CRIMENEWSನಮ್ಮರಾಜ್ಯ

KSRTC: ಹೆಂಡತಿ ತಂದೆ ನಿಧನರಾಗಿದ್ದಾರೆ ರಜೆ ಕೊಡಿ ಎಂದರೆ ಆಗಲ್ಲ ಡ್ಯೂಟಿಗ್ಹೋಗು ಎಂದ ಡಿಎಂ- ಎಲ್ಲಿದೆ ಮಾನವೀಯತೆ!

ವಿಜಯಪಥ ಸಮಗ್ರ ಸುದ್ದಿ

ಕನಕಪುರ: ತನ್ನ ಪತ್ನಿಯ ತಂದೆ ಅಂದರೆ ಹೆಣ್ಣುಕೊಟ್ಟ ಮಾವ ನಿಧನರಾಗಿದ್ದಾರೆ ಎಂಬ ವಿಷಯ ತಿಳಿದ ಚಾಲನಾ ಸಿಬ್ಬಂದಿಯೊಬ್ಬರು ಅಂತಿಮ ದರ್ಶನಕ್ಕೆ ಹೋಗಬೇಕು ರಜೆ ಕೊಡಿ ಎಂದರೆ ಕೆಎಸ್‌ಆರ್‌ಟಿಸಿ ಕನಕಪುರ ಘಟಕದ ಪ್ರಭಾರ ಘಟಕ ವ್ಯವಸ್ಥಾಪಕ ರಜೆ ಕೊಡದೆ ದೌರ್ಜನ್ಯದಿಂದ ನಡೆದುಕೊಂಡಿರುವ ಘಟನೆ ನಡೆದಿದೆ.

ಸ್ವಂತ ಹೆಂಡತಿಯ ಅಪ್ಪ ನಿಧನರಾಗಿದ್ದಾರೆ ಅವರ ಅಂತಿಮ ದರ್ಶನಕ್ಕೆ ಹೋಗಬೇಕು ಎಂದರೂ ಇಲ್ಲ ನೀನು ಡ್ಯೂಟಿಗೆ ಹೋಗು ಎಂದು ಹೇಳುತ್ತಾರೆ ಎಂದರೆ ಇವರನ್ನು ಮನುಷ್ಯರು ಅನ್ನಬೇಕೋ ಅಥವಾ ಇನ್ನೇನು ಅಂತ ತಿಳಿದುಕೊಳ್ಳಬೇಕೊ ಹೇಳಿ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಮನಗರ ವಿಭಾಗ ಕನಕಪುರ ಘಟಕದ ಪ್ರಭಾರ ಘಟಕ ವ್ಯವಸ್ಥಾಪಕ ನರಸಿಂಹರಾಜು ಎಂಬುವವರೇ ಈ ದರ್ಪ ಹಾಗೂ ದೌರ್ಜನ್ಯವನ್ನು ಘಟಕದಲ್ಲಿ ನಿರ್ವಾಹಕರಾಗಿರುವ ಉತ್ತರ ಕರ್ನಾಟಕ ಭಾಗದ ಕಂಡಕ್ಟರ್‌ ಒಬ್ಬರ ಮೇಲೆ ಎಸಗಿರುವವರು.

ಕಂಡಕ್ಟರ್‌ ಏ.17 ರಂದು ಕರ್ತವ್ಯ ನಿರತರಾಗಿದ್ದ ವೇಳೆ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ತನ್ನ ಹೆಂಡತಿಯ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿ ಬರುತ್ತದೆ. ಆ ಬಳಿಕ ಅವರು ಹೆಂಡತಿಯ ಮೂಲಕ ಅದನ್ನು ಖಚಿತಪಡಿಸಿಕೊಳ್ಳುತ್ತಾರೆ. ತದನಂತರ ನಿರ್ವಾಹಕರು ಪ್ರಭಾರ ಘಟಕ ವ್ಯವಸ್ಥಾಪಕ ನರಸಿಂಹರಾಜು ಅವರಿಗೆ ಕರೆ ಮಾಡುತ್ತಾರೆ. ಆದರೆ, ಆ ಕರೆಯನ್ನು ಅವರು ಸ್ವೀಕರಿಸುವುದಿಲ್ಲ. ಹಾಗಾಗಿ ನಿರ್ವಾಹಕರು ಮೂಲತಃ ಉತ್ತರ ಕರ್ನಾಟಕದವರಾಗಿದ್ದರಿಂದ ಅವರು ತನ್ನ ಮಾವನ ಅಂತಿಮ ದರ್ಶನಕ್ಕೆ ಬೇಗನೇ ಹೊರಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿತ್ತು.

ಆ ಪರಿಸ್ಥಿತಿ ಎದುರಾಗಿದ್ದರಿಂದ ಅವರು ರಾತ್ರಿಪಾಳಿಯ ವಾಹನವನ್ನು ರಾತ್ರಿ ಘಟಕಕ್ಕೆ ತೆಗೆದುಕೊಂಡು ಬಂದಿದ್ದಾರೆ. ಇತ್ತ ಮಾನವೀಯತೆ ದೃಷ್ಟಿಯಿಂದ ಹೇಳುವುದಾದರೆ ಘಟಕ ವ್ಯವಸ್ಥಾಪಕರು ಪರ್ಯಾಯ ನಿರ್ವಾಹಕರನ್ನು ಆ ಮಾರ್ಗಕ್ಕೆ ನಿಯೋಜಿಸಿ, ಈ ನಿರ್ವಾಹಕರನ್ನು ಅವರ ಮಾವನ ಅಂತ್ಯಕ್ರಿಯೆಗೆ ಕಳುಹಿಸಬೇಕಾಗಿತ್ತು. ಇದು ಅವರ ಕರ್ತವ್ಯ ಕೂಡ ಆಗಿತ್ತು.

ಆದರೆ ಡಿಎಂ ಅವರು ದರ್ಪ ದೌರ್ಜನ್ಯದಿಂದ ಆತನನ್ನು ಪ್ರಾಣಿಯ ರೀತಿಯಲ್ಲಿ ನಡೆಸಿಕೊಂಡು ಈ ಕತೆಯಲ್ಲ ಹೇಳಬೇಡ ಮೊದಲು ಗಾಡಿ ತೆಗೆದುಕೊಂಡು ಜಾಗಖಾಲಿ ಮಾಡು ಎಂದು ದರ್ಪದಿಂದ ನಡೆದುಕೊಂಡಿದ್ದಾರೆ.

ಆದರೂ ಮಾವನ ಅಂತಿಮ ದರ್ಶನಕ್ಕೆ ಹೋಗಲೇ ಬೇಕು ನನಗೆ ರಜೆ ಕೊಡಿ ಎಂದು ನಿರ್ವಾಹಕ ಹಠ ಮಾಡಿಕೊಂಡು ಹೋಗಿದ್ದಾರೆ ಎಂದು ಘಟಕದ ಸಿಬ್ಬಂದಿಯೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ. ಅಲ್ಲದೆ ನಿರ್ವಾಹಕನೊಂದಿಗೆ ಡಿಎಂ ನಡೆದುಕೊಂಡಿರುವುದನ್ನು ವಿಡಿಯೋ ಮಾಡಿ ಕಳಿಸಿದ್ದಾರೆ.

ದೌರ್ಜನ್ಯ ಇದೇನು ಮೊದಲೇನಲ್ಲ: ಪ್ರಭಾರ ಘಟಕ ವ್ಯವಸ್ಥಾಪಕರ ಈ ದರ್ಪ ದೌರ್ಜನ್ಯ ಇದೇನು ಮೊದಲೇನಲ್ಲ ಈ ಹಿಂದೆ ಈ ರೀತಿಯ ಹಲವಾರು ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ ಆದರೂ ಸಹ ಮೇಲಧಿಕಾರಿಗಳು ಇವರ ಮೇಲೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಇವರನ್ನು ವರ್ಗಾವಣೆ ಸಹ ಮಾಡದೆ ಇರುವುದನ್ನು ನೋಡಿದರೆ ಇದರಲ್ಲಿ ಮೇಲಧಿಕಾರಿಗಳ ಪಾತ್ರವೂ ಎದ್ದು ಕಾಣುತ್ತದೆ.

ಹಾಗಾದರೆ ನೌಕರರು ನ್ಯಾಯವನ್ನು ಕೇಳಲು ಯಾರ ಬಳಿ ಹೋಗಬೇಕು. ಸಂಬಂಧಿಕರು ಸತ್ತರು ಕೂಡ ಅವರ ಅಂತಿಮ ದರ್ಶಕ್ಕೆ ಹೋಗಲಾರದ ಪರಿಸ್ಥಿತಿಯಲ್ಲಿ ನಾವು ಡ್ಯೂಟಿ ಮಾಡಬೇಕು ಎಂದರೆ ನಾವು ದುಡಿಯುತ್ತಿರುವುದು ಏತಕ್ಕಾಗಿ, ನಮ್ಮವರು ತಮ್ಮವರು ಎಂಬುದಕ್ಕೆ ಇಲ್ಲಿ ಜಾಗವಿಲ್ಲ ಎಂದರೆ ನಾವು ಪ್ರಾಣಿಗಳ? ಪ್ರಾಣಿಗಳಿಗೂ ಸಾವು ನೋವಿನ ಮಿಡಿತವಿರುತ್ತದೆ. ಆದರೆ ನಮ್ಮ ಸಂಸ್ಥೆಯಲ್ಲಿರುವ ಬಹುತೇಕ ಅಧಿಕಾರಿಗಳಿಗೆ ಇದು ಇಲ್ಲದಿರುವುದು ಭಾರಿ ನೋವಿನ ಸಂಗತಿ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Deva
the authorDeva

Leave a Reply

error: Content is protected !!