟಕ ವ್ಯವಸ್ಥಾಪಕ ನರಸಿಂಹರಾಜು ಎಂಬುವವರೇ ಈ ದರ್ಪ ಹಾಗೂ ದೌರ್ಜನ್ಯವನ್ನು ಘಟಕದಲ್ಲಿ ನಿರ್ವಾಹಕರಾಗಿರುವ ಉತ್ತರ ಕರ್ನಾಟಕ ಭಾಗದ ಕಂಡಕ್ಟರ್ ಒಬ್ಬರ ಮೇಲೆ ಎಸಗಿರುವವರು.
ಕಂಡಕ್ಟರ್ ಏ.17 ರಂದು ಕರ್ತವ್ಯ ನಿರತರಾಗಿದ್ದ ವೇಳೆ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ತನ್ನ ಹೆಂಡತಿಯ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿ ಬರುತ್ತದೆ. ಆ ಬಳಿಕ ಅವರು ಹೆಂಡತಿಯ ಮೂಲಕ ಅದನ್ನು ಖಚಿತಪಡಿಸಿಕೊಳ್ಳುತ್ತಾರೆ. ತದನಂತರ ನಿರ್ವಾಹಕರು ಪ್ರಭಾರ ಘಟಕ ವ್ಯವಸ್ಥಾಪಕ ನರಸಿಂಹರಾಜು ಅವರಿಗೆ ಕರೆ ಮಾಡುತ್ತಾರೆ. ಆದರೆ, ಆ ಕರೆಯನ್ನು ಅವರು ಸ್ವೀಕರಿಸುವುದಿಲ್ಲ. ಹಾಗಾಗಿ ನಿರ್ವಾಹಕರು ಮೂಲತಃ ಉತ್ತರ ಕರ್ನಾಟಕದವರಾಗಿದ್ದರಿಂದ ಅವರು ತನ್ನ ಮಾವನ ಅಂತಿಮ ದರ್ಶನಕ್ಕೆ ಬೇಗನೇ ಹೊರಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು.
ಆ ಪರಿಸ್ಥಿತಿ ಎದುರಾಗಿದ್ದರಿಂದ ಅವರು ರಾತ್ರಿಪಾಳಿಯ ವಾಹನವನ್ನು ರಾತ್ರಿ ಘಟಕಕ್ಕೆ ತೆಗೆದುಕೊಂಡು ಬಂದಿದ್ದಾರೆ. ಇತ್ತ ಮಾನವೀಯತೆ ದೃಷ್ಟಿಯಿಂದ ಹೇಳುವುದಾದರೆ ಘಟಕ ವ್ಯವಸ್ಥಾಪಕರು ಪರ್ಯಾಯ ನಿರ್ವಾಹಕರನ್ನು ಆ ಮಾರ್ಗಕ್ಕೆ ನಿಯೋಜಿಸಿ, ಈ ನಿರ್ವಾಹಕರನ್ನು ಅವರ ಮಾವನ ಅಂತ್ಯಕ್ರಿಯೆಗೆ ಕಳುಹಿಸಬೇಕಾಗಿತ್ತು. ಇದು ಅವರ ಕರ್ತವ್ಯ ಕೂಡ ಆಗಿತ್ತು.
ಆದರೆ ಡಿಎಂ ಅವರು ದರ್ಪ ದೌರ್ಜನ್ಯದಿಂದ ಆತನನ್ನು ಪ್ರಾಣಿಯ ರೀತಿಯಲ್ಲಿ ನಡೆಸಿಕೊಂಡು ಈ ಕತೆಯಲ್ಲ ಹೇಳಬೇಡ ಮೊದಲು ಗಾಡಿ ತೆಗೆದುಕೊಂಡು ಜಾಗಖಾಲಿ ಮಾಡು ಎಂದು ದರ್ಪದಿಂದ ನಡೆದುಕೊಂಡಿದ್ದಾರೆ.
ಆದರೂ ಮಾವನ ಅಂತಿಮ ದರ್ಶನಕ್ಕೆ ಹೋಗಲೇ ಬೇಕು ನನಗೆ ರಜೆ ಕೊಡಿ ಎಂದು ನಿರ್ವಾಹಕ ಹಠ ಮಾಡಿಕೊಂಡು ಹೋಗಿದ್ದಾರೆ ಎಂದು ಘಟಕದ ಸಿಬ್ಬಂದಿಯೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ. ಅಲ್ಲದೆ ನಿರ್ವಾಹಕನೊಂದಿಗೆ ಡಿಎಂ ನಡೆದುಕೊಂಡಿರುವುದನ್ನು ವಿಡಿಯೋ ಮಾಡಿ ಕಳಿಸಿದ್ದಾರೆ.
ದೌರ್ಜನ್ಯ ಇದೇನು ಮೊದಲೇನಲ್ಲ: ಪ್ರಭಾರ ಘಟಕ ವ್ಯವಸ್ಥಾಪಕರ ಈ ದರ್ಪ ದೌರ್ಜನ್ಯ ಇದೇನು ಮೊದಲೇನಲ್ಲ ಈ ಹಿಂದೆ ಈ ರೀತಿಯ ಹಲವಾರು ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ ಆದರೂ ಸಹ ಮೇಲಧಿಕಾರಿಗಳು ಇವರ ಮೇಲೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಇವರನ್ನು ವರ್ಗಾವಣೆ ಸಹ ಮಾಡದೆ ಇರುವುದನ್ನು ನೋಡಿದರೆ ಇದರಲ್ಲಿ ಮೇಲಧಿಕಾರಿಗಳ ಪಾತ್ರವೂ ಎದ್ದು ಕಾಣುತ್ತದೆ.
ಹಾಗಾದರೆ ನೌಕರರು ನ್ಯಾಯವನ್ನು ಕೇಳಲು ಯಾರ ಬಳಿ ಹೋಗಬೇಕು. ಸಂಬಂಧಿಕರು ಸತ್ತರು ಕೂಡ ಅವರ ಅಂತಿಮ ದರ್ಶಕ್ಕೆ ಹೋಗಲಾರದ ಪರಿಸ್ಥಿತಿಯಲ್ಲಿ ನಾವು ಡ್ಯೂಟಿ ಮಾಡಬೇಕು ಎಂದರೆ ನಾವು ದುಡಿಯುತ್ತಿರುವುದು ಏತಕ್ಕಾಗಿ, ನಮ್ಮವರು ತಮ್ಮವರು ಎಂಬುದಕ್ಕೆ ಇಲ್ಲಿ ಜಾಗವಿಲ್ಲ ಎಂದರೆ ನಾವು ಪ್ರಾಣಿಗಳ? ಪ್ರಾಣಿಗಳಿಗೂ ಸಾವು ನೋವಿನ ಮಿಡಿತವಿರುತ್ತದೆ. ಆದರೆ ನಮ್ಮ ಸಂಸ್ಥೆಯಲ್ಲಿರುವ ಬಹುತೇಕ ಅಧಿಕಾರಿಗಳಿಗೆ ಇದು ಇಲ್ಲದಿರುವುದು ಭಾರಿ ನೋವಿನ ಸಂಗತಿ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related

You Might Also Like
BMTC ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ: ಕಠಿಣ ಕ್ರಮಕ್ಕೆ ಆಯುಕ್ತರು, ಗೃಹ ಸಚಿವರಿಗೆ ಸಾರಿಗೆ ಸಚಿವರ ಆಗ್ರಹ
ಬೆಂಗಳೂರು: ತಾನು ಕೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಮೂರು ದಿನದ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಗೆ ಮಹಿಳಾ ಟೆಕ್ಕಿ ಉದ್ಯೋಗಿಯೊಬ್ಬರು ಚಪ್ಪಲಿಯಿಂದ...
KSRTC: ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ-ಸಾರಿಗೆ ಸಚಿವರ ನಡುವೆ ಏನೋ ಸರಿ ಇಲ್ಲ..!
ಇಂದು ನಡೆಯಬೇಕಿದ್ದ ಸಭೆ ಮಾಹಿತಿಯೇ ಇಲ್ಲದೆ ರದ್ದು ಇದಕ್ಕೆ ಸಿಎಂ ಸಾರಿಗೆ ಸಚಿವರ ನಡುವೆ ಹೊಂದಾಣಿಕೆ ಕೊರತೆ ಕಾರಣವೆ? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ...
BMTC: ಸಾಮಾನ್ಯ ಪಾಳಿಯ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳ ನಿಯೋಜನೆ ಮಾಡದಿರಲು ತೀರ್ಮಾನ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳ ಸಾಮಾನ್ಯ ಪಾಳಿಯಲ್ಲಿ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡದಿರಲು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರ (ಆ) ಅಧ್ಯಕ್ಷತೆಯಲ್ಲಿ...
BMTC: 79ರ ಬದಲು 34ಕಿಮೀ ಕಾರ್ಯಾಚರಣೆ ಮಾಡಿ ಆರ್ಥಿಕ ನಷ್ಟಮಾಡಿದ ಆರೋಪ- ಚಾಲನಾ ಸಿಬ್ಬಂದಿಗೆ ಡಿಎಂ ಮೆಮೋ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸುಮಾರು 3500 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ಕಾರಣರಾಗಿರುತ್ತೀರಿ ಎಂದು ಆರೋಪಿಸಿ ಚಾಲನಾ ಸಿಬ್ಬಂದಿ ವಿರುದ್ಧ ಘಟಕ ವ್ಯವಸ್ಥಾಪಕರು ಆರೋಪಣ ಪತ್ರ...
ಹಾಳಾಗಿರುವ ಒಳಚರಂಡಿ ಸ್ಲ್ಯಾಬ್ ಬದಲಾಯಿಸಿ: ಅಧಿಕಾರಿಗಳಿಗೆ ಸ್ನೇಹಲ್ ತಾಕೀತು
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಜಲಮಡಂಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೂರ್ವ ವಲಯ...
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ...
ಗ್ರಾಪಂ- ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ: ಜಿಪಂ ಸಿಇಒ ಡಾ.ಅನುರಾಧ
ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವಕಾಂಕ್ಷಿ ಕಾರ್ಯಕ್ರಮ ಗ್ರಾಮಠಾಣಾ ವ್ಯಾಪ್ತಿಯ ಮನೆ ಬಾಗಿಲಿಗೇ ಈ ಸ್ವತ್ತು ಖಾತೆ ನೀಡುವ ಯೋಜನೆ ಆರಂಭ ಬೆಂಗಳೂರು ಗ್ರಾಮಾಂತರ: ಪಂಚಾಯತ್ ರಾಜ್ ಮತ್ತು...
ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ...
ಖಾಸಗಿ ಕಂಪನಿಯ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡ ವಕೀಲ ಶಿವರಾಜುರಿಗೆ ಅಭಿನಂದನೆಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್.ಬಿ.ಶಿವರಾಜು ಅವರಿಗೆ ಕೈ...